ಕೆ.ಆರ್.ಪುರ: ‘ದೇಶದ ಪ್ರತಿಯೊಬ್ಬ ನಾಗರಿಕನೂ ನಿಸ್ವಾರ್ಥದಿಂದ, ರಾಷ್ಟ್ರಪ್ರೇಮದಿಂದ, ಉತ್ತಮ ಪ್ರಜೆಗಳಾಗಿ ನಡೆದುಕೊಂಡಾಗ ಮಾತ್ರ ಗಣರಾಜ್ಯೋತ್ಸವದ ಆಚರಣೆಗೆ ಅರ್ಥ ಬರುತ್ತದೆ’ ಎಂದು ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಎಸ್.ಆರ್.ಮಹೇಶ್ ಹೇಳಿದರು.
ಕೆ.ಆರ್.ಪುರದ ರಾಜೀವ್ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಬೆಂಗಳೂರನ್ನು ವಿಶ್ವದ ಅತ್ಯುತ್ತಮ ಡೈನಾಮಿಕ್ ಸಿಟಿ ಎಂದು ಘೋಷಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ವೈಜ್ಞಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕಚೇರಿಗಳು ನಮ್ಮ ಪೂರ್ವ ತಾಲ್ಲೂಕಿನಲ್ಲಿದೆ’ ಎಂದು ಹೇಳಿದರು.