ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಮಾತನಾಡಿದ ಅವರು, ‘ನನ್ನ ದೇಹದ ಲಕ್ಷಣಗಳು ಬದಲಾಗುತ್ತಿ ದ್ದುದು, ನಮ್ಮ ಮನೆಯವರಲ್ಲಿ ಅಸಹನೆಗೆ ಕಾರಣವಾಗಿತ್ತು. ಮುಜುಗರ ಸಹಿಸದೆ ನನ್ನನ್ನು ಮನೆಯಿಂದ ಹೊರ ಹಾಕಿದರು. ದೇವಸ್ಥಾನಗಳಲ್ಲಿ ಮಲಗಿದೆ. ಭಿಕ್ಷೆ ಬೇಡಿ ಬದುಕಿದೆ’ ಎಂದು ನೋವು ಹಂಚಿಕೊಂಡರು.