<p><strong>ಬಸವಕಲ್ಯಾಣ</strong>: ‘ಜಗಜ್ಯೋತಿ ಬಸವೇಶ್ವರರಿಗೆ ಜಂಗಮರೆಂದರೆ ಪಂಚಪ್ರಾಣ. ಕಾಶ್ಮೀರದಿಂದ ಜಂಗಮರನ್ನು ಅವರು ಕರೆತಂದರು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.</p>.<p>ನಗರದ ಬಿಕೆಡಿಬಿ ಸಭಾಂಗಣದಲ್ಲಿ ಗುರುವಾರ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆಯಲ್ಲಿ ಅವರು ಮಾತನಾಡಿದರು.</p>.<p>‘ಗುರು ಮತ್ತು ಜಂಗಮ ಒಂದೇ ಎನ್ನಬಹುದು. ಸಿದ್ಧಾಂತ ಶಿಖಾಮಣಿಯಲ್ಲಿ ಈ ಇಬ್ಬರಲ್ಲಿ ಭೇದಭಾವ ಮಾಡಕೂಡದು ಎನ್ನಲಾಗಿದೆ. ಬಸವೇಶ್ವರ ಅವರೇ ನಮ್ಮನ್ನು ಈ ನಾಡಿಗೆ ಕರೆಯಿಸಿ, ಕ್ರಾಂತಿಯ ನೆಲವನ್ನು ಶಾಂತಿಯ ಬೀಡು ಆಗಲೆಂದು ಬಯಸಿದ್ದಾರೆಂದೇ ಕಾರ್ಯಕ್ರಮದ ಸಂಭ್ರಮ ಕಂಡು ನಮಗೆ ಅನಿಸುತ್ತಿದೆ. ಈ ಸ್ಥಳವನ್ನು ನಮ್ಮ ತವರು ಮನೆ ಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಹುಟ್ಟಿಕೊಂಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.</p>.<p>ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಪಾದಪೂಜೆ ಮೂಢನಂಬಿಕೆಯಲ್ಲ. ಅದಕ್ಕೆ ವೈಜ್ಞಾನಿಕ ಕಾರಣವಿದೆ. ಗುರುವಿನ ಪಾದದಲ್ಲಿ ಅವರ ತಪಸ್ಸಿನ ವಿಶಿಷ್ಟ ಶಕ್ತಿ ಇರುತ್ತದೆ. ಈ ಬಗ್ಗೆ ಅಪಪ್ರಚಾರ ಸಲ್ಲದು’ ಎಂದರು.</p>.<p>ಸಿದ್ಧಮಲ್ಲ ಶಿವಾಚಾರ್ಯರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಜಗಜ್ಯೋತಿ ಬಸವೇಶ್ವರರಿಗೆ ಜಂಗಮರೆಂದರೆ ಪಂಚಪ್ರಾಣ. ಕಾಶ್ಮೀರದಿಂದ ಜಂಗಮರನ್ನು ಅವರು ಕರೆತಂದರು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.</p>.<p>ನಗರದ ಬಿಕೆಡಿಬಿ ಸಭಾಂಗಣದಲ್ಲಿ ಗುರುವಾರ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆಯಲ್ಲಿ ಅವರು ಮಾತನಾಡಿದರು.</p>.<p>‘ಗುರು ಮತ್ತು ಜಂಗಮ ಒಂದೇ ಎನ್ನಬಹುದು. ಸಿದ್ಧಾಂತ ಶಿಖಾಮಣಿಯಲ್ಲಿ ಈ ಇಬ್ಬರಲ್ಲಿ ಭೇದಭಾವ ಮಾಡಕೂಡದು ಎನ್ನಲಾಗಿದೆ. ಬಸವೇಶ್ವರ ಅವರೇ ನಮ್ಮನ್ನು ಈ ನಾಡಿಗೆ ಕರೆಯಿಸಿ, ಕ್ರಾಂತಿಯ ನೆಲವನ್ನು ಶಾಂತಿಯ ಬೀಡು ಆಗಲೆಂದು ಬಯಸಿದ್ದಾರೆಂದೇ ಕಾರ್ಯಕ್ರಮದ ಸಂಭ್ರಮ ಕಂಡು ನಮಗೆ ಅನಿಸುತ್ತಿದೆ. ಈ ಸ್ಥಳವನ್ನು ನಮ್ಮ ತವರು ಮನೆ ಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಹುಟ್ಟಿಕೊಂಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.</p>.<p>ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಪಾದಪೂಜೆ ಮೂಢನಂಬಿಕೆಯಲ್ಲ. ಅದಕ್ಕೆ ವೈಜ್ಞಾನಿಕ ಕಾರಣವಿದೆ. ಗುರುವಿನ ಪಾದದಲ್ಲಿ ಅವರ ತಪಸ್ಸಿನ ವಿಶಿಷ್ಟ ಶಕ್ತಿ ಇರುತ್ತದೆ. ಈ ಬಗ್ಗೆ ಅಪಪ್ರಚಾರ ಸಲ್ಲದು’ ಎಂದರು.</p>.<p>ಸಿದ್ಧಮಲ್ಲ ಶಿವಾಚಾರ್ಯರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>