ಜೀರ್ಣೋದ್ಧಾರ ಪ್ರಕ್ರಿಯೆ
ಎಂಟು ವರ್ಷಗಳ ಹಿಂದೆ ಪಟ್ಟಣದ ಮುಖ್ಯರಸ್ತೆಯಾಗಿದ್ದ ಪೇಟೆಬೀದಿಯ ಹೆಬ್ಬಾಗಿಲಿನಲ್ಲಿದ್ದ ಗ್ರಾಮದೇವತೆ ಮರಿಯಕ್ಕ ತಾಯಿ ದೇವಸ್ಥಾನದ ಗೋಡೆಗಳು ಸೀಳುಬಿಟ್ಟು, ದೇವರ ವಿಗ್ರಹ ಭಿನ್ನವಾಗಿ ಶಿಥಿಲಾವಸ್ಥೆಗೆ ತಲುಪಿತ್ತು. ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ದಿವಂಗತ ನೆ.ಲ.ಗಿರಿಧರ್ ಅವರು ಮುತುವರ್ಜಿವಹಿಸಿ ಈಗಿನ ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್, ನಗರಸಭೆ ಸದಸ್ಯ ಎನ್.ಜಿ.ರವಿಕುಮಾರ್, ಚಿಕ್ಕಹನುಮಯ್ಯ, ಬೈಲಪ್ಪ ಅವರನ್ನೊಳಗೊಂಡ ಸಮಿತಿ ರಚಿಸಿ, ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ತೀರ್ಮಾನಿಸಲಾಯಿತು. ದೇವಾಲಯ ಜೀರ್ಣೊದ್ಧಾರ ಕಾರ್ಯ ಆರಂಭವಾಯಿತು. ಆದರೆ, ನೋಟು ಅಮಾನ್ಯೀಕರಣ, ಕೋವಿಡ್ ಬಿಕ್ಕಟ್ಟು ಹಾಗೂ ಇತರೆ ಕಾರಣಗಳಿಂದಾಗಿ ಜೀರ್ಣೋದ್ಧಾರ ಕಾರ್ಯ ವಿಳಂಬವಾಯಿತು.