<p><strong>ಬೆಂಗಳೂರು:</strong> 'ರಾಜಕಾರಣಿಗಳ ಒತ್ತಡದಿಂದ ಕುಲಪತಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.</p>.<p>ಮಾಜಿ ಕುಲಪತಿಗಳ ವೇದಿಕೆ ನಗರದ ಅರಮನೆ ರಸ್ತೆಯ ಹಳೆ ಕಾನೂನು ಕಾಲೇಜು ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>'ವಿಶ್ವವಿದ್ಯಾಲಯಗಳು ಸ್ವಾಯತ್ತೆಯನ್ನು ಕಳೆದುಕೊಂಡಿವೆ. ಪಾರದರ್ಶಕತೆ ಇಲ್ಲ. ಭ್ರಷ್ಟಾಚಾರ, ಪಕ್ಷಪಾತ ಹೆಚ್ಚಾಗಿದ್ದು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿವೆ' ಎಂದು ಹೇಳಿದರು.</p>.<p>ವಿಶ್ರಾಂತ ಕುಲತಿಗಳಾದ ಎಂ.ಎನ್.ಶೀಲವಂತರ್, ಬಿ.ಎಸ್.ಶೇರಿಗಾರ, ಜೆ.ಎಚ್.ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.</p>.<p>ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಎಚ್.ಮಹೇಶಪ್ಪ, ಖಜಾಂಚಿ ಎಸ್. ಸಚ್ಚಿದಾನಂದ, ಕೆ.ನಾರಾಯಣಗೌಡ, ಪದ್ಮಾಶೇಖರ್, ಬಿ.ಜಿ.ಸಂಗಮೇಶ್ವರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 'ರಾಜಕಾರಣಿಗಳ ಒತ್ತಡದಿಂದ ಕುಲಪತಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.</p>.<p>ಮಾಜಿ ಕುಲಪತಿಗಳ ವೇದಿಕೆ ನಗರದ ಅರಮನೆ ರಸ್ತೆಯ ಹಳೆ ಕಾನೂನು ಕಾಲೇಜು ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>'ವಿಶ್ವವಿದ್ಯಾಲಯಗಳು ಸ್ವಾಯತ್ತೆಯನ್ನು ಕಳೆದುಕೊಂಡಿವೆ. ಪಾರದರ್ಶಕತೆ ಇಲ್ಲ. ಭ್ರಷ್ಟಾಚಾರ, ಪಕ್ಷಪಾತ ಹೆಚ್ಚಾಗಿದ್ದು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿವೆ' ಎಂದು ಹೇಳಿದರು.</p>.<p>ವಿಶ್ರಾಂತ ಕುಲತಿಗಳಾದ ಎಂ.ಎನ್.ಶೀಲವಂತರ್, ಬಿ.ಎಸ್.ಶೇರಿಗಾರ, ಜೆ.ಎಚ್.ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.</p>.<p>ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಎಚ್.ಮಹೇಶಪ್ಪ, ಖಜಾಂಚಿ ಎಸ್. ಸಚ್ಚಿದಾನಂದ, ಕೆ.ನಾರಾಯಣಗೌಡ, ಪದ್ಮಾಶೇಖರ್, ಬಿ.ಜಿ.ಸಂಗಮೇಶ್ವರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>