<p><strong>ಬೆಂಗಳೂರು:</strong> ರಾಷ್ಟ್ರ ಮಟ್ಟದ ಮೂರು ಅನ್ಲಾಕ್ಡ್, ಎರಡು ಎಂಕ್ಯೂಬ್ ಹಾಗೂ ಒಂದು ಸ್ಕಾಚ್ ಪ್ರಶಸ್ತಿಗಳಿಗೆ ಕೆಎಸ್ಆರ್ಟಿಸಿ ಆಯ್ಕೆಯಾಗಿದೆ. </p>.<p>ಸಾರಿಗೆ ಸುರಕ್ಷಾ ಯೋಜನೆಯ ಪರಿಚಯಕ್ಕಾಗಿ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣೆ ಪ್ರಶಸ್ತಿ, ಅಶ್ವಮೇಧ ಕ್ಲಾಸಿಕ್ ಬಸ್ಗಳ ಪರಿಚಯಕ್ಕಾಗಿ ಅತ್ಯುತ್ತಮ ಹೊಸ ಉತ್ಪನ್ನ ಪ್ರಶಸ್ತಿ, ಡೈನಾಮಿಕ್ ಯುಪಿಐ ಮತ್ತು ಅವತಾರ್ ಪರಿಚಯಕ್ಕಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆ ಪ್ರಶಸ್ತಿಗಳು ಅನ್ಲಾಕ್ಡ್ ವಿಭಾಗದಲ್ಲಿ ಸಿಕ್ಕಿವೆ.</p>.<p>ಅಂಬಾರಿ ಉತ್ಸವ ಬಸ್ ಪರಿಚಯಕ್ಕಾಗಿ ವಿಡಿಯೊ ಮಾರ್ಕೆಟಿಂಗ್ ಅಭಿಯಾನದಲ್ಲಿ ಅತ್ಯುತ್ತಮ ವಿಷಯ ಪ್ರಶಸ್ತಿ, ಐರಾವತ್ ಕ್ಲಬ್ ಕ್ಲಾಸ್ ಬಸ್ ಪುನಶ್ಚೇತನದ ಪರಿಚಯಕ್ಕಾಗಿ ಅತ್ಯುತ್ತಮ ಉತ್ಪನ್ನ ನಿಯೋಜನೆ ತಂತ್ರ ಪ್ರಶಸ್ತಿಗಳು ಎಂಕ್ಯೂಬ್ನಲ್ಲಿ ಲಭಿಸಿವೆ.</p>.<p>ಅನ್ಲಾಕ್ಡ್ ಮತ್ತು ಎಂಕ್ಯೂಬ್ ಪ್ರಶಸ್ತಿಗಳನ್ನು ಗುರುಗ್ರಾಮದಲ್ಲಿ ಪ್ರದಾನ ಮಾಡಲಾಯಿತು.</p>.<p>ಎಚ್ಆರ್ಎಂಎಸ್ ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಸ್ಕಾಚ್ 2025 ಪ್ರಶಸ್ತಿಯನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.</p>.<p>ಪ್ರಶಸ್ತಿಗಳನ್ನು ನಿಗಮದ ಪರವಾಗಿ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವಾನಂದ ಎಂ ಕವಳಿಕಾಯಿ, ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಷ್ಟ್ರ ಮಟ್ಟದ ಮೂರು ಅನ್ಲಾಕ್ಡ್, ಎರಡು ಎಂಕ್ಯೂಬ್ ಹಾಗೂ ಒಂದು ಸ್ಕಾಚ್ ಪ್ರಶಸ್ತಿಗಳಿಗೆ ಕೆಎಸ್ಆರ್ಟಿಸಿ ಆಯ್ಕೆಯಾಗಿದೆ. </p>.<p>ಸಾರಿಗೆ ಸುರಕ್ಷಾ ಯೋಜನೆಯ ಪರಿಚಯಕ್ಕಾಗಿ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣೆ ಪ್ರಶಸ್ತಿ, ಅಶ್ವಮೇಧ ಕ್ಲಾಸಿಕ್ ಬಸ್ಗಳ ಪರಿಚಯಕ್ಕಾಗಿ ಅತ್ಯುತ್ತಮ ಹೊಸ ಉತ್ಪನ್ನ ಪ್ರಶಸ್ತಿ, ಡೈನಾಮಿಕ್ ಯುಪಿಐ ಮತ್ತು ಅವತಾರ್ ಪರಿಚಯಕ್ಕಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆ ಪ್ರಶಸ್ತಿಗಳು ಅನ್ಲಾಕ್ಡ್ ವಿಭಾಗದಲ್ಲಿ ಸಿಕ್ಕಿವೆ.</p>.<p>ಅಂಬಾರಿ ಉತ್ಸವ ಬಸ್ ಪರಿಚಯಕ್ಕಾಗಿ ವಿಡಿಯೊ ಮಾರ್ಕೆಟಿಂಗ್ ಅಭಿಯಾನದಲ್ಲಿ ಅತ್ಯುತ್ತಮ ವಿಷಯ ಪ್ರಶಸ್ತಿ, ಐರಾವತ್ ಕ್ಲಬ್ ಕ್ಲಾಸ್ ಬಸ್ ಪುನಶ್ಚೇತನದ ಪರಿಚಯಕ್ಕಾಗಿ ಅತ್ಯುತ್ತಮ ಉತ್ಪನ್ನ ನಿಯೋಜನೆ ತಂತ್ರ ಪ್ರಶಸ್ತಿಗಳು ಎಂಕ್ಯೂಬ್ನಲ್ಲಿ ಲಭಿಸಿವೆ.</p>.<p>ಅನ್ಲಾಕ್ಡ್ ಮತ್ತು ಎಂಕ್ಯೂಬ್ ಪ್ರಶಸ್ತಿಗಳನ್ನು ಗುರುಗ್ರಾಮದಲ್ಲಿ ಪ್ರದಾನ ಮಾಡಲಾಯಿತು.</p>.<p>ಎಚ್ಆರ್ಎಂಎಸ್ ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಸ್ಕಾಚ್ 2025 ಪ್ರಶಸ್ತಿಯನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.</p>.<p>ಪ್ರಶಸ್ತಿಗಳನ್ನು ನಿಗಮದ ಪರವಾಗಿ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವಾನಂದ ಎಂ ಕವಳಿಕಾಯಿ, ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>