<p><strong>ಬೆಂಗಳೂರು:</strong> ಬಿಬಿಎಂಪಿಯ ಚುನಾಯಿತ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಸರ್ಕಾರ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಚುನಾಯಿತ ಸದಸ್ಯರು ಇಲ್ಲದ ಈ ಅವಧಿಯಲ್ಲಿ ಜನರು ಅಧಿಕಾರಿಗಳಿಂದ ಬಯಸುವ ಆಡಳಿತ ಎಂಥಹದ್ದು. ತಮ್ಮ ಪ್ರದೇಶದ ಸಮಸ್ಯೆಗಳಿಗೆ ಹಾಗೂ ಅಹವಾಲುಗಳಿಗೆ ಅಧಿಕಾರಿಗಳು ಹೇಗೆ ಸ್ಪಂದಿಸಬೇಕು ಎಂದು ಜನ ಬಯಸುತ್ತಾರೆ ಎಂಬ ಬಗ್ಗೆ 'ಪ್ರಜಾವಾಣಿ' ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಇದಕ್ಕೆ ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಇಲ್ಲಿವೆ.</p>.<p class="Subhead"><strong>‘ತಗ್ಗುಪ್ರದೇಶಗಳಲ್ಲಿ ಮಳೆ ಹಾನಿ ತಡೆಯಿರಿ’</strong></p>.<p>ಮಳೆಗಾಲ ಬಂದರೆ ನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಳ್ಳುತ್ತವೆ. ಈ ಪ್ರದೇಶಗಳಲ್ಲಿ ಮಧ್ಯಮವರ್ಗದ ಜನ ಹೆಚ್ಚಾಗಿ ನೆಲೆಸಿದ್ದು, ಮಳೆಯಿಂದ ಸಂಕಷ್ಟ ಅನುಭವಿಸುತ್ತಾರೆ. ಇಂತಹ ಪ್ರದೇಶಗಳು ಮಳೆಯಿಂದ ಹಾನಿಯಾಗದಂತೆ ತಡೆಯಬೇಕು.</p>.<p><strong>ಶ್ರೀನಿವಾಸ್, ಹೆಣ್ಣೂರು</strong><br />---</p>.<p class="Subhead"><strong>'ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ'</strong></p>.<p>ಪಾಲಿಕೆಯ ಚುನಾಯಿತ ಸದಸ್ಯರು ಏನು ಅಭಿವೃದ್ಧಿ ಮಾಡಿದ್ದಾರೋ ಗೊತ್ತಿಲ್ಲ. ಡಾಂಬರು ಕಾಣದ ಹಲವು ರಸ್ತೆಗಳು ದಶಕಗಳಿಂದ ಹಾಗೆಯೇ ಇವೆ. ಮಳೆಗಾಲದಲ್ಲಿ ಗುಂಡಿಗಳಿಂದ ಕೂಡಿರುವ ಈ ರಸ್ತೆಗಳಲ್ಲಿ ವಾಹನ ಸವಾರರು ಭೀತಿಯಲ್ಲೇ ಸಂಚರಿಸುತ್ತಾರೆ. ಕಗ್ಗತ್ತಲಿನಲ್ಲಿರುವ ರಸ್ತೆಗಳಲ್ಲಿ ಬೆಳಕು ಮೂಡಿಸಿ.</p>.<p><strong>ಮಂಜುನಾಥ್, ಕಾಳಿಕಾನಗರ</strong><br />---</p>.<p class="Subhead"><strong>'ಬೆಂಗಳೂರೇ ಕೆರೆಯಂತಾಗುವುದನ್ನು ತಪ್ಪಿಸಿ'</strong></p>.<p>ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಈಗ ಇಲ್ಲ. ಈಅವಕಾಶ ಬಳಸಿ ರಾಜಕಾಲುವೆ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಮಳೆ ನೀರು ನೇರವಾಗಿ ಕೆರೆಗಳನ್ನು ಸೇರುವಂತೆ ಮಾಡಬೇಕು. ಬೆಂಗಳೂರಿನಲ್ಲಿ ಕೆರೆಗಳು ಇವೆ ಎನ್ನಬೇಕೇ ಹೊರತು, ಬೆಂಗಳೂರೇ ಕೆರೆಯಂತಾಗುವುದನ್ನು ತಪ್ಪಿಸಬೇಕು.