<p><strong>ಬೆಂಗಳೂರು:</strong> ‘ಅಧಿಕಾರ ದಾಹ ಹೊಂದಿದ ನರಿ ಬುದ್ಧಿಯ ರಾಜಕೀಯ ಮುಖಂಡರು ಎಲ್ಲ ಪಕ್ಷಗಳಲ್ಲೂ ಇದ್ದಾರೆ’ ಎಂದು ಪ್ರಸಕ್ತ ರಾಜಕೀಯ ಸ್ಥಿತಿಯನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ವಿಶ್ಲೇಷಿಸಿದರು.</p>.<p>ದೇಸಿ ಪುಸ್ತಕ ಸಂಸ್ಥೆ ಜೈನ್ ಕಾಲೇಜಿನಲ್ಲಿ ಭಾನುವಾರ ಆಯೋ ಜಿಸಿದ್ದ ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾ ಕೃಷ್ಣ ಅವರ ‘ಒಂದು + ಮತ್ತು ನೂರು ಕಥೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ರಾಜಕೀಯದಲ್ಲಿ ನಾವು ನರಿಗಳು. ನಮಗೆ ರಾಜರಾಗುವ ಆಸೆ ಇರುತ್ತದೆ. ಆದರೆ, ನರಿಗಳು ರಾಜನಾಗಲು ಹುಲಿ, ಸಿಂಹಗಳು ಬಿಡುತ್ತವೆಯೇ? ಹೀಗಾಗಿ ಹುಲಿ, ಸಿಂಹಗಳನ್ನು ನಂಬಿಸಲು ನಾವೆಲ್ಲ ಬಣ್ಣ ಹಾಕಿಕೊಂಡಿದ್ದೇವೆ’ ಎಂದರು.</p>.<p>‘ಹೀಗೆ ಬಣ್ಣ ಹಾಕಿಕೊಂಡು ನಿಭಾಯಿಸುತ್ತಿರುವಾಗ ಒಮ್ಮೆ ಜೋರು ಮಳೆ ಬಿದ್ದು, ಹಚ್ಚಿದ್ದ ಬಣ್ಣ ನೀರಿನಲ್ಲಿ ತೋಯ್ದು ಹೋಗುತ್ತದೆ. ಈ ಪೀಡೆ ಹೋಯಿತು ಎಂದು ನಿಟ್ಟಿಸಿರು ಬಿಡುವ ವೇಳೆಗೆ ಆಕಾಶದಿಂದ ಹದ್ದು ಹಾರಿ ಬರುತ್ತದೆ. ಆ ಹದ್ದು ದೇವರೆಂದು ಭಾವಿಸಿ ನಾವು ಬಣ್ಣ ಕಳೆದುಕೊಂಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತೇವೆ. ಇದೇ ರಾಜಕೀಯ’ ಎಂದರು.</p>.<p>‘ರಾಜಕೀಯ ಪಕ್ಷಗಳಲ್ಲಿ ನರಿಗಳ ರೀತಿಯಲ್ಲಿ ನಾಯಕರು ಇದ್ದಂತೆ, ಬೊಗಳುವ ನಾಯಿಗಳಂಥ, ಹಾವು ಗಳಂಥ ನಾಯಕರೂ ಇದ್ದಾರೆ. ಅವು ಕೆಲವೊಮ್ಮೆ ಕಚ್ಚಿದರೆ ಇನ್ನೂ ಕೆಲವೊಮ್ಮೆ ಕಚ್ಚುವುದಿಲ್ಲ. ಕೆಲವು ಸಂದರ್ಭದಲ್ಲಿ ನಾವು ಎಲ್ಲಿದ್ದರೂ ಹುಡುಕಿಕೊಂಡು ಬಂದು ಕಚ್ಚಿ ಹೋಗುತ್ತವೆ’ ಎಂದು ಮಾರ್ಮಿಕವಾಗಿ ಹೇಳಿದರು.</p>.<p>‘ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಅತ್ಯಂತ ಅಮಾನವೀಯವಾದುದು. ಈ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಕೂಡಾ ಖಂಡನೀಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಟ ವಿಜಯ್ ರಾಘವೇಂದ್ರ ಮಾತನಾಡಿ, ‘ರಾಧಾಕೃಷ್ಣ ಅವರು ನನ್ನ ಗುರು. ಅವರು ವಿದ್ಯೆ ಮತ್ತು ಶಿಸ್ತು ಸೇರಿ ಎಲ್ಲವನ್ನೂ ಕಲಿಸಿದ್ದಾರೆ. ವಿಶೇಷವಾಗಿ ಕಾಲೇಜಿನಲ್ಲಿ ಓದುವಾಗ ನನಗೆ ಕಲೆಯ ಮಹತ್ವದ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದರು.</p>.<p>ಹೋರಾಟಗಾರ್ತಿ ಅಕ್ಕಯ್ ಪದ್ಮಸಾಲಿ, ನಿರಂಜನ್ ಆರ್. ಭಟ್, ಲೇಖಕ ಪ್ರೊ.ಕೆ. ಈ. ರಾಧಾಕೃಷ್ಣ, ಗಮಕಿ ಎಂ.