<p><strong>ಬೆಂಗಳೂರು</strong>: ಮಂತ್ರಿ ಮಾಲ್ ವತಿಯಿಂದ ₹6.50 ಕೋಟಿ ಆಸ್ತಿ ತೆರಿಗೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಶುಕ್ರವಾರ ಪಾವತಿಸಲಾಗಿದೆ.</p>.<p>ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಚಿಕ್ಕಪೇಟೆಯಲ್ಲಿ ಆಸ್ತಿ ತೆರಿಗೆ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಂತ್ರಿ ಮಾಲ್ನವರು, ಬಾಕಿ ಇರುವ ₹30 ಕೋಟಿ ಆಸ್ತಿ ತೆರಿಗೆ ಪೈಕಿ ₹5 ಕೋಟಿಯನ್ನು ಪಾವತಿಸಿದರು. ಸಂಜೆ ₹1.5 ಕೋಟಿ ಮೊತ್ತದ ಚೆಕ್ ನೀಡಿದರು.</p>.<p>ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಸ್ತಿದಾರರ ಪಟ್ಟಿ ಮಾಡಿ ಅವರಿಗೆ ನೋಟಿಸ್ ನೀಡಬೇಕು. ಪಾವತಿ ಮಾಡದಿದ್ದಲ್ಲಿ ಕಟ್ಟಡಗಳಿಗೆ ಬೀಗ ಹಾಕಬೇಕು ಎಂದು ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಪಾದಚಾರಿ ಮಾರ್ಗ ತೆರವು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿಯ ಅನಘ ಗ್ರ್ಯಾಂಡ್ ಹೋಟೆಲ್ನಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ರಸ್ತೆವರೆಗೆ ಮತ್ತು ಕೋರಮಂಗಲದ ಫೋರಂ ಮಾಲ್ನಿಂದ ವಾಟರ್ ಟ್ಯಾಂಕ್ವರೆಗೆ ಪಾದಚಾರಿ ಮಾರ್ಗದಲ್ಲಿನ ಒತ್ತುವರಿಯನ್ನು ಶುಕ್ರವಾರ ತೆರವುಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಂತ್ರಿ ಮಾಲ್ ವತಿಯಿಂದ ₹6.50 ಕೋಟಿ ಆಸ್ತಿ ತೆರಿಗೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಶುಕ್ರವಾರ ಪಾವತಿಸಲಾಗಿದೆ.</p>.<p>ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಚಿಕ್ಕಪೇಟೆಯಲ್ಲಿ ಆಸ್ತಿ ತೆರಿಗೆ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಂತ್ರಿ ಮಾಲ್ನವರು, ಬಾಕಿ ಇರುವ ₹30 ಕೋಟಿ ಆಸ್ತಿ ತೆರಿಗೆ ಪೈಕಿ ₹5 ಕೋಟಿಯನ್ನು ಪಾವತಿಸಿದರು. ಸಂಜೆ ₹1.5 ಕೋಟಿ ಮೊತ್ತದ ಚೆಕ್ ನೀಡಿದರು.</p>.<p>ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಸ್ತಿದಾರರ ಪಟ್ಟಿ ಮಾಡಿ ಅವರಿಗೆ ನೋಟಿಸ್ ನೀಡಬೇಕು. ಪಾವತಿ ಮಾಡದಿದ್ದಲ್ಲಿ ಕಟ್ಟಡಗಳಿಗೆ ಬೀಗ ಹಾಕಬೇಕು ಎಂದು ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಪಾದಚಾರಿ ಮಾರ್ಗ ತೆರವು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿಯ ಅನಘ ಗ್ರ್ಯಾಂಡ್ ಹೋಟೆಲ್ನಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ರಸ್ತೆವರೆಗೆ ಮತ್ತು ಕೋರಮಂಗಲದ ಫೋರಂ ಮಾಲ್ನಿಂದ ವಾಟರ್ ಟ್ಯಾಂಕ್ವರೆಗೆ ಪಾದಚಾರಿ ಮಾರ್ಗದಲ್ಲಿನ ಒತ್ತುವರಿಯನ್ನು ಶುಕ್ರವಾರ ತೆರವುಗೊಳಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>