</p>.<p><strong>ಪಿ.ಎಂ.ಗ್ರೀಷ್ಮ,ಕುಮಾರಸ್ವಾಮಿ ಬಡಾವಣೆ</strong></p>.<p>---</p>.<p class="Subhead"><strong>'ಅಗೆದ ರಸ್ತೆಯಲ್ಲೇ ಹರಿಯುತಿದೆ ಮಳೆನೀರು'</strong></p>.<p>ಸಂಪಂಗಿರಾಮನಗರದಲ್ಲಿ ಒಳಚರಂಡಿ ನಿರ್ಮಿಸಿ ಮೂರು ವರ್ಷಗಳಾಗಿವೆ. ಆದರೆ, ಅಗೆದಿರುವ ರಸ್ತೆ, ಮಳೆನೀರು ಹರಿಯುವ ಕಾಲುವೆಯಾಗಿ ಮಾರ್ಪಟ್ಟಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಕೂಡಲೇ ಈ ರಸ್ತೆ ಹಾಗೂ ಇದೇ ರೀತಿ ಹದಗೆಟ್ಟಿರುವ ರಸ್ತೆಗಳನ್ನು ಪಾಲಿಕೆ ಸರಿಪಡಿಸಬೇಕು.</p>.<p><strong>ರಾಮಚಂದ್ರಯ್ಯ, ಸಂಪಂಗಿರಾಮ ನಗರ</strong><br />---</p>.<p class="Subhead"><strong>'ಕಸ ವಿಲೇವರಿಗೆ ಶಾಶ್ವತ ಪರಿಹಾರ ಒದಗಿಸಿ'</strong></p>.<p>ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ವಾರ್ಡ್ಮಟ್ಟದಲ್ಲೇ ಕಸ ಸಂಸ್ಕರಣೆಯಾಗಬೇಕು. ಕಸ ನಿರ್ವಹಣೆ ಉತ್ತಮವಾಗಿ ನಿರ್ವಹಿಸಿದವರಿಗೆ ಪ್ರೋತ್ಸಾಹಿಸಬೇಕು.</p>.<p><strong>ಸುನಿಲ್ ಕುಮಾರ್, ವಿಜಯನಗರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿಯ ಚುನಾಯಿತ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಸರ್ಕಾರ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಚುನಾಯಿತ ಸದಸ್ಯರು ಇಲ್ಲದ ಈ ಅವಧಿಯಲ್ಲಿ ಜನರು ಅಧಿಕಾರಿಗಳಿಂದ ಬಯಸುವ ಆಡಳಿತ ಎಂಥಹದ್ದು. ತಮ್ಮ ಪ್ರದೇಶದ ಸಮಸ್ಯೆಗಳಿಗೆ ಹಾಗೂ ಅಹವಾಲುಗಳಿಗೆ ಅಧಿಕಾರಿಗಳು ಹೇಗೆ ಸ್ಪಂದಿಸಬೇಕು ಎಂದು ಜನ ಬಯಸುತ್ತಾರೆ ಎಂಬ ಬಗ್ಗೆ 'ಪ್ರಜಾವಾಣಿ' ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಇದಕ್ಕೆ ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಇಲ್ಲಿವೆ.</p>.<p class="Subhead"><strong>‘ತಗ್ಗುಪ್ರದೇಶಗಳಲ್ಲಿ ಮಳೆ ಹಾನಿ ತಡೆಯಿರಿ’</strong></p>.<p>ಮಳೆಗಾಲ ಬಂದರೆ ನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಳ್ಳುತ್ತವೆ. ಈ ಪ್ರದೇಶಗಳಲ್ಲಿ ಮಧ್ಯಮವರ್ಗದ ಜನ ಹೆಚ್ಚಾಗಿ ನೆಲೆಸಿದ್ದು, ಮಳೆಯಿಂದ ಸಂಕಷ್ಟ ಅನುಭವಿಸುತ್ತಾರೆ. ಇಂತಹ ಪ್ರದೇಶಗಳು ಮಳೆಯಿಂದ ಹಾನಿಯಾಗದಂತೆ ತಡೆಯಬೇಕು.</p>.