ಒಂದಿಡಿ ಸಾಲಿನಲ್ಲಿ ಆಸನಗಳು ಕಿತ್ತು ಹೋಗಿದ್ದು ಲೋಹ ಅಪಾಯಕ್ಕೆ ಆಹ್ವಾನಿಸುವಂತಿದೆ
ಎರಡು ವರ್ಷಗಳ ಹಿಂದೆ ರಂಗಮಂದಿರ ನವೀಕರಣಗೊಳಿಸಲಾಗಿದೆ. ಆದರೆ ಭ್ರಷ್ಟಾಚಾರದಿಂದ ಕಳಪೆ ಕಾಮಗಾರಿ ಆಗಿದೆ. ಜಿಲ್ಲಾಡಳಿತ ಸರಿಪಡಿಸುವ ಕೆಲಸ ಮಾಡಬೇಕು
ರಮೇಶ ಬಿರಾದಾರ ಅಧ್ಯಕ್ಷ ಬೀದರ್ ಜಿಲ್ಲಾ ವಿಕಾಸ ವೇದಿಕೆ
ನಿರ್ವಹಣೆಗೇಕೆ ಸಮಸ್ಯೆ?
ರಂಗಮಂದಿರದಲ್ಲಿ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ಆದಾಯವೂ ಬರುತ್ತಿದೆ. ಆದರೆ ನಿರ್ವಹಣೆಗೇಕೆ ಸಮಸ್ಯೆಯಾಗುತ್ತಿದೆ? ಇದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇತರೆ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ರಂಗಮಂದಿರಗಳಿವೆ. ಬೀದರ್ ಜಿಲ್ಲೆ ಸಾಕಷ್ಟು ಬೆಳೆದಿದೆ. ಅನೇಕ ಜಿಲ್ಲಾ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಿ ಅದನ್ನು ಸುಧಾರಿಸುವ ಗೋಜಿಗೆ ಜಿಲ್ಲಾಡಳಿತ ಮುಂದಾಗದಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.