<p><strong>ಕಮಲನಗರ: </strong>ಸಮಾಜದಲ್ಲಿ ಶಾಂತಿ, ಸಹೋದರಂತೆ ನೆಲಸಲು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮನುಕುಲದ ಒಳಿತಿಗಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಭು ಚವಾಣ್ ಹೇಳಿದರು.</p>.<p>ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿ ಮಾತಾ ಜಗದಂಬಾ ದೇವಿ 10ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉದ್ಗಾಟಿಸಿ ಮಾತನಾಡಿದರು.</p>.<p>12ನೇ ಶತಮಾನದ ಬಸವಾದಿ ಶಿವ ಶರಣರ ತತ್ವಗಳು ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿವೆ.</p>.<p>ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ನಿಜವಾದ ಪ್ರಜಾಪ್ರಭುತ್ವ ರೂಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ತತ್ವಗಳು ಮಾಗದರ್ಶಿ ಎಂದು ಹೇಳಿದರು.</p>.<p>ನಾನು ಜಗದಂಬಾ ಮಾತೆ, ಸಂತ ಸೇವಾಲಾಲ್ ಹಾಗೂ ರಾಮರಾವ್ ಮಹಾರಾಜರನ್ನು ಸದಾ ಆರಾಧಿಸುತ್ತೇನೆ. ದೇವಿಯ ಕೃಪೆಯಿಂದ ಉನ್ನತಿ ಸಾಧ್ಯ ಎಂದು ತಿಳಿಸಿದರು.</p>.<p>ರಾಮರಾವ್ ಮಹಾರಾಜರಿಂದ ಧ್ವಜಾರೋಹಣ ನೆರವೇರಿಸಿದರು. ನಂತರ ಜಾನಪದ ಜಾತ್ರೆ ಹಾಗೂ ಭಜನಾ ಮೇಳ ನಡೆದವು.</p>.<p>ಜಿಪಂ ಸದಸ್ಯ ಮಾರುತಿ ಸವಾಣ್, ಗುತ್ತಿಗೆದಾರ್ ಸೂರ್ಯಕಾಂತ ಅಲಮಾಜೆ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಸಚಿನ ರಾಠೋಡ್, ಅರಹಂತ ಸಾವಳೆ, ಶಿವಾನಂದ ವಡ್ಡೆ, ಪ್ರವೀಣ ಜಾಧವ್, ಜೈಪಾಲ, ದಿಲೀಪ ಚವಾಣ್, ಭವರಾವ್ ಚವಾಣ್ ಇದ್ದರು.</p>.<p><strong>ಕುರಿಗಳಿಗೆ ಲಸಿಕೆ:</strong> ಘಮಸುಬಾಯಿ ತಾಂಡಾದ ಜಗದಂಬಾ ಜಾತ್ರಾ ಮಹೋತ್ಸವದ ಜಾನಪದ ಜಾತ್ರೆ ಸಂದರ್ಭದಲ್ಲಿ ಸಚಿವರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕುರಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.</p>.<p>ಸಮಾರಂಭದಲ್ಲಿ ಭಾಗವಹಿಸಿದ್ದ ಜಾನಪದ ಕಲಾ ತಂಡಗಳಿಗೆ ಸಚಿವರು ಜಮಖಾನೆಗಳನ್ನು ಪ್ರಭು ಎಂಟರ್ ಪ್ರೈಸೆಸ್ ಮುಂಬೈ ವತಿಯಿಂದ ವಿತರಿಸಿದರು.</p>.