<p><strong>ಬೆಂಗಳೂರು</strong>: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಕೆಲಸಗಾರ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ನಗರ್ತಪೇಟೆಯ ನಿವಾಸಿ ರಾಹುಲ್ ಕುಮಾರ್(32), ಹೊಸೂರಿನ ವಿಷ್ಣುದೇವಸಿ(34) ಮತ್ತು ತೆಲಂಗಾಣದ ದೇವಸಿ ಭದ್ರಿ(30) ಬಂಧಿತರು.</p>.<p>ಆರೋಪಿಗಳಿಂದ ₹51.80 ಲಕ್ಷ ಮೌಲ್ಯದ 740 ಗ್ರಾಂ. ಚಿನ್ನದ ಗಟ್ಟಿ ಮತ್ತು ಒಂದು ನಕ್ಲೇಸ್ ಜಪ್ತಿ ಮಾಡಲಾಗಿದೆ. ಆರೋಪಿಗಳು, ಸಂಪಂಗಿರಾಮನಗರದ 5ನೇ ಕ್ರಾಸ್ನಲ್ಲಿ ಇರುವ ಅಂಗಡಿಯಲ್ಲಿ ಹಂತ ಹಂತವಾಗಿ 1 ಕೆ.ಜಿ 764 ಗ್ರಾಂ. ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ತಿಳಿಸಿದರು.</p>.<p>‘ಬಂಧಿತರ ಪೈಕಿ ರಾಹುಲ್ ಕುಮಾರ್ ಎಂಬಾತ ದೂರು ನೀಡಿದ ವ್ಯಕ್ತಿಯ ಚಿನ್ನಾಭರಣ ಮಳಿಗೆಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ. ಮಾಲೀಕರ ಮನೆಯಲ್ಲೇ ವಾಸವಿದ್ದ. ಈ ವೇಳೆ ಆರೋಪಿ, ಮಳಿಗೆ ಹಾಗೂ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ.</p>.<p>‘ಕದ್ದಿದ್ದ ಚಿನ್ನವನ್ನು ವಿಷ್ಣುದೇವಸಿ, ದೇವಸಿ ಭದ್ರಿಗೆ ನೀಡಿದ್ದ. ವಿಷ್ಣುದೇವಸಿ ಎಲ್ಲ ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಪರಿವರ್ತಿಸಿ ಹೊಸೂರು ಸಮೀಪದ ಚಿನ್ನದ ಅಂಗಡಿಗಳಿಗೆ ಮಾರಾಟ ಮಾಡಿದ್ದ. ಬಂದ ಹಣದಲ್ಲಿ ರಾಹುಲ್ ಕುಮಾರ್ಗೆ ಹೆಚ್ಚಿನ ಪಾಲು ನೀಡಿದ್ದ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಕೆಲಸಗಾರ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ನಗರ್ತಪೇಟೆಯ ನಿವಾಸಿ ರಾಹುಲ್ ಕುಮಾರ್(32), ಹೊಸೂರಿನ ವಿಷ್ಣುದೇವಸಿ(34) ಮತ್ತು ತೆಲಂಗಾಣದ ದೇವಸಿ ಭದ್ರಿ(30) ಬಂಧಿತರು.</p>.<p>ಆರೋಪಿಗಳಿಂದ ₹51.80 ಲಕ್ಷ ಮೌಲ್ಯದ 740 ಗ್ರಾಂ. ಚಿನ್ನದ ಗಟ್ಟಿ ಮತ್ತು ಒಂದು ನಕ್ಲೇಸ್ ಜಪ್ತಿ ಮಾಡಲಾಗಿದೆ. ಆರೋಪಿಗಳು, ಸಂಪಂಗಿರಾಮನಗರದ 5ನೇ ಕ್ರಾಸ್ನಲ್ಲಿ ಇರುವ ಅಂಗಡಿಯಲ್ಲಿ ಹಂತ ಹಂತವಾಗಿ 1 ಕೆ.ಜಿ 764 ಗ್ರಾಂ. ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ತಿಳಿಸಿದರು.</p>.<p>‘ಬಂಧಿತರ ಪೈಕಿ ರಾಹುಲ್ ಕುಮಾರ್ ಎಂಬಾತ ದೂರು ನೀಡಿದ ವ್ಯಕ್ತಿಯ ಚಿನ್ನಾಭರಣ ಮಳಿಗೆಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ. ಮಾಲೀಕರ ಮನೆಯಲ್ಲೇ ವಾಸವಿದ್ದ. ಈ ವೇಳೆ ಆರೋಪಿ, ಮಳಿಗೆ ಹಾಗೂ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ.</p>.<p>‘ಕದ್ದಿದ್ದ ಚಿನ್ನವನ್ನು ವಿಷ್ಣುದೇವಸಿ, ದೇವಸಿ ಭದ್ರಿಗೆ ನೀಡಿದ್ದ. ವಿಷ್ಣುದೇವಸಿ ಎಲ್ಲ ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಪರಿವರ್ತಿಸಿ ಹೊಸೂರು ಸಮೀಪದ ಚಿನ್ನದ ಅಂಗಡಿಗಳಿಗೆ ಮಾರಾಟ ಮಾಡಿದ್ದ. ಬಂದ ಹಣದಲ್ಲಿ ರಾಹುಲ್ ಕುಮಾರ್ಗೆ ಹೆಚ್ಚಿನ ಪಾಲು ನೀಡಿದ್ದ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>