<p><strong>ಕೆ.ಆರ್.ಪುರ:</strong> ಸಂತೆಯಲ್ಲಿ ರೈತರ ಹಾಗೂ ವ್ಯಾಪಾರಸ್ಥರ ಬಳಿ ಕಾನೂನುಬದ್ಧ ಸುಂಕ ವಸೂಲಾತಿಗೆ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ಪೂರ್ವ ನಗರ ಪಾಲಿಕೆ ಮುಂಭಾಗ ಸುಂಕ ವಸೂಲಿಗಾರರು ಪ್ರತಿಭಟನೆ ನಡೆಸಿದರು. </p>.<p>ಕಾನೂನುಬದ್ಧವಾಗಿ ಸುಂಕ ವಸೂಲು ಮಾಡಲಾಗುತ್ತಿದೆ. ಆದರೂ ಇದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ನಿರಂತರವಾಗಿ ತೊಂದರೆ ಕೊಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುತ್ತಿಗೆದಾರ ಅಂಜನಾಮೂರ್ತಿ ಆಗ್ರಹಿಸಿದರು.</p>.<p>‘ಕಳೆದ ವರ್ಷ ಸುಂಕ ವಸೂಲಾತಿ ಸಂಬಂಧ ಟೆಂಡರ್ ಕರೆಯಲಾಗಿತ್ತು. ಕಾನೂನು ಪ್ರಕಾರ ಟೆಂಡರ್ ಪಡೆದುಕೊಂಡಿದ್ದೇನೆ. ಈ ಸಂಬಂಧ ₹30 ಲಕ್ಷ ಠೇವಣಿ ಇಡಲಾಗಿದೆ. ಪಾಲಿಕೆ ನಿರ್ದೇಶನದಂತೆ ಪ್ರತಿ ತಿಂಗಳು ₹10 ಲಕ್ಷ ತಪ್ಪದೆ ಪಾವತಿ ಮಾಡುತ್ತಿದ್ದೇನೆ. ಇತ್ತೀಚೆಗೆ ಗುತ್ತಿಗೆ ಅವಧಿ ಮುಗಿದಿದ್ದು, ಮರು ಟೆಂಡರ್ ಆಗುವವರೆಗೂ ಸುಂಕ ವಸೂಲಿ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಈ ಹಿಂದೆ ಟೆಂಡರ್ ಪಡೆದಿದ್ದ ಎಲೆ ಶ್ರೀನಿವಾಸ್ ಮತ್ತು ಅವರ ಸಂಗಡಿಗರು ಸುಂಕ ವಸೂಲು ಮಾಡುವ ಹುಡುಗರ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದರು.</p>.<p>ಈ ವೇಳೆ ತರಕಾರಿ ಬಾಬು ದಿಲೀಪ್, ನಾಗರಾಜ, ನಟರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಸಂತೆಯಲ್ಲಿ ರೈತರ ಹಾಗೂ ವ್ಯಾಪಾರಸ್ಥರ ಬಳಿ ಕಾನೂನುಬದ್ಧ ಸುಂಕ ವಸೂಲಾತಿಗೆ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ಪೂರ್ವ ನಗರ ಪಾಲಿಕೆ ಮುಂಭಾಗ ಸುಂಕ ವಸೂಲಿಗಾರರು ಪ್ರತಿಭಟನೆ ನಡೆಸಿದರು. </p>.<p>ಕಾನೂನುಬದ್ಧವಾಗಿ ಸುಂಕ ವಸೂಲು ಮಾಡಲಾಗುತ್ತಿದೆ. ಆದರೂ ಇದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ನಿರಂತರವಾಗಿ ತೊಂದರೆ ಕೊಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುತ್ತಿಗೆದಾರ ಅಂಜನಾಮೂರ್ತಿ ಆಗ್ರಹಿಸಿದರು.</p>.<p>‘ಕಳೆದ ವರ್ಷ ಸುಂಕ ವಸೂಲಾತಿ ಸಂಬಂಧ ಟೆಂಡರ್ ಕರೆಯಲಾಗಿತ್ತು. ಕಾನೂನು ಪ್ರಕಾರ ಟೆಂಡರ್ ಪಡೆದುಕೊಂಡಿದ್ದೇನೆ. ಈ ಸಂಬಂಧ ₹30 ಲಕ್ಷ ಠೇವಣಿ ಇಡಲಾಗಿದೆ. ಪಾಲಿಕೆ ನಿರ್ದೇಶನದಂತೆ ಪ್ರತಿ ತಿಂಗಳು ₹10 ಲಕ್ಷ ತಪ್ಪದೆ ಪಾವತಿ ಮಾಡುತ್ತಿದ್ದೇನೆ. ಇತ್ತೀಚೆಗೆ ಗುತ್ತಿಗೆ ಅವಧಿ ಮುಗಿದಿದ್ದು, ಮರು ಟೆಂಡರ್ ಆಗುವವರೆಗೂ ಸುಂಕ ವಸೂಲಿ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಈ ಹಿಂದೆ ಟೆಂಡರ್ ಪಡೆದಿದ್ದ ಎಲೆ ಶ್ರೀನಿವಾಸ್ ಮತ್ತು ಅವರ ಸಂಗಡಿಗರು ಸುಂಕ ವಸೂಲು ಮಾಡುವ ಹುಡುಗರ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದರು.</p>.<p>ಈ ವೇಳೆ ತರಕಾರಿ ಬಾಬು ದಿಲೀಪ್, ನಾಗರಾಜ, ನಟರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>