<p><strong>ಬೀದರ್: </strong>ಜನಪದ ದೇವರು ಕೊಟ್ಟ ವರವಾಗಿದೆ ಎಂದು ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ ನುಡಿದರು.</p>.<p>ಮಹಾತ್ಮ ಗಾಂಧಿ ಮಿತ್ರ ಮಂಡಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ನಗರ ಘಟಕದ ವತಿಯಿಂದ ನಗರದ ರಾಂಪುರೆ ಕಾಲೊನಿಯ ಬಸವರಾಜ ಹೆಗ್ಗೆ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಜನಪದ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೋವಿಡ್ ಸಂದರ್ಭದಲ್ಲಿ ಜನರು ಜನಪದ ಔಷಧಿಯನ್ನೇ ಬಳಸಿದರು. ಹೀಗಾಗಿ ನಾವು ಎಷ್ಟೇ ಮುಂದುವರಿದರೂ ಜನಪದ ಬೇಕೇ ಬೇಕು ಎಂದು ಹೇಳಿದರು.</p>.<p>ಜನಪದ ಸಾಹಿತ್ಯ ಸಿಂಧು ನಾಗರಿಕತೆಯಿಂದ ಬಂದಿದೆ. ಆಗ ಜನ ಹಾಡುವುದು, ನೃತ್ಯ ಮಾಡುವುದನ್ನು ಮಾತ್ರ ಮಾಡುತ್ತಿದ್ದರು. ನಂತರ ಹಾಡುಗಳು ಅಕ್ಷರ ರೂಪ ಪಡೆದುಕೊಂಡವು. ಶರಣರ ವಚನಗಳ ರಚನೆಗೆ ಜನಪದ ಸಂಸ್ಕøತಿಯೇ ಮೂಲವಾಗಿದೆ ಎಂದು ತಿಳಿಸಿದರು.</p>.<p>ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಜನಪದ ಸಂಸ್ಕøತಿಗೆ ಉತ್ತೇಜನ ನೀಡಲು ಕರ್ನಾಟಕ-ತೆಲಂಗಾಣ ಗಡಿಯಲ್ಲಿರುವ ಬೀದರ್ನಲ್ಲಿ ಸಾಂಸ್ಕøತಿಕ ಹಬ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.</p>.<p>ಈ ಭಾಗದ ಜನಪದ ಕಲಾವಿದರು ಹಾಗೂ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವುದು ತಮ್ಮ ಬಯಕೆಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.</p>.<p>ಉಪನ್ಯಾಸಕಿ ರೇಣುಕಾ ಪೂಜಾರಿ ಮಾತನಾಡಿ, ಜನಪದ ಸಂಸ್ಕೃತಿಯಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದು ನುಡಿದರು.</p>.<p>ಹಿಂದೆ ಮಹಿಳೆಯರು ಯಾವುದೇ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆಯದಿದ್ದರೂ, ಸಾವಿರಾರು ಹಾಡುಗಳನ್ನು ಹಾಡುತ್ತಿದ್ದರು. ಕುಟ್ಟುವ, ಬೀಸುವ, ಸೀಮಂತ, ಸೋಬಾನೆ, ತೊಟ್ಟಿಲು, ಜೋಗುಳ, ಸೀಗಿ, ಬುಲಾಯಿ ಪದಗಳು ಅವರ ನಾಲಿಗೆ ತುದಿ ಮೇಲೆ ನಲಿದಾಡುತ್ತಿದ್ದವು ಎಂದು ಹೇಳಿದರು.</p>.<p>ಪರಿಷತ್ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ಜನಪದ ಜೀವನ ಪದ್ಧತಿ ಮೈಗೂಡಿಸಿಕೊಂಡರೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹೇಳಿದರು.</p>.<p>ಪನ್ನಾಲಾಲ್ ಹೀರಾಲಾಲ್ ಕಾಲೇಜು ಪ್ರಾಚಾರ್ಯ ಬಸವರಾಜ ಬುಳ್ಳಾ, ಚಿಟಗುಪ್ಪ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಮಾರುತಿ ರೆಡ್ಡಿ, ಶಿವಶಂಕರ ಬಾಮಂದಿ, ರಮೇಶ ಪಾಟೀಲ, ಮಹಾರುದ್ರ ಪೂಜಾರಿ, ಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.<br />ಸಂತೋಷಿ ಬಿ. ಹೆಗ್ಗೆ ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ ವಚನ ಗಾಯನ ಮಾಡಿದರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಧನರಾಜ ಆನೆಕಲೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಜನಪದ ದೇವರು ಕೊಟ್ಟ ವರವಾಗಿದೆ ಎಂದು ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ ನುಡಿದರು.</p>.<p>ಮಹಾತ್ಮ ಗಾಂಧಿ ಮಿತ್ರ ಮಂಡಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ನಗರ ಘಟಕದ ವತಿಯಿಂದ ನಗರದ ರಾಂಪುರೆ ಕಾಲೊನಿಯ ಬಸವರಾಜ ಹೆಗ್ಗೆ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಜನಪದ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೋವಿಡ್ ಸಂದರ್ಭದಲ್ಲಿ ಜನರು ಜನಪದ ಔಷಧಿಯನ್ನೇ ಬಳಸಿದರು. ಹೀಗಾಗಿ ನಾವು ಎಷ್ಟೇ ಮುಂದುವರಿದರೂ ಜನಪದ ಬೇಕೇ ಬೇಕು ಎಂದು ಹೇಳಿದರು.</p>.<p>ಜನಪದ ಸಾಹಿತ್ಯ ಸಿಂಧು ನಾಗರಿಕತೆಯಿಂದ ಬಂದಿದೆ. ಆಗ ಜನ ಹಾಡುವುದು, ನೃತ್ಯ ಮಾಡುವುದನ್ನು ಮಾತ್ರ ಮಾಡುತ್ತಿದ್ದರು. ನಂತರ ಹಾಡುಗಳು ಅಕ್ಷರ ರೂಪ ಪಡೆದುಕೊಂಡವು. ಶರಣರ ವಚನಗಳ ರಚನೆಗೆ ಜನಪದ ಸಂಸ್ಕøತಿಯೇ ಮೂಲವಾಗಿದೆ ಎಂದು ತಿಳಿಸಿದರು.</p>.<p>ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಜನಪದ ಸಂಸ್ಕøತಿಗೆ ಉತ್ತೇಜನ ನೀಡಲು ಕರ್ನಾಟಕ-ತೆಲಂಗಾಣ ಗಡಿಯಲ್ಲಿರುವ ಬೀದರ್ನಲ್ಲಿ ಸಾಂಸ್ಕøತಿಕ ಹಬ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.</p>.<p>ಈ ಭಾಗದ ಜನಪದ ಕಲಾವಿದರು ಹಾಗೂ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವುದು ತಮ್ಮ ಬಯಕೆಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.</p>.<p>ಉಪನ್ಯಾಸಕಿ ರೇಣುಕಾ ಪೂಜಾರಿ ಮಾತನಾಡಿ, ಜನಪದ ಸಂಸ್ಕೃತಿಯಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದು ನುಡಿದರು.</p>.<p>ಹಿಂದೆ ಮಹಿಳೆಯರು ಯಾವುದೇ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆಯದಿದ್ದರೂ, ಸಾವಿರಾರು ಹಾಡುಗಳನ್ನು ಹಾಡುತ್ತಿದ್ದರು. ಕುಟ್ಟುವ, ಬೀಸುವ, ಸೀಮಂತ, ಸೋಬಾನೆ, ತೊಟ್ಟಿಲು, ಜೋಗುಳ, ಸೀಗಿ, ಬುಲಾಯಿ ಪದಗಳು ಅವರ ನಾಲಿಗೆ ತುದಿ ಮೇಲೆ ನಲಿದಾಡುತ್ತಿದ್ದವು ಎಂದು ಹೇಳಿದರು.</p>.<p>ಪರಿಷತ್ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ಜನಪದ ಜೀವನ ಪದ್ಧತಿ ಮೈಗೂಡಿಸಿಕೊಂಡರೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹೇಳಿದರು.</p>.<p>ಪನ್ನಾಲಾಲ್ ಹೀರಾಲಾಲ್ ಕಾಲೇಜು ಪ್ರಾಚಾರ್ಯ ಬಸವರಾಜ ಬುಳ್ಳಾ, ಚಿಟಗುಪ್ಪ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಮಾರುತಿ ರೆಡ್ಡಿ, ಶಿವಶಂಕರ ಬಾಮಂದಿ, ರಮೇಶ ಪಾಟೀಲ, ಮಹಾರುದ್ರ ಪೂಜಾರಿ, ಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.<br />ಸಂತೋಷಿ ಬಿ. ಹೆಗ್ಗೆ ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ ವಚನ ಗಾಯನ ಮಾಡಿದರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಧನರಾಜ ಆನೆಕಲೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>