‘ಭಾರತೀಯ ಸಮಾಜ ಹಿಮ್ಮುಖವಾಗಿ ಚಲಿಸುತ್ತಿದೆ. ಅಧಿಕಾರ ರಾಜಕಾರಣದ ಲಾಲಸೆ ಹಾಗೂ ಸ್ವಾರ್ಥತೆಯಿಂದ ಕೂಡಿದ ವ್ಯಾಮೋಹಗಳು ಸಾಮಾಜಿಕ, ಸಾಂಸ್ಕೃತಿಕ ಬೇರುಗಳಿಗೂ ವ್ಯಾಪಿಸಿವೆ. ಚರಿತ್ರೆಯ ವ್ಯಕ್ತಿಗಳನ್ನು, ಘಟನೆಗಳನ್ನು, ಕಾಲಘಟ್ಟವನ್ನು ಮತ್ತು ಐತಿಹ್ಯಗಳನ್ನು ಹುಡುಕಿ ತೆಗೆದು ವಿಕೃತವನ್ನಾಗಿ ಮಾಡುವ ದುರುದ್ದೇಶಪೂರಿತ ತಂತ್ರಗಾರಿಕೆಯಿಂದ ವರ್ತಮಾನದ ನೆಲೆಗಳು ಈಗಾಗಲೇ ಕಲುಷಿತವಾಗಿವೆ’ ಎಂದೂ ಅವರು ಹೇಳಿದರು.