<p><strong>ಬೀದರ್:</strong> ಇಲ್ಲಿಯ ತರಕಾರಿ ಮಾರುಕಟ್ಟೆಗೆ ಬರುತ್ತಿರುವ ಅನೇಕ ಗ್ರಾಹಕರು ಏನನ್ನೂ ಕೊಂಡುಕೊಳ್ಳದಿದ್ದರೂ ಈರುಳ್ಳಿ ಬೆಲೆ ವಿಚಾರಿಸುತ್ತಿದ್ದಾರೆ. ಕಾರಣ ಕಳೆದ ವಾರ ಈರುಳ್ಳಿ ಪ್ರತಿ ಕೆ.ಜಿಗೆ ₹ 100 ರೂಪಾಯಿಗೆ ತಲುಪಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ವಾರ ಒಂದೇ ಬಾರಿಗೆ ₹ 40ಕ್ಕೆ ಇಳಿದಿದೆ.</p>.<p>ಈರುಳ್ಳಿ ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ನೆಮ್ಮದಿ ಉಂಟು ಮಾಡಿದೆ. ಬೆಳ್ಳುಳ್ಳಿ ಬೆಲೆ ಒಂದು ತಿಂಗಳಿಂದ ಸ್ಥಿರವಾಗಿದೆ. ಬೆಲೆ ಪ್ರತಿ ಕೆಜಿಗೆ ₹ 200 ರೂಪಾಯಿ ಇರುವ ಕಾರಣ ಗ್ರಾಹಕರು ಬೆಳ್ಳುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>ಮಾರುಕಟ್ಟೆಯಲ್ಲಿ ಈ ವಾರ ಬೆಂಡೆಕಾಯಿ ಬೆಲೆ ಮಾತ್ರ ಕ್ವಿಂಟಲ್ಗೆ ₹1 ಸಾವಿರ ಹೆಚ್ಚಾಗಿದೆ. ಹಸಿ ಮೆಣಸಿನಕಾಯಿ, ಹಿರೇಕಾಯಿ, ತೊಂಡೆಕಾಯಿ