ಸೇನಾಧಿಕಾರಿಗಳ ಜತೆಗಿನ ಸಭೆಯೊಂದರ ಉದಾಹರಣೆ ನೀಡಿದ ಅವರು, ‘ತಾಳ್ಮೆಯಿಂದ ಎಲ್ಲವನ್ನೂ ಆಲಿಸಿದ ದೇವೇಗೌಡರು, ಸಭೆಯ ಸಾರಾಂಶವನ್ನು ವಿವರಿಸಿದರು. ಆದರೆ, ಕೆಲವರು ಇವರು ಸಭೆಯಲ್ಲೇ ನಿದ್ರೆ ಮಾಡಿದ್ದಾರೆ ಎಂದೇ ಭಾವಿಸಿದ್ದರು. ಪ್ರತಿ ದಿನ ಹತ್ತಾರು ಸಭೆಗಳನ್ನು ನಡೆಸುತ್ತಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು ಸಹ ಕಡಿಮೆ. ಹೀಗಾಗಿ, ನಿದ್ರಾಹೀನತೆಯೂ ಅವರನ್ನು ಕಾಡುತ್ತಿತ್ತು’ ಎಂದು ವಿವರಿಸಿದರು.