<p><strong>ಬೀದರ್</strong>: ಶಿವನಿಗೆ ಅತಿ ಪ್ರೀತಿಯ ಏಕ ಬಿಲ್ವಾರ್ಚನೆ ಮಾಡುವುದರಿಂದ ಮನುಷ್ಯನ ಮೂರು ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು ನುಡಿದರು.</p>.<p>ನೌಬಾದ್ನ ಮಲ್ಲಿಕಾರ್ಜುನ ಸ್ವಾಮಿ ಮಂದಿರದಲ್ಲಿ 111 ದಂಪತಿಗಳಿಂದ ನಡೆದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಮೂರು ದಳದ ಬಿಲ್ವಾರ್ಚನೆಯಿಂದ ನಮ್ಮಲ್ಲಿನ ರಜೊಗುಣ, ತಮೊಗುಣ ಹೋಗಿ ಸತ್ವಗುಣ ಬರುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳು ಕಳೆದು ಸಾಕಾರ ಗುಣಗಳು ಜಾಗೃತವಾಗುತ್ತವೆ ಎಂದು ತಿಳಿಸಿದರು.</p>.<p>ಜಗತ್ತಿನ ತ್ರೈಲೋಕ ಅಧಿಪತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರು ಆಯುಧಗಳ ಶಕ್ತಿ ಒಂದು ಬಿಲ್ವದಲ್ಲಿದೆ. ಶ್ರಾವಣ ಮಾಸದಲ್ಲಿ ಲಕ್ಷ ಬಿಲ್ವಾರ್ಚನೆ ಮಾಡಿದರೆ ನೂರು ಜನ್ಮಗಳ ಉದ್ಧಾರವಾಗುತ್ತದೆ ಎಂದು ಹೇಳಿದರು.</p>.<p>ಶ್ರಾವಣ ಮಾಸದಾದ್ಯಂತ ಪರಮಾತ್ಮನ ಆರಾಧನೆ, ಭಜನೆ, ಕೀರ್ತನೆ, ಪೂಜೆ, ಧ್ಯಾನ, ಜಪ-ತಪಗಳನ್ನು ಮಾಡುವುದರಿಂದ ಮನುಷ್ಯನಲ್ಲಿ ಅದ್ಭುತ ಶಕ್ತಿ ಜಾಗೃತವಾಗುತ್ತದೆ. ಶಕ್ತಿಯುತವಾಗಿ ಬದುಕಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.</p>.<p>ಕಾರ್ಯಕ್ರಮಕ್ಕೂ ಮೊದಲು ನೌಬಾದ್ನ ಬಸವೇಶ್ವರ ವೃತ್ತದಿಂದ ಮಲ್ಲಿಕಾರ್ಜುನ ಮಂದಿರದ ವರೆಗೆ ರಾಜಶೇಖರ ಶಿವಾಚಾರ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.</p>.<p>ಇದೇ ವೇಳೆ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಯಜ್ಞ, ಪ್ರವಚನ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮ ಜರುಗಿತು.</p>.<p>ಮಂದಿರದ ಅಧ್ಯಕ್ಷ ಮಾದಪ್ಪ ಭಂಗೂರೆ, ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಚಂದ್ರಪ್ಪ ಭಂಗೂರೆ, ಬಸವರಾಜ ಭಂಗೂರೆ, ಬಸವರಾಜ ಹುಮನಾಬಾದೆ, ನಿರಂಜಪ್ಪ, ವಿಶ್ವನಾಥ, ಧರ್ಮಪಾಲ್ ಗಣಾಚಾರಿ, ಶಿವರುದ್ರಯ್ಯ ಸ್ವಾಮಿ, ವೀರಯ್ಯ ಪೂಜಾರಿ, ಸರಸ್ವತಿ ಗೌರಶೆಟ್ಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಶಿವನಿಗೆ ಅತಿ ಪ್ರೀತಿಯ ಏಕ ಬಿಲ್ವಾರ್ಚನೆ ಮಾಡುವುದರಿಂದ ಮನುಷ್ಯನ ಮೂರು ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು ನುಡಿದರು.</p>.<p>ನೌಬಾದ್ನ ಮಲ್ಲಿಕಾರ್ಜುನ ಸ್ವಾಮಿ ಮಂದಿರದಲ್ಲಿ 111 ದಂಪತಿಗಳಿಂದ ನಡೆದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಮೂರು ದಳದ ಬಿಲ್ವಾರ್ಚನೆಯಿಂದ ನಮ್ಮಲ್ಲಿನ ರಜೊಗುಣ, ತಮೊಗುಣ ಹೋಗಿ ಸತ್ವಗುಣ ಬರುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳು ಕಳೆದು ಸಾಕಾರ ಗುಣಗಳು ಜಾಗೃತವಾಗುತ್ತವೆ ಎಂದು ತಿಳಿಸಿದರು.</p>.<p>ಜಗತ್ತಿನ ತ್ರೈಲೋಕ ಅಧಿಪತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರು ಆಯುಧಗಳ ಶಕ್ತಿ ಒಂದು ಬಿಲ್ವದಲ್ಲಿದೆ. ಶ್ರಾವಣ ಮಾಸದಲ್ಲಿ ಲಕ್ಷ ಬಿಲ್ವಾರ್ಚನೆ ಮಾಡಿದರೆ ನೂರು ಜನ್ಮಗಳ ಉದ್ಧಾರವಾಗುತ್ತದೆ ಎಂದು ಹೇಳಿದರು.</p>.<p>ಶ್ರಾವಣ ಮಾಸದಾದ್ಯಂತ ಪರಮಾತ್ಮನ ಆರಾಧನೆ, ಭಜನೆ, ಕೀರ್ತನೆ, ಪೂಜೆ, ಧ್ಯಾನ, ಜಪ-ತಪಗಳನ್ನು ಮಾಡುವುದರಿಂದ ಮನುಷ್ಯನಲ್ಲಿ ಅದ್ಭುತ ಶಕ್ತಿ ಜಾಗೃತವಾಗುತ್ತದೆ. ಶಕ್ತಿಯುತವಾಗಿ ಬದುಕಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.</p>.<p>ಕಾರ್ಯಕ್ರಮಕ್ಕೂ ಮೊದಲು ನೌಬಾದ್ನ ಬಸವೇಶ್ವರ ವೃತ್ತದಿಂದ ಮಲ್ಲಿಕಾರ್ಜುನ ಮಂದಿರದ ವರೆಗೆ ರಾಜಶೇಖರ ಶಿವಾಚಾರ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.</p>.<p>ಇದೇ ವೇಳೆ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಯಜ್ಞ, ಪ್ರವಚನ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮ ಜರುಗಿತು.</p>.<p>ಮಂದಿರದ ಅಧ್ಯಕ್ಷ ಮಾದಪ್ಪ ಭಂಗೂರೆ, ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಚಂದ್ರಪ್ಪ ಭಂಗೂರೆ, ಬಸವರಾಜ ಭಂಗೂರೆ, ಬಸವರಾಜ ಹುಮನಾಬಾದೆ, ನಿರಂಜಪ್ಪ, ವಿಶ್ವನಾಥ, ಧರ್ಮಪಾಲ್ ಗಣಾಚಾರಿ, ಶಿವರುದ್ರಯ್ಯ ಸ್ವಾಮಿ, ವೀರಯ್ಯ ಪೂಜಾರಿ, ಸರಸ್ವತಿ ಗೌರಶೆಟ್ಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>