ಈ ಬಗ್ಗೆ ಅವರು 5 ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ‘108 ವರ್ಷಗಳಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಪರಿಷತ್ತಿನ ಘನತೆ–ಗೌರವ ರಾಜ್ಯಾಧ್ಯಕ್ಷರಾದ ತಮ್ಮಿಂದ ಕುಸಿದು, ಮಣ್ಣುಪಾಲಾಗುತ್ತಿದೆ. ಪ್ರಾರಂಭದ ದಿನಗಳಿಂದಲೂ ತಮ್ಮ ನಡೆ, ನುಡಿ, ನಿಲುವುಗಳು ನಾಡಿನಾದ್ಯಂತ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ವ್ಯಾಪಕ ಟೀಕೆ ಮತ್ತು ವಿವಾದ
ಗಳಿಗೆ ಗುರಿಯಾಗಿವೆ. ಅಲ್ಲದೆ, ಇಡೀ ಕಾರ್ಯಕಾರಿ ಸಮಿತಿಯೂ ತೀವ್ರನಿಂದನೆಗೆ ಒಳಗಾಗುತ್ತಿದೆ. 1915ರಿಂದ
2018ರವರೆಗೆ ಕಸಾಪ ನಿಬಂಧನೆಯನ್ನು 6 ಬಾರಿ ತಿದ್ದುಪಡಿ ಮಾಡಲಾಗಿತ್ತು. ಆದರೆ, ತಾವು ‘ಆಮೂಲಾಗ್ರ, ಕ್ರಾಂತಿಕಾರಿ ಬದಲಾವಣೆ’ ಎಂದು ತಿದ್ದುಪಡಿಗಳನ್ನು ಮಾಡಿರುವಿರಿ’ ಎಂದು ಪ್ರಕಾಶಮೂರ್ತಿ ಬೇಸರಿಸಿದರು.