ಕಮಲನಗರ: ಸಮಾಜದಲ್ಲಿ ಶಾಂತಿ, ಸಹೋದರಂತೆ ನೆಲಸಲು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮನುಕುಲದ ಒಳಿತಿಗಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಭು ಚವಾಣ್ ಹೇಳಿದರು.
ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿ ಮಾತಾ ಜಗದಂಬಾ ದೇವಿ 10ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉದ್ಗಾಟಿಸಿ ಮಾತನಾಡಿದರು.
12ನೇ ಶತಮಾನದ ಬಸವಾದಿ ಶಿವ ಶರಣರ ತತ್ವಗಳು ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿವೆ.
ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ನಿಜವಾದ ಪ್ರಜಾಪ್ರಭುತ್ವ ರೂಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ತತ್ವಗಳು ಮಾಗದರ್ಶಿ ಎಂದು ಹೇಳಿದರು.
ನಾನು ಜಗದಂಬಾ ಮಾತೆ, ಸಂತ ಸೇವಾಲಾಲ್ ಹಾಗೂ ರಾಮರಾವ್ ಮಹಾರಾಜರನ್ನು ಸದಾ ಆರಾಧಿಸುತ್ತೇನೆ. ದೇವಿಯ ಕೃಪೆಯಿಂದ ಉನ್ನತಿ ಸಾಧ್ಯ ಎಂದು ತಿಳಿಸಿದರು.
ರಾಮರಾವ್ ಮಹಾರಾಜರಿಂದ ಧ್ವಜಾರೋಹಣ ನೆರವೇರಿಸಿದರು. ನಂತರ ಜಾನಪದ ಜಾತ್ರೆ ಹಾಗೂ ಭಜನಾ ಮೇಳ ನಡೆದವು.
ಕುರಿಗಳಿಗೆ ಲಸಿಕೆ: ಘಮಸುಬಾಯಿ ತಾಂಡಾದ ಜಗದಂಬಾ ಜಾತ್ರಾ ಮಹೋತ್ಸವದ ಜಾನಪದ ಜಾತ್ರೆ ಸಂದರ್ಭದಲ್ಲಿ ಸಚಿವರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕುರಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಜಾನಪದ ಕಲಾ ತಂಡಗಳಿಗೆ ಸಚಿವರು ಜಮಖಾನೆಗಳನ್ನು ಪ್ರಭು ಎಂಟರ್ ಪ್ರೈಸೆಸ್ ಮುಂಬೈ ವತಿಯಿಂದ ವಿತರಿಸಿದರು.
ಇಂದು ಕುಸ್ತಿ ಪಂದ್ಯಾವಳಿ:ಜಾತ್ರಾ ಮಹೋತ್ಸವ ನಿಮಿತ್ತ 12ರಂದು ರಾಮರಾವ್ ಮಹಾರಾಜರಿಂದ ದೇವಿ ಜಗದಂಬಾ ಮೂರ್ತಿಯ ಮಹಾ ಪೂಜೆ ಹಾಗೂ ಮಧ್ಯಾಹ್ನ 2 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ.