<p><strong>ಬೀದರ್:</strong> ಗುರುನಾನಕ ಜಯಂತಿ ಪ್ರಯುಕ್ತ ನಾಂದೇಡ್ನಿಂದ ಬೀದರ್ ಹಾಗೂ ಬೀದರ್ನಿಂದ ನಾಂದೇಡ್ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.</p>.<p>ನ.19ರಂದು ಗುರುನಾನಕ ಜಯಂತಿ ಇದೆ. 18 ರಂದು ನಾಂದೇಡ್ನಿಂದ ಬೀದರ್(07505)ಗೆ ಹಾಗೂ 20 ರಂದು ಬೀದರ್ನಿಂದ ನಾಂದೇಡ್(07507)ಗೆ ವಿಶೇಷ ರೈಲು ಹೊರಡಲಿದೆ ಎಂದು ಹೇಳಿದ್ದಾರೆ.</p>.<p>ವಿಶೇಷ ರೈಲು 18 ರಂದು ಬೆಳಿಗ್ಗೆ 11.50ಕ್ಕೆ ನಾಂದೇಡ್ನಿಂದ ಹೊರಟು ಪೂರ್ಣಾ, ಪರಭಣಿ, ಪರಳಿ ವೈಜಿನಾಥ, ಪಣಗಾಂವ, ಲಾತೂರ್ ರೋಡ್, ಉದಗಿರ್, ಭಾಲ್ಕಿ ಮೂಲಕ ಸಂಜೆ 6.30ಕ್ಕೆ ಬೀದರ್ ತಲುಪಲಿದೆ. 20 ರಂದು ಮಧ್ಯಾಹ್ನ 2ಕ್ಕೆ ಬೀದರ್ನಿಂದ ಹೊರಡುವ ರೈಲು ರಾತ್ರಿ 8.40ಕ್ಕೆ ನಾಂದೇಡ್ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.</p>.<p>ಬೀದರ್ ಸಿಖ್ಖರ ಪವಿತ್ರ ಯಾತ್ರಾ ಸ್ಥಳವಾಗಿದೆ. ಗುರುನಾನಕ ಜಯಂತಿಗೆ ನಾಂದೇಡ್, ದೆಹಲಿಯಿಂದಲೂ ಭಕ್ತರು ಬೀದರ್ಗೆ ಭೇಟಿ ನೀಡುತ್ತಾರೆ. ಸಿಖ್ಖ ಸಮುದಾಯದ ಪ್ರಮುಖರ ಮನವಿ ಮೇರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಗುರುನಾನಕ ಜಯಂತಿ ಪ್ರಯುಕ್ತ ನಾಂದೇಡ್ನಿಂದ ಬೀದರ್ ಹಾಗೂ ಬೀದರ್ನಿಂದ ನಾಂದೇಡ್ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.</p>.<p>ನ.19ರಂದು ಗುರುನಾನಕ ಜಯಂತಿ ಇದೆ. 18 ರಂದು ನಾಂದೇಡ್ನಿಂದ ಬೀದರ್(07505)ಗೆ ಹಾಗೂ 20 ರಂದು ಬೀದರ್ನಿಂದ ನಾಂದೇಡ್(07507)ಗೆ ವಿಶೇಷ ರೈಲು ಹೊರಡಲಿದೆ ಎಂದು ಹೇಳಿದ್ದಾರೆ.</p>.<p>ವಿಶೇಷ ರೈಲು 18 ರಂದು ಬೆಳಿಗ್ಗೆ 11.50ಕ್ಕೆ ನಾಂದೇಡ್ನಿಂದ ಹೊರಟು ಪೂರ್ಣಾ, ಪರಭಣಿ, ಪರಳಿ ವೈಜಿನಾಥ, ಪಣಗಾಂವ, ಲಾತೂರ್ ರೋಡ್, ಉದಗಿರ್, ಭಾಲ್ಕಿ ಮೂಲಕ ಸಂಜೆ 6.30ಕ್ಕೆ ಬೀದರ್ ತಲುಪಲಿದೆ. 20 ರಂದು ಮಧ್ಯಾಹ್ನ 2ಕ್ಕೆ ಬೀದರ್ನಿಂದ ಹೊರಡುವ ರೈಲು ರಾತ್ರಿ 8.40ಕ್ಕೆ ನಾಂದೇಡ್ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.</p>.<p>ಬೀದರ್ ಸಿಖ್ಖರ ಪವಿತ್ರ ಯಾತ್ರಾ ಸ್ಥಳವಾಗಿದೆ. ಗುರುನಾನಕ ಜಯಂತಿಗೆ ನಾಂದೇಡ್, ದೆಹಲಿಯಿಂದಲೂ ಭಕ್ತರು ಬೀದರ್ಗೆ ಭೇಟಿ ನೀಡುತ್ತಾರೆ. ಸಿಖ್ಖ ಸಮುದಾಯದ ಪ್ರಮುಖರ ಮನವಿ ಮೇರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>