<p><strong>ಬಸವಕಲ್ಯಾಣ</strong>: ಸಮಾಜಸೇವೆ ಕೈಗೊಳ್ಳಲು ಸಂಘಟನೆಯ ಅಗತ್ಯವಿದೆ. ಉತ್ತಮ ಉದ್ದೇಶದಿಂದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘ ರಚಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಸದಾನಂದ ಬಿರಾದಾರ ಹೇಳಿದರು.</p>.<p>ನಗರದ ಗೋಸಾಯಿ ಓಣಿಯಲ್ಲಿನ ಮಹಂತ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಂಘದ ಅಧ್ಯಕ್ಷ ರಾಜಕುಮಾರ ಭೋಸಲೆ ಮಾತನಾಡಿ, ಮರಾಠಾ ಸಮಾಜದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಯತ್ನಿಸಲಾಗುವುದು ಎಂದರು.</p>.<p>ಸತೀಶ ಬಿರಾದಾರ ಮಾತನಾಡಿದರು. ಮಹಂತ ಮಠದ ಜಗದೀಶಗಿರಿ ಜಹಾಗೀರದಾರ ಭಾವಚಿತ್ರದ ಪೂಜೆ ನೆರವೆರಿಸಿದರು.</p>.<p class="Subhead"><strong>ಪದಾಧಿಕಾರಿಗಳು</strong>: ಈ ವೇಳೆ ಸಂಘದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸದಾನಂದ ಬಿರಾದಾರ (ಗೌರವ ಅಧ್ಯಕ್ಷ), ರಾಜಕುಮಾರ ಭೋಸಲೆ(ಅಧ್ಯಕ್ಷ), ಲಕ್ಷ್ಮಣ ಕಪನೂರೆ (ಕಾರ್ಯಾಧ್ಯಕ್ಷ), ಅಮಯಗಿರಿ ಜಹಾಗೀರದಾರ (ಉಪಾಧ್ಯಕ್ಷ/ ಖಜಾಂಚಿ), ಪರಮೇಶ್ವರ ಬಿರಾದಾರ(ಉಪಾಧ್ಯಕ್ಷ), ಸೂರಜ್ ಪಾಟೀಲ(ಪ್ರಧಾನ ಕಾರ್ಯದರ್ಶಿ), ಸತೀಶ ಬಿರಾದಾರ(ಕಾರ್ಯದರ್ಶಿ), ರಾಹುಲ್ ಪಾಟೀಲ(ಜಂಟಿ ಕಾರ್ಯ ದರ್ಶಿ), ದಿನೇಶ ಭೋಸಲೆ(ಸಂಘಟನಾ ಕಾರ್ಯದರ್ಶಿ) ಹಾಗೂ ನಿರ್ದೇಶಕರನ್ನಾಗಿ ಪ್ರದೀಪ ಶಿಂಧೆ, ಸಾಗರ ಜಾಧವ, ಈಶ್ವರ ಗವಳಿ, ಗುಂಡಾಜಿ ಜಾಧವ, ಅರವಿಂದ ಪವಾರ ಅವರನ್ನು ನೇಮಿಸಲಾಗಿದೆ.</p>.<p>ಸಭೆಯಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ಸಮಾಜಸೇವೆ ಕೈಗೊಳ್ಳಲು ಸಂಘಟನೆಯ ಅಗತ್ಯವಿದೆ. ಉತ್ತಮ ಉದ್ದೇಶದಿಂದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘ ರಚಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಸದಾನಂದ ಬಿರಾದಾರ ಹೇಳಿದರು.</p>.<p>ನಗರದ ಗೋಸಾಯಿ ಓಣಿಯಲ್ಲಿನ ಮಹಂತ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಂಘದ ಅಧ್ಯಕ್ಷ ರಾಜಕುಮಾರ ಭೋಸಲೆ ಮಾತನಾಡಿ, ಮರಾಠಾ ಸಮಾಜದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಯತ್ನಿಸಲಾಗುವುದು ಎಂದರು.</p>.<p>ಸತೀಶ ಬಿರಾದಾರ ಮಾತನಾಡಿದರು. ಮಹಂತ ಮಠದ ಜಗದೀಶಗಿರಿ ಜಹಾಗೀರದಾರ ಭಾವಚಿತ್ರದ ಪೂಜೆ ನೆರವೆರಿಸಿದರು.</p>.<p class="Subhead"><strong>ಪದಾಧಿಕಾರಿಗಳು</strong>: ಈ ವೇಳೆ ಸಂಘದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸದಾನಂದ ಬಿರಾದಾರ (ಗೌರವ ಅಧ್ಯಕ್ಷ), ರಾಜಕುಮಾರ ಭೋಸಲೆ(ಅಧ್ಯಕ್ಷ), ಲಕ್ಷ್ಮಣ ಕಪನೂರೆ (ಕಾರ್ಯಾಧ್ಯಕ್ಷ), ಅಮಯಗಿರಿ ಜಹಾಗೀರದಾರ (ಉಪಾಧ್ಯಕ್ಷ/ ಖಜಾಂಚಿ), ಪರಮೇಶ್ವರ ಬಿರಾದಾರ(ಉಪಾಧ್ಯಕ್ಷ), ಸೂರಜ್ ಪಾಟೀಲ(ಪ್ರಧಾನ ಕಾರ್ಯದರ್ಶಿ), ಸತೀಶ ಬಿರಾದಾರ(ಕಾರ್ಯದರ್ಶಿ), ರಾಹುಲ್ ಪಾಟೀಲ(ಜಂಟಿ ಕಾರ್ಯ ದರ್ಶಿ), ದಿನೇಶ ಭೋಸಲೆ(ಸಂಘಟನಾ ಕಾರ್ಯದರ್ಶಿ) ಹಾಗೂ ನಿರ್ದೇಶಕರನ್ನಾಗಿ ಪ್ರದೀಪ ಶಿಂಧೆ, ಸಾಗರ ಜಾಧವ, ಈಶ್ವರ ಗವಳಿ, ಗುಂಡಾಜಿ ಜಾಧವ, ಅರವಿಂದ ಪವಾರ ಅವರನ್ನು ನೇಮಿಸಲಾಗಿದೆ.</p>.<p>ಸಭೆಯಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>