ಮಳೆಯಾದ ಸಂದರ್ಭದಲ್ಲಿ ಈ ಮೇಲುಸೇತುವೆ ಇಳಿಜಾರಿನ ಬಳಿ ನೀರು ನಿಂತು ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ನಿವಾರಿಸಲು ಇಲ್ಲಿನ ಮೇಲ್ಸೇತುವೆ ಇಳಿಜಾರಿಗೆ ವೈಟ್ಟಾಪಿಂಗ್ ನಡೆಸಲು ಮತ್ತು ಅಡ್ಡಮೋರಿಯನ್ನು ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿತ್ತು. ಸಂಚಾರ ವಿಭಾಗದ ಪೊಲೀಸರು ಈ ಕಾಮಗಾರಿಯನ್ನು 15 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಿ ಇಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಅನುಮತಿ ನೀಡಿದ್ದರು. ಈ ಕಾಮಗಾರಿಯನ್ನು ಆ. 07ರಂದು ಪ್ರಾರಂಭಿಸಲಾಗಿತ್ತು.