<p><strong>ಯಲಹಂಕ</strong><strong>: </strong><strong>ದೇಶದಾದ್ಯಂತ ನಡೆಯುತ್ತಿರುವ ಮತಗಳ್ಳತನ ವಿರೋಧಿಸಿ ಹಾಗೂ ಸವಿತಾ ಸಮಾಜದ ವಿರುದ್ಧ ಸಿ</strong><strong>.</strong><strong>ಟಿ</strong><strong>. </strong><strong>ರವಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ</strong><strong>, ನಾಗವಾರ ವೃತ್ತದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.</strong></p>.<p><strong>ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್</strong><strong>.</strong><strong>ಬಸವರಾಜು ಮಾತನಾಡಿ, ‘</strong><strong>ದೇಶದಾದ್ಯಂತ ಬಿಜೆಪಿ ಮತ್ತು ಆರ್ಎಸ್ಎಸ್ ಪರಿವಾರದಿಂದ ಮತಗಳ್ಳತನ ನಡೆಯುತ್ತಿದೆ. </strong><strong>ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡುತ್ತಿದೆ’ ಎಂದು ಆರೋಪಿಸಿದರು. </strong></p>.<p><strong>ಪರಿಶಿಷ್ಟ</strong><strong>, </strong><strong>ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ</strong><strong>. </strong><strong>ರಾಹುಲ್ ಗಾಂಧಿಯವರು ಮಹದೇವಪುರದಲ್ಲಿ ಮತಗಳ್ಳತನದ ಅಕ್ರಮ ನಡೆದಿರುವ ಬಗ್ಗೆ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು</strong><strong>, </strong><strong>ಅವರ ಹೋರಾಟದಿಂದ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆಯಲು ಒಟಿಪಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.</strong></p>.<p><strong>ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ</strong><strong>. </strong><strong>ಜಯಗೋಪಾಲಗೌಡ ಮಾತನಾಡಿ</strong><strong>, ‘</strong><strong>ದೇಶದಲ್ಲಿ ಬಿಜೆಪಿ ನ್ಯಾಯಯುತವಾಗಿ ಚುನಾವಣೆ ನಡೆಸುವುದನ್ನು ಬಿಟ್ಟು</strong><strong>, </strong><strong>ಅಧಿಕಾರ ದುರುಪಯೋಗ ಮಾಡಿಕೊಂಡು ವಾಮಮಾರ್ಗದಿಂದ ಅಧಿಕಾರ ಹಿಡಿಯುತ್ತಿದೆ. </strong><strong>ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಎಚ್ಚರವಹಿಸುವುದರ ಜೊತೆಗೆ ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.</strong></p>.<p><strong>ಮತಗಳ್ಳತನ ವಿರೋಧಿಸಿ</strong><strong>, </strong><strong>ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು</strong><strong>. </strong><strong>ಕಾಂಗ್ರೆಸ್ ಮುಖಂಡರಾದ ಎಚ್</strong><strong>.</strong><strong>ಎ</strong><strong>. </strong><strong>ಶಿವಕುಮಾರ್</strong><strong>, </strong><strong>ಟಿ</strong><strong>.</strong><strong>ಎಂ</strong><strong>. </strong><strong>ಶ್ರೀನಿವಾಸ್</strong><strong>, </strong><strong>ರಮೇಶ್</strong><strong>, </strong><strong>ಪಾರ್ವತಮ್ಮ</strong><strong>,</strong><strong> ಅರುಣ್ಕುಮಾರ್</strong><strong>, </strong><strong>ವಿ</strong><strong>.</strong><strong>ಮೋಹನ್ರಾಜ್</strong><strong>, </strong><strong>ಕಾಂತರಾಜ್</strong><strong>, </strong><strong>ಅಫ್ಜಲ್ ಖಾನ್ ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ</strong><strong>: </strong><strong>ದೇಶದಾದ್ಯಂತ ನಡೆಯುತ್ತಿರುವ ಮತಗಳ್ಳತನ ವಿರೋಧಿಸಿ ಹಾಗೂ ಸವಿತಾ ಸಮಾಜದ ವಿರುದ್ಧ ಸಿ</strong><strong>.</strong><strong>ಟಿ</strong><strong>. </strong><strong>ರವಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ</strong><strong>, ನಾಗವಾರ ವೃತ್ತದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.</strong></p>.<p><strong>ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್</strong><strong>.</strong><strong>ಬಸವರಾಜು ಮಾತನಾಡಿ, ‘</strong><strong>ದೇಶದಾದ್ಯಂತ ಬಿಜೆಪಿ ಮತ್ತು ಆರ್ಎಸ್ಎಸ್ ಪರಿವಾರದಿಂದ ಮತಗಳ್ಳತನ ನಡೆಯುತ್ತಿದೆ. </strong><strong>ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡುತ್ತಿದೆ’ ಎಂದು ಆರೋಪಿಸಿದರು. </strong></p>.<p><strong>ಪರಿಶಿಷ್ಟ</strong><strong>, </strong><strong>ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ</strong><strong>. </strong><strong>ರಾಹುಲ್ ಗಾಂಧಿಯವರು ಮಹದೇವಪುರದಲ್ಲಿ ಮತಗಳ್ಳತನದ ಅಕ್ರಮ ನಡೆದಿರುವ ಬಗ್ಗೆ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು</strong><strong>, </strong><strong>ಅವರ ಹೋರಾಟದಿಂದ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆಯಲು ಒಟಿಪಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.</strong></p>.<p><strong>ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ</strong><strong>. </strong><strong>ಜಯಗೋಪಾಲಗೌಡ ಮಾತನಾಡಿ</strong><strong>, ‘</strong><strong>ದೇಶದಲ್ಲಿ ಬಿಜೆಪಿ ನ್ಯಾಯಯುತವಾಗಿ ಚುನಾವಣೆ ನಡೆಸುವುದನ್ನು ಬಿಟ್ಟು</strong><strong>, </strong><strong>ಅಧಿಕಾರ ದುರುಪಯೋಗ ಮಾಡಿಕೊಂಡು ವಾಮಮಾರ್ಗದಿಂದ ಅಧಿಕಾರ ಹಿಡಿಯುತ್ತಿದೆ. </strong><strong>ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಎಚ್ಚರವಹಿಸುವುದರ ಜೊತೆಗೆ ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.</strong></p>.<p><strong>ಮತಗಳ್ಳತನ ವಿರೋಧಿಸಿ</strong><strong>, </strong><strong>ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು</strong><strong>. </strong><strong>ಕಾಂಗ್ರೆಸ್ ಮುಖಂಡರಾದ ಎಚ್</strong><strong>.</strong><strong>ಎ</strong><strong>. </strong><strong>ಶಿವಕುಮಾರ್</strong><strong>, </strong><strong>ಟಿ</strong><strong>.</strong><strong>ಎಂ</strong><strong>. </strong><strong>ಶ್ರೀನಿವಾಸ್</strong><strong>, </strong><strong>ರಮೇಶ್</strong><strong>, </strong><strong>ಪಾರ್ವತಮ್ಮ</strong><strong>,</strong><strong> ಅರುಣ್ಕುಮಾರ್</strong><strong>, </strong><strong>ವಿ</strong><strong>.</strong><strong>ಮೋಹನ್ರಾಜ್</strong><strong>, </strong><strong>ಕಾಂತರಾಜ್</strong><strong>, </strong><strong>ಅಫ್ಜಲ್ ಖಾನ್ ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>