<p><strong>ಚಿಟಗುಪ್ಪ:</strong> ಕೋವಿಡ್ ಪರಿಣಾಮ ಚಿಟಗುಪ್ಪ ಪಟ್ಟಣ ಸೇರಿ ತಾಲ್ಲೂಕಿನ ತಾಳಮಡಗಿ, ನಿರ್ಣಾ, ನಿರ್ಣಾ ವಾಡಿ, ವಳಖಿಂಡಿ, ಇಟಗಾ, ಕುಡಂಬಲ್ ಹಾಗೂ ಮಂಗಲಗಿ ಸೇರಿ ವಿವಿಧ ಗ್ರಾಮಗಳಲ್ಲಿ ರೈತರು ಹೂವು ಬೆಳೆದಿದ್ದಾರೆ. ಮಾರುಕಟ್ಟೆ ಇಲ್ಲದ್ದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಹೂವಿನ ವ್ಯಾಪಾರವೂ ಸರಿಯಾಗಿ ನಡೆಯುತ್ತಿಲ್ಲ. ಕಾರಣ ಹೂವು ಮಾರುವವರು ಆತಂಕಕ್ಕೀಡಾಗಿದ್ದಾರೆ.</p>.<p>ಕೋವಿಡ್ ಸೋಂಕಿನ ಕಾರಣ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಸಭೆ,ಸಮಾರಂಭಗಳೂ ನಡೆಯುತ್ತಿಲ್ಲ. ಇದರಿಂದ ಮಾಲೆಗಳು ಮಾರಾಟ ಆಗುತ್ತಿಲ್ಲ.</p>.<p>‘ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಕುಸಿದಿದೆ. ಚೆಂಡು ಹೂವಿನ ಬೆಳೆ ಹೊಲದಲ್ಲಿಯೇ ಹಾಳಾಗುತ್ತಿದೆ. ಕೃಷಿ ಕಾರ್ಮಿಕರಿಗೆ ಹಣ ಕೊಟ್ಟು ಹೂವು ತೆಗೆಸಬೇಕು. ಇದರಿಂದ ನಷ್ಟವಾಗುತ್ತಿದೆ’ ಎಂದು ರೈತ ಗುರಪ್ಪ ಅಳಲು ತೋಡಿಕೊಂಡರು.</p>.<p>‘ದಿನಪೂರ್ತಿ ರಸ್ತೆ ಬದಿ ಕುಳಿತರೆ 10-12 ಹಾರಗಳು ಮಾರಾಟವಾಗುತ್ತವೆ. ಇದರಿಂದ ₹200, ₹300 ಸಿಗುತ್ತದೆ. ಈ ಹಣದಲ್ಲಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ರೈತರಿಂದ ಖರೀದಿಸಿದ ಹೂವು ಮಾರಾಟವಾಗದೇ ಬಾಡುತ್ತಿದೆ. ರಾತ್ರಿ ಬಿಸಾಡುವ ಪರಿಸ್ಥಿತಿ ಬಂದಿದೆ’ ಎಂದು ಹೂವು ವರ್ತಕ ಶಂಕರ್ ನುಡಿಯುತ್ತಾರೆ.</p>.<p>‘4-5 ತಿಂಗಳಿನಿಂದ ಕೊರೊನಾ ಭೀತಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಹೂವಿನ ಬೆಳೆಗಾರರು ಮತ್ತು ಮಾರಾಟಗಾರರಿಗೆ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ರೈತ ಮುಖಂಡ ನಾರಾಯಣರಾವ್ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ:</strong> ಕೋವಿಡ್ ಪರಿಣಾಮ ಚಿಟಗುಪ್ಪ ಪಟ್ಟಣ ಸೇರಿ ತಾಲ್ಲೂಕಿನ ತಾಳಮಡಗಿ, ನಿರ್ಣಾ, ನಿರ್ಣಾ ವಾಡಿ, ವಳಖಿಂಡಿ, ಇಟಗಾ, ಕುಡಂಬಲ್ ಹಾಗೂ ಮಂಗಲಗಿ ಸೇರಿ ವಿವಿಧ ಗ್ರಾಮಗಳಲ್ಲಿ ರೈತರು ಹೂವು ಬೆಳೆದಿದ್ದಾರೆ. ಮಾರುಕಟ್ಟೆ ಇಲ್ಲದ್ದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಹೂವಿನ ವ್ಯಾಪಾರವೂ ಸರಿಯಾಗಿ ನಡೆಯುತ್ತಿಲ್ಲ. ಕಾರಣ ಹೂವು ಮಾರುವವರು ಆತಂಕಕ್ಕೀಡಾಗಿದ್ದಾರೆ.</p>.<p>ಕೋವಿಡ್ ಸೋಂಕಿನ ಕಾರಣ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಸಭೆ,ಸಮಾರಂಭಗಳೂ ನಡೆಯುತ್ತಿಲ್ಲ. ಇದರಿಂದ ಮಾಲೆಗಳು ಮಾರಾಟ ಆಗುತ್ತಿಲ್ಲ.</p>.<p>‘ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಕುಸಿದಿದೆ. ಚೆಂಡು ಹೂವಿನ ಬೆಳೆ ಹೊಲದಲ್ಲಿಯೇ ಹಾಳಾಗುತ್ತಿದೆ. ಕೃಷಿ ಕಾರ್ಮಿಕರಿಗೆ ಹಣ ಕೊಟ್ಟು ಹೂವು ತೆಗೆಸಬೇಕು. ಇದರಿಂದ ನಷ್ಟವಾಗುತ್ತಿದೆ’ ಎಂದು ರೈತ ಗುರಪ್ಪ ಅಳಲು ತೋಡಿಕೊಂಡರು.</p>.<p>‘ದಿನಪೂರ್ತಿ ರಸ್ತೆ ಬದಿ ಕುಳಿತರೆ 10-12 ಹಾರಗಳು ಮಾರಾಟವಾಗುತ್ತವೆ. ಇದರಿಂದ ₹200, ₹300 ಸಿಗುತ್ತದೆ. ಈ ಹಣದಲ್ಲಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ರೈತರಿಂದ ಖರೀದಿಸಿದ ಹೂವು ಮಾರಾಟವಾಗದೇ ಬಾಡುತ್ತಿದೆ. ರಾತ್ರಿ ಬಿಸಾಡುವ ಪರಿಸ್ಥಿತಿ ಬಂದಿದೆ’ ಎಂದು ಹೂವು ವರ್ತಕ ಶಂಕರ್ ನುಡಿಯುತ್ತಾರೆ.</p>.<p>‘4-5 ತಿಂಗಳಿನಿಂದ ಕೊರೊನಾ ಭೀತಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಹೂವಿನ ಬೆಳೆಗಾರರು ಮತ್ತು ಮಾರಾಟಗಾರರಿಗೆ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ರೈತ ಮುಖಂಡ ನಾರಾಯಣರಾವ್ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>