ಯಶವಂತಪುರ, ಪೀಣ್ಯ, ಮೆಜೆಸ್ಟಿಕ್, ಆನಂದರಾವ್ ವೃತ್ತ, ಕೆ.ಆರ್.ವೃತ್ತ, ಪುರಭವನ, ಕೆ.ಆರ್.ಮಾರುಕಟ್ಟೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯ ಹಲವೆಡೆ ಸೋಮವಾರ ಸಂಚಾರ ದಟ್ಟಣೆ ಕಂಡುಬಂತು. ಅಲ್ಲೆಲ್ಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಪ್ರತಿ ವೃತದ ಸಿಗ್ನಲ್ನಲ್ಲೂ ವಾಹನಗಳು ನಿಂತಿದ್ದು ಕಂಡುಬಂತು. ರಾತ್ರಿ 9ರ ನಂತರ ನಿಷೇಧಾಜ್ಞೆ ಇದ್ದಿದ್ದರಿಂದ ಅಲ್ಲಿಯ
ವರೆಗೂ ವಾಹನಗಳ ಸಂಚಾರ ಇದ್ದೇ ಇತ್ತು.