ಮೆಜೆಸ್ಟಿಕ್, ಎಂ.ಜಿ. ರಸ್ತೆಯಂತಹ ಪ್ರಮುಖ ವಾಣಿಜ್ಯ ಪ್ರದೇಶದಲ್ಲೂ ಮೆಟ್ರೊ ನಿಲ್ದಾಣದ ಆವರಣ ಖಾಲಿಯಾಗಿಯೇ ಉಳಿದುಕೊಂಡಿವೆ. ಮಳಿಗೆ ನಿರ್ಮಾಣದ ತಯಾರಿ ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ಯಶವಂತಪುರ, ಮೈಸೂರು ರಸ್ತೆ, ಬನಶಂಕರಿ ನಿಲ್ದಾಣಗಳಲ್ಲಿ ಸಾಕಷ್ಟು ಜಾಗ ಇದೆ. ವಾಹನ ನಿಲುಗಡೆ ತಾಣ, ಬಹುಮಹಡಿ ಕಟ್ಟಡ, ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದರೆ ನಿಗಮಕ್ಕೆ ವರಮಾನ ಹೆಚ್ಚಾಗಲಿದೆ. ಈ ಆಸ್ತಿ ಸದ್ಬಳಕೆ ಮಾಡಿಕೊಂಡರೆ ನಿಗಮದ ಸಾಲ ತೀರಿಸಲು ಅನುಕೂಲ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.