<p><strong>ಶ್ರೀನಿವಾಸ್, ಹೆಣ್ಣೂರು</strong><br />---</p>.<p class="Subhead"><strong>'ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ'</strong></p>.<p>ಪಾಲಿಕೆಯ ಚುನಾಯಿತ ಸದಸ್ಯರು ಏನು ಅಭಿವೃದ್ಧಿ ಮಾಡಿದ್ದಾರೋ ಗೊತ್ತಿಲ್ಲ. ಡಾಂಬರು ಕಾಣದ ಹಲವು ರಸ್ತೆಗಳು ದಶಕಗಳಿಂದ ಹಾಗೆಯೇ ಇವೆ. ಮಳೆಗಾಲದಲ್ಲಿ ಗುಂಡಿಗಳಿಂದ ಕೂಡಿರುವ ಈ ರಸ್ತೆಗಳಲ್ಲಿ ವಾಹನ ಸವಾರರು ಭೀತಿಯಲ್ಲೇ ಸಂಚರಿಸುತ್ತಾರೆ. ಕಗ್ಗತ್ತಲಿನಲ್ಲಿರುವ ರಸ್ತೆಗಳಲ್ಲಿ ಬೆಳಕು ಮೂಡಿಸಿ.</p>.<p><strong>ಮಂಜುನಾಥ್, ಕಾಳಿಕಾನಗರ</strong><br />---</p>.<p class="Subhead"><strong>'ಬೆಂಗಳೂರೇ ಕೆರೆಯಂತಾಗುವುದನ್ನು ತಪ್ಪಿಸಿ'</strong></p>.<p>ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಈಗ ಇಲ್ಲ. ಈಅವಕಾಶ ಬಳಸಿ ರಾಜಕಾಲುವೆ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಮಳೆ ನೀರು ನೇರವಾಗಿ ಕೆರೆಗಳನ್ನು ಸೇರುವಂತೆ ಮಾಡಬೇಕು. ಬೆಂಗಳೂರಿನಲ್ಲಿ ಕೆರೆಗಳು ಇವೆ ಎನ್ನಬೇಕೇ ಹೊರತು, ಬೆಂಗಳೂರೇ ಕೆರೆಯಂತಾಗುವುದನ್ನು ತಪ್ಪಿಸಬೇಕು.</p>.<p><strong>ಪಿ.ಎಂ.ಗ್ರೀಷ್ಮ,ಕುಮಾರಸ್ವಾಮಿ ಬಡಾವಣೆ</strong></p>.<p>---</p>.<p class="Subhead"><strong>'ಅಗೆದ ರಸ್ತೆಯಲ್ಲೇ ಹರಿಯುತಿದೆ ಮಳೆನೀರು'</strong></p>.<p>ಸಂಪಂಗಿರಾಮನಗರದಲ್ಲಿ ಒಳಚರಂಡಿ ನಿರ್ಮಿಸಿ ಮೂರು ವರ್ಷಗಳಾಗಿವೆ. ಆದರೆ, ಅಗೆದಿರುವ ರಸ್ತೆ, ಮಳೆನೀರು ಹರಿಯುವ ಕಾಲುವೆಯಾಗಿ ಮಾರ್ಪಟ್ಟಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಕೂಡಲೇ ಈ ರಸ್ತೆ ಹಾಗೂ ಇದೇ ರೀತಿ ಹದಗೆಟ್ಟಿರುವ ರಸ್ತೆಗಳನ್ನು ಪಾಲಿಕೆ ಸರಿಪಡಿಸಬೇಕು.</p>.<p><strong>ರಾಮಚಂದ್ರಯ್ಯ, ಸಂಪಂಗಿರಾಮ ನಗರ</strong><br />---</p>.<p class="Subhead"><strong>'ಕಸ ವಿಲೇವರಿಗೆ ಶಾಶ್ವತ ಪರಿಹಾರ ಒದಗಿಸಿ'</strong></p>.<p>ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ವಾರ್ಡ್ಮಟ್ಟದಲ್ಲೇ ಕಸ ಸಂಸ್ಕರಣೆಯಾಗಬೇಕು. ಕಸ ನಿರ್ವಹಣೆ ಉತ್ತಮವಾಗಿ ನಿರ್ವಹಿಸಿದವರಿಗೆ ಪ್ರೋತ್ಸಾಹಿಸಬೇಕು.</p>.<p><strong>ಸುನಿಲ್ ಕುಮಾರ್, ವಿಜಯನಗರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>