ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಕಾಶ್, ‘ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ ಸಂಹಿತೀಕರಣ ಮಾಡಿರುವ ಹಿಂದೆ, ಬಂಡವಾಳದಾರರ ಹಿತ ಅಡಗಿದೆ. ಉದ್ಯೋಗದ ಅಭದ್ರತೆ ಸೃಷ್ಟಿಸಿ ಕಡಿಮೆ ಕೂಲಿಗೆ ಕಾರ್ಮಿಕರನ್ನು ದುಡಿಸಿಕೊಳ್ಳಲು ಇದು ನೆರವಾಗಲಿದೆ. ಸಂಸತ್ತನ್ನು ಕತ್ತಲಲ್ಲಿಟ್ಟು, ಸುಗ್ರೀವಾಜ್ಞೆಗಳ ಮೂಲಕ ಕಾನೂನುಗಳನ್ನು ಮಾಡುತ್ತಿದ್ದು, ಇದು ಹಿಟ್ಲರ್ ಮಾದರಿ ಅಚ್ಛೆ ದಿನ್ ಆಗಿದೆ’ ಎಂದು ಹೇಳಿದರು.