ಆರ್. ಸತ್ಯನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಧಿಕಾರ ದಾಹ ಹೊಂದಿದ ನರಿ ಬುದ್ಧಿಯ ರಾಜಕೀಯ ಮುಖಂಡರು ಎಲ್ಲ ಪಕ್ಷಗಳಲ್ಲೂ ಇದ್ದಾರೆ’ ಎಂದು ಪ್ರಸಕ್ತ ರಾಜಕೀಯ ಸ್ಥಿತಿಯನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ವಿಶ್ಲೇಷಿಸಿದರು.</p>.<p>ದೇಸಿ ಪುಸ್ತಕ ಸಂಸ್ಥೆ ಜೈನ್ ಕಾಲೇಜಿನಲ್ಲಿ ಭಾನುವಾರ ಆಯೋ ಜಿಸಿದ್ದ ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾ ಕೃಷ್ಣ ಅವರ ‘ಒಂದು + ಮತ್ತು ನೂರು ಕಥೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ರಾಜಕೀಯದಲ್ಲಿ ನಾವು ನರಿಗಳು. ನಮಗೆ ರಾಜರಾಗುವ ಆಸೆ ಇರುತ್ತದೆ. ಆದರೆ, ನರಿಗಳು ರಾಜನಾಗಲು ಹುಲಿ, ಸಿಂಹಗಳು ಬಿಡುತ್ತವೆಯೇ? ಹೀಗಾಗಿ ಹುಲಿ, ಸಿಂಹಗಳನ್ನು ನಂಬಿಸಲು ನಾವೆಲ್ಲ ಬಣ್ಣ ಹಾಕಿಕೊಂಡಿದ್ದೇವೆ’ ಎಂದರು.</p>.<p>‘ಹೀಗೆ ಬಣ್ಣ ಹಾಕಿಕೊಂಡು ನಿಭಾಯಿಸುತ್ತಿರುವಾಗ ಒಮ್ಮೆ ಜೋರು ಮಳೆ ಬಿದ್ದು, ಹಚ್ಚಿದ್ದ ಬಣ್ಣ ನೀರಿನಲ್ಲಿ ತೋಯ್ದು ಹೋಗುತ್ತದೆ. ಈ ಪೀಡೆ ಹೋಯಿತು ಎಂದು ನಿಟ್ಟಿಸಿರು ಬಿಡುವ ವೇಳೆಗೆ ಆಕಾಶದಿಂದ ಹದ್ದು ಹಾರಿ ಬರುತ್ತದೆ. ಆ ಹದ್ದು ದೇವರೆಂದು ಭಾವಿಸಿ ನಾವು ಬಣ್ಣ ಕಳೆದುಕೊಂಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತೇವೆ. ಇದೇ ರಾಜಕೀಯ’ ಎಂದರು.</p>.<p>‘ರಾಜಕೀಯ ಪಕ್ಷಗಳಲ್ಲಿ ನರಿಗಳ ರೀತಿಯಲ್ಲಿ ನಾಯಕರು ಇದ್ದಂತೆ, ಬೊಗಳುವ ನಾಯಿಗಳಂಥ, ಹಾವು ಗಳಂಥ ನಾಯಕರೂ ಇದ್ದಾರೆ. ಅವು ಕೆಲವೊಮ್ಮೆ ಕಚ್ಚಿದರೆ ಇನ್ನೂ ಕೆಲವೊಮ್ಮೆ ಕಚ್ಚುವುದಿಲ್ಲ. ಕೆಲವು ಸಂದರ್ಭದಲ್ಲಿ ನಾವು ಎಲ್ಲಿದ್ದರೂ ಹುಡುಕಿಕೊಂಡು ಬಂದು ಕಚ್ಚಿ ಹೋಗುತ್ತವೆ’ ಎಂದು ಮಾರ್ಮಿಕವಾಗಿ ಹೇಳಿದರು.</p>.<p>‘ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಅತ್ಯಂತ ಅಮಾನವೀಯವಾದುದು. ಈ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಕೂಡಾ ಖಂಡನೀಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಟ ವಿಜಯ್ ರಾಘವೇಂದ್ರ ಮಾತನಾಡಿ, ‘ರಾಧಾಕೃಷ್ಣ ಅವರು ನನ್ನ ಗುರು. ಅವರು ವಿದ್ಯೆ ಮತ್ತು ಶಿಸ್ತು ಸೇರಿ ಎಲ್ಲವನ್ನೂ ಕಲಿಸಿದ್ದಾರೆ. ವಿಶೇಷವಾಗಿ ಕಾಲೇಜಿನಲ್ಲಿ ಓದುವಾಗ ನನಗೆ ಕಲೆಯ ಮಹತ್ವದ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದರು.</p>.<p>ಹೋರಾಟಗಾರ್ತಿ ಅಕ್ಕಯ್ ಪದ್ಮಸಾಲಿ, ನಿರಂಜನ್ ಆರ್. ಭಟ್, ಲೇಖಕ ಪ್ರೊ.ಕೆ. ಈ. ರಾಧಾಕೃಷ್ಣ, ಗಮಕಿ ಎಂ.ಆರ್. ಸತ್ಯನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>