<p><strong>ಬೆಂಗಳೂರು: </strong>ಸಿಂಗನಾಯಕನಹಳ್ಳಿ ಕೆರೆಯ ಅಭಿವೃದ್ಧಿಗಾಗಿ 6,316 ಮರಗಳನ್ನು ಕಡಿಯುವ ಪ್ರಸ್ತಾವವನ್ನು ವಿರೋಧಿಸಿ ಅನೇಕರು ಟ್ವಿಟರ್ನಲ್ಲಿ ಬುಧವಾರ ಅಭಿಪ್ರಾಯ ಹಂಚಿಕೊಂಡರು.</p>.<p>ಪರಿಸರ ಕಾಳಜಿ ಇರುವ ಸಮಾನ ಮನಸ್ಕ ಸಂಘಟನೆಗಳು ಸೇರಿಕೊಂಡು ಹಮ್ಮಿಕೊಂಡ ಈ ಟ್ವಿಟರ್ ಅಭಿಯಾನಕ್ಕೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದರು.</p>.<p>‘ನರಿ, ಹಾವುಗಳು, ಹಕ್ಕಿಗಳಂತಹ ಸಮೃದ್ಧ ಜೀವವೈವಿಧ್ಯದ ಜೊತೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅನುಸೂಚಿತ ಪಕ್ಷಿಯಾಗಿರುವ ನವಿಲುಗಳಿಗೂ ಸಿಂಗನಾಯಕನಹಳ್ಳಿ ಕೆರೆಯಂಗಳ ನೆಲೆ ಒದಗಿಸಿದೆ. ಇಲ್ಲಿನ 6,316 ಮರಗಳನ್ನು ಕಡಿಯುವುದು ಬೇಡ ಎನ್ನೋಣ’ ಎಂದು ಉಷಾ ಧನರಾಜ್ ಟ್ವೀಟ್ ಮೂಲಕ ಒತ್ತಾಯಿಸಿದರು.</p>.<p>‘ಈ ಮರಗಳು ಜಲಾನಯನ ಪ್ರದೇಶವನ್ನು ರಕ್ಷಿಸುತ್ತಿವೆ. ದಶಕಗಳಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗುತ್ತಿವೆ. ಇಲ್ಲಿನ ಜೀವಿ ಪರಿಸರ ವ್ಯವಸ್ಥೆ ಆಸುಪಾಸಿನ ಗ್ರಾಮಸ್ಥರನ್ನೂ ಪೊರಯುತ್ತಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿಯದೆಯೂ ಈ ಕೆರೆಯ ಅಭಿವೃದ್ಧಿ ಸಾಧ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸತನ್ನು ಸೃಷ್ಟಿಸುವ ಭರದಲ್ಲಿ ಪರಿಸರವ್ಯವಸ್ಥೆಯನ್ನು ನಾಶಪಡಿಸುವುದಾದರೂ ಏಕೆ’ ಎಂದು ಅವರು ಪ್ರಶ್ನಿಸಿದರು.</p>.<p>ಈ ಮರಗಳನ್ನು ಕಡಿಯದೆಯೇ ಕೆರೆಯ ಪುನರುಜ್ಜೀವನ ಕೈಗೊಳ್ಳಬೇಕು ಎಂದು ವಿಕ್ರಮ್ ವಿಜಯ್ ಅವರು ಟ್ವೀಟ್ ಮೂಲಕ ಒತ್ತಾಯಿಸಿದರು.</p>.<p>ಸಿಂಗನಾಯಕನಹಳ್ಳಿ ಕೆರೆಯಂಗಳದಲ್ಲಿ ಬೆಳೆದ ಮರಗಳ ಚಿತ್ರವನ್ನು ಟ್ವೀಟ್ ಮಾಡಿದ ಯೋಗದಾ ಜೋಷಿ, ‘ಹೆಬ್ಬಾಳ– ನಾಗವಾರ ಕಣಿವೆಯ ಕೆರೆಗಳ ಅಭಿವೃದ್ಧಿ ಯೋಜನೆ ಜಾರಿಯದಾರೆ ನಾವು ಹೃದಯವನ್ನೇ ಕಳೆದುಕೊಂಡಂತೆ. ಈ ಯೋಜನೆ ಕೈಬಿಡಿ’ ಎಂದು ಒತ್ತಾಯಿಸಿದರು.</p>.<p>‘ಮರಗಳನ್ನು ಕಡಿಯುವ ಪರಿಪಾಠ ನಿಲ್ಲಿಸಿ. ಮರಗಳನ್ನು ರಕ್ಷಿಸಿ. ಬೆಂಗಳೂರನ್ನು ಕಾಪಾಡಿ’ ಎಂದು ಪದ್ಮಿನಿ ಟ್ವೀಟ್ ಮೂಲಕ ಕೋರಿದರು.</p>.<p>ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ರಾಜ್ಯ ಸರ್ಕಾರ ಮರಗಳನ್ನು ಕಡಿಯಬೇಕಾಗುವ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಕೆರೆ ನಿರ್ಮಿಸಲು ಈ ಸಲ 6 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಮುಂದಾಗಿದೆ. ಈ ಯೋಜನೆಗೆ ಮಂಜೂರಾತಿ ನೀಡಬಾರದು ಎಂದು ಮಾಲಿನಿ ಪರ್ಮಾರ್ ಒತ್ತಾಯಿಸಿದರು.</p>.<p class="Briefhead"><strong>ಗಮನ ಸೆಳೆದ ಟ್ವೀಟ್ಗಳು</strong></p>.<p>ನಿಮಗೆ ಯಾವುದನ್ನು ಸೃಷ್ಟಿಸಲು ಸಾಧ್ಯವಿಲ್ಲವೋ ಅವುಗಳನ್ನು ನಾಶಪಡಿಸಬೇಡಿ.<br /><em><strong>–ರಜತ್</strong></em></p>.<p>**<br />6,316 ಮರಗಳನ್ನು ಕಡಿಯುವುದರಿಂದ ಪರಿಸರ ವ್ಯವಸ್ಥೆ ಮಾತ್ರ ವಿನಾಶವಾಗುವುದಲ್ಲ ಈ ದೊಡ್ಡ ಪ್ರದೇಶದ ಸುತ್ತಲಿನ ಬಯೋಮಂಡಲವೇ ನಾಶವಾಗುತ್ತದೆ. ಕೆರೆ ಇಲ್ಲದ ಕಾಡು ಕಾಡಿಲ್ಲದ ಕೆರೆಗಿಂತ ಎಷ್ಟೋ ವಾಸಿ.<br /><em><strong>–ಸಂಕರ್ಷಣ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಿಂಗನಾಯಕನಹಳ್ಳಿ ಕೆರೆಯ ಅಭಿವೃದ್ಧಿಗಾಗಿ 6,316 ಮರಗಳನ್ನು ಕಡಿಯುವ ಪ್ರಸ್ತಾವವನ್ನು ವಿರೋಧಿಸಿ ಅನೇಕರು ಟ್ವಿಟರ್ನಲ್ಲಿ ಬುಧವಾರ ಅಭಿಪ್ರಾಯ ಹಂಚಿಕೊಂಡರು.</p>.<p>ಪರಿಸರ ಕಾಳಜಿ ಇರುವ ಸಮಾನ ಮನಸ್ಕ ಸಂಘಟನೆಗಳು ಸೇರಿಕೊಂಡು ಹಮ್ಮಿಕೊಂಡ ಈ ಟ್ವಿಟರ್ ಅಭಿಯಾನಕ್ಕೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದರು.</p>.<p>‘ನರಿ, ಹಾವುಗಳು, ಹಕ್ಕಿಗಳಂತಹ ಸಮೃದ್ಧ ಜೀವವೈವಿಧ್ಯದ ಜೊತೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅನುಸೂಚಿತ ಪಕ್ಷಿಯಾಗಿರುವ ನವಿಲುಗಳಿಗೂ ಸಿಂಗನಾಯಕನಹಳ್ಳಿ ಕೆರೆಯಂಗಳ ನೆಲೆ ಒದಗಿಸಿದೆ. ಇಲ್ಲಿನ 6,316 ಮರಗಳನ್ನು ಕಡಿಯುವುದು ಬೇಡ ಎನ್ನೋಣ’ ಎಂದು ಉಷಾ ಧನರಾಜ್ ಟ್ವೀಟ್ ಮೂಲಕ ಒತ್ತಾಯಿಸಿದರು.</p>.<p>‘ಈ ಮರಗಳು ಜಲಾನಯನ ಪ್ರದೇಶವನ್ನು ರಕ್ಷಿಸುತ್ತಿವೆ. ದಶಕಗಳಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗುತ್ತಿವೆ. ಇಲ್ಲಿನ ಜೀವಿ ಪರಿಸರ ವ್ಯವಸ್ಥೆ ಆಸುಪಾಸಿನ ಗ್ರಾಮಸ್ಥರನ್ನೂ ಪೊರಯುತ್ತಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿಯದೆಯೂ ಈ ಕೆರೆಯ ಅಭಿವೃದ್ಧಿ ಸಾಧ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸತನ್ನು ಸೃಷ್ಟಿಸುವ ಭರದಲ್ಲಿ ಪರಿಸರವ್ಯವಸ್ಥೆಯನ್ನು ನಾಶಪಡಿಸುವುದಾದರೂ ಏಕೆ’ ಎಂದು ಅವರು ಪ್ರಶ್ನಿಸಿದರು.</p>.<p>ಈ ಮರಗಳನ್ನು ಕಡಿಯದೆಯೇ ಕೆರೆಯ ಪುನರುಜ್ಜೀವನ ಕೈಗೊಳ್ಳಬೇಕು ಎಂದು ವಿಕ್ರಮ್ ವಿಜಯ್ ಅವರು ಟ್ವೀಟ್ ಮೂಲಕ ಒತ್ತಾಯಿಸಿದರು.</p>.<p>ಸಿಂಗನಾಯಕನಹಳ್ಳಿ ಕೆರೆಯಂಗಳದಲ್ಲಿ ಬೆಳೆದ ಮರಗಳ ಚಿತ್ರವನ್ನು ಟ್ವೀಟ್ ಮಾಡಿದ ಯೋಗದಾ ಜೋಷಿ, ‘ಹೆಬ್ಬಾಳ– ನಾಗವಾರ ಕಣಿವೆಯ ಕೆರೆಗಳ ಅಭಿವೃದ್ಧಿ ಯೋಜನೆ ಜಾರಿಯದಾರೆ ನಾವು ಹೃದಯವನ್ನೇ ಕಳೆದುಕೊಂಡಂತೆ. ಈ ಯೋಜನೆ ಕೈಬಿಡಿ’ ಎಂದು ಒತ್ತಾಯಿಸಿದರು.</p>.<p>‘ಮರಗಳನ್ನು ಕಡಿಯುವ ಪರಿಪಾಠ ನಿಲ್ಲಿಸಿ. ಮರಗಳನ್ನು ರಕ್ಷಿಸಿ. ಬೆಂಗಳೂರನ್ನು ಕಾಪಾಡಿ’ ಎಂದು ಪದ್ಮಿನಿ ಟ್ವೀಟ್ ಮೂಲಕ ಕೋರಿದರು.</p>.<p>ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ರಾಜ್ಯ ಸರ್ಕಾರ ಮರಗಳನ್ನು ಕಡಿಯಬೇಕಾಗುವ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಕೆರೆ ನಿರ್ಮಿಸಲು ಈ ಸಲ 6 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಮುಂದಾಗಿದೆ. ಈ ಯೋಜನೆಗೆ ಮಂಜೂರಾತಿ ನೀಡಬಾರದು ಎಂದು ಮಾಲಿನಿ ಪರ್ಮಾರ್ ಒತ್ತಾಯಿಸಿದರು.</p>.<p class="Briefhead"><strong>ಗಮನ ಸೆಳೆದ ಟ್ವೀಟ್ಗಳು</strong></p>.<p>ನಿಮಗೆ ಯಾವುದನ್ನು ಸೃಷ್ಟಿಸಲು ಸಾಧ್ಯವಿಲ್ಲವೋ ಅವುಗಳನ್ನು ನಾಶಪಡಿಸಬೇಡಿ.<br /><em><strong>–ರಜತ್</strong></em></p>.<p>**<br />6,316 ಮರಗಳನ್ನು ಕಡಿಯುವುದರಿಂದ ಪರಿಸರ ವ್ಯವಸ್ಥೆ ಮಾತ್ರ ವಿನಾಶವಾಗುವುದಲ್ಲ ಈ ದೊಡ್ಡ ಪ್ರದೇಶದ ಸುತ್ತಲಿನ ಬಯೋಮಂಡಲವೇ ನಾಶವಾಗುತ್ತದೆ. ಕೆರೆ ಇಲ್ಲದ ಕಾಡು ಕಾಡಿಲ್ಲದ ಕೆರೆಗಿಂತ ಎಷ್ಟೋ ವಾಸಿ.<br /><em><strong>–ಸಂಕರ್ಷಣ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>