<p><strong>ಇಂದು ಕುಸ್ತಿ ಪಂದ್ಯಾವಳಿ:</strong>ಜಾತ್ರಾ ಮಹೋತ್ಸವ ನಿಮಿತ್ತ 12ರಂದು ರಾಮರಾವ್ ಮಹಾರಾಜರಿಂದ ದೇವಿ ಜಗದಂಬಾ ಮೂರ್ತಿಯ ಮಹಾ ಪೂಜೆ ಹಾಗೂ ಮಧ್ಯಾಹ್ನ 2 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ: </strong>ಸಮಾಜದಲ್ಲಿ ಶಾಂತಿ, ಸಹೋದರಂತೆ ನೆಲಸಲು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮನುಕುಲದ ಒಳಿತಿಗಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಭು ಚವಾಣ್ ಹೇಳಿದರು.</p>.<p>ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿ ಮಾತಾ ಜಗದಂಬಾ ದೇವಿ 10ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉದ್ಗಾಟಿಸಿ ಮಾತನಾಡಿದರು.</p>.<p>12ನೇ ಶತಮಾನದ ಬಸವಾದಿ ಶಿವ ಶರಣರ ತತ್ವಗಳು ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿವೆ.</p>.<p>ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ನಿಜವಾದ ಪ್ರಜಾಪ್ರಭುತ್ವ ರೂಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ತತ್ವಗಳು ಮಾಗದರ್ಶಿ ಎಂದು ಹೇಳಿದರು.</p>.<p>ನಾನು ಜಗದಂಬಾ ಮಾತೆ, ಸಂತ ಸೇವಾಲಾಲ್ ಹಾಗೂ ರಾಮರಾವ್ ಮಹಾರಾಜರನ್ನು ಸದಾ ಆರಾಧಿಸುತ್ತೇನೆ. ದೇವಿಯ ಕೃಪೆಯಿಂದ ಉನ್ನತಿ ಸಾಧ್ಯ ಎಂದು ತಿಳಿಸಿದರು.</p>.<p>ರಾಮರಾವ್ ಮಹಾರಾಜರಿಂದ ಧ್ವಜಾರೋಹಣ ನೆರವೇರಿಸಿದರು. ನಂತರ ಜಾನಪದ ಜಾತ್ರೆ ಹಾಗೂ ಭಜನಾ ಮೇಳ ನಡೆದವು.</p>.<p>ಜಿಪಂ ಸದಸ್ಯ ಮಾರುತಿ ಸವಾಣ್, ಗುತ್ತಿಗೆದಾರ್ ಸೂರ್ಯಕಾಂತ ಅಲಮಾಜೆ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಸಚಿನ ರಾಠೋಡ್, ಅರಹಂತ ಸಾವಳೆ, ಶಿವಾನಂದ ವಡ್ಡೆ, ಪ್ರವೀಣ ಜಾಧವ್, ಜೈಪಾಲ, ದಿಲೀಪ ಚವಾಣ್, ಭವರಾವ್ ಚವಾಣ್ ಇದ್ದರು.</p>.<p><strong>ಕುರಿಗಳಿಗೆ ಲಸಿಕೆ:</strong> ಘಮಸುಬಾಯಿ ತಾಂಡಾದ ಜಗದಂಬಾ ಜಾತ್ರಾ ಮಹೋತ್ಸವದ ಜಾನಪದ ಜಾತ್ರೆ ಸಂದರ್ಭದಲ್ಲಿ ಸಚಿವರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕುರಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.</p>.<p>ಸಮಾರಂಭದಲ್ಲಿ ಭಾಗವಹಿಸಿದ್ದ ಜಾನಪದ ಕಲಾ ತಂಡಗಳಿಗೆ ಸಚಿವರು ಜಮಖಾನೆಗಳನ್ನು ಪ್ರಭು ಎಂಟರ್ ಪ್ರೈಸೆಸ್ ಮುಂಬೈ ವತಿಯಿಂದ ವಿತರಿಸಿದರು.</p>.<p><strong>ಇಂದು ಕುಸ್ತಿ ಪಂದ್ಯಾವಳಿ:</strong>ಜಾತ್ರಾ ಮಹೋತ್ಸವ ನಿಮಿತ್ತ 12ರಂದು ರಾಮರಾವ್ ಮಹಾರಾಜರಿಂದ ದೇವಿ ಜಗದಂಬಾ ಮೂರ್ತಿಯ ಮಹಾ ಪೂಜೆ ಹಾಗೂ ಮಧ್ಯಾಹ್ನ 2 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>