ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸ್ಕೂಟರ್ ಅನ್ನು ಅವರ ಮೊಮ್ಮಕಳು ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ವಿವಿಧ ಭಂಗಿಯ ವ್ಯಂಗಚಿತ್ರಗಳ ಪ್ರತಿಮೆಗಳು ಗಮನ ಸೆಳೆದವು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ತೇಜಸ್ವಿ ಪರಿಕಲ್ಪನೆ ಅಡಿಯಲ್ಲಿ ರೂಪಿಸಿರುವ ಫಲಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿದೆ. ತೇಜಸ್ವಿ ಅವರನ್ನು ಬಿಂಬಿಸುವ ಪ್ರತಿಮೆಗಳ ಆಕರ್ಷಕವಾಗಿವೆ. ಇಲ್ಲಿ ಹಾಕಿರುವ ತೇಜಸ್ವಿ ಬರಹಗಳನ್ನು ಒಮ್ಮೆ ವೀಕ್ಷಿಸಿದರೆ ಸಾಕು ಅವರ ಬಗ್ಗೆ ತಿಳಿದುಕೊಳ್ಳಬಹುದು. ನಮ್ಮ ತಾಯಿ ಇದನ್ನು ವೀಕ್ಷಿಸಿದ್ದರೆ ತುಂಬಾ ಖುಷಿ ಪಡುತ್ತಿದ್ದರು.
ಈಶಾನ್ಯೆ ಕೆ.ಪಿ. ತೇಜಸ್ವಿಯವರ ಮಗಳು
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ತೇಜಸ್ವಿ ಅವರನ್ನು ತೋರಿಸಿರುವ ರೀತಿ ಬಹಳ ಅದ್ಭುತವಾಗಿದೆ. ನಾವು ತೇಜಸ್ವಿ ಅವರನ್ನು ಕಳೆದುಕೊಂಡು 20 ವರ್ಷವಾದರೂ ನಮ್ಮ ಜನರು ಇಂದಿಗೂ ಅವರನ್ನು ಸಂಭ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ.
ಸುಶ್ಮಿತಾ ಕೆ.ಪಿ. ತೇಜಸ್ವಿಯವರ ಮಗಳು
ತೇಜಸ್ವಿ ಅವರೊಂದಿಗೆ ಸುಮಾರು 15 ರಿಂದ 20 ವರ್ಷಗಳವರೆಗೆ ಕೆಲಸ ಮಾಡಿದ್ದು ಅವರೊಂದಿಗೆ ಸೇರಿ ಕೆಲವು ಪುಸ್ತಕಗಳನ್ನು ಬರೆದಿದ್ದೇನೆ. ತೇಜಸ್ವಿ ಅವರ ವ್ಯಕ್ತಿತ್ವವನ್ನು ಫಲಪುಷ್ಪ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ.
ಪ್ರದೀಪ್ ಕೆಂಜಿಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ
ಈ ಬಾರಿ ತೇಜಸ್ವಿ ಅವರ ಪರಿಕಲ್ಪನೆ ಅಡಿಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಚೆನ್ನಾಗಿ ಮೂಡಿ ಬಂದಿದೆ. ಅವರ ಬದುಕು ಬರಹ ಅದ್ಭುತವಾಗಿದೆ. ಮಂತ್ರ ಮಾಂಗಲ್ಯದ ಮಾದರಿ ಉತ್ತಮವಾಗಿದೆ.