<p><strong>ಜನವಾಡ:</strong> ಬೀದರ್ ತಾಲ್ಲೂಕಿನ ಕಾಡವಾದ ಸಮೀಪ ಸೋಮವಾರ ಬೆಳಿಗ್ಗೆ ಲಾರಿ ಅಡಿ ಸಿಲುಕಿ ನಾಲ್ಕು ಆಡುಗಳು ಮೃತಪಟ್ಟಿವೆ.</p>.<p>ಮನ್ನಾಎಖ್ಖೆಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಹಾಯ್ದು ರಸ್ತೆ ದಾಟುತ್ತಿದ್ದ ಆಡುಗಳು ಸ್ಥಳದಲ್ಲೇ ಮೃತಪಟ್ಟಿವೆ. ಆಡುಗಳು ಕಬ್ಬು ಕಟಾವು ಮಾಡುವ ವಲಸೆ ಕಾರ್ಮಿಕರಿಗೆ ಸೇರಿವೆ. ಅವುಗಳ ಒಟ್ಟು ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.</p>.<p>ಘಟನೆ ನಂತರವೂ ನಿಲ್ಲಿಸದೆ ಹೋಗುತ್ತಿದ್ದ ಲಾರಿಯನ್ನು ಗ್ರಾಮದ ಯುವಕರು ಬೆನ್ನಟ್ಟಿ ಹಿಡಿದಿದ್ದಾರೆ. ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ:</strong> ಬೀದರ್ ತಾಲ್ಲೂಕಿನ ಕಾಡವಾದ ಸಮೀಪ ಸೋಮವಾರ ಬೆಳಿಗ್ಗೆ ಲಾರಿ ಅಡಿ ಸಿಲುಕಿ ನಾಲ್ಕು ಆಡುಗಳು ಮೃತಪಟ್ಟಿವೆ.</p>.<p>ಮನ್ನಾಎಖ್ಖೆಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಹಾಯ್ದು ರಸ್ತೆ ದಾಟುತ್ತಿದ್ದ ಆಡುಗಳು ಸ್ಥಳದಲ್ಲೇ ಮೃತಪಟ್ಟಿವೆ. ಆಡುಗಳು ಕಬ್ಬು ಕಟಾವು ಮಾಡುವ ವಲಸೆ ಕಾರ್ಮಿಕರಿಗೆ ಸೇರಿವೆ. ಅವುಗಳ ಒಟ್ಟು ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.</p>.<p>ಘಟನೆ ನಂತರವೂ ನಿಲ್ಲಿಸದೆ ಹೋಗುತ್ತಿದ್ದ ಲಾರಿಯನ್ನು ಗ್ರಾಮದ ಯುವಕರು ಬೆನ್ನಟ್ಟಿ ಹಿಡಿದಿದ್ದಾರೆ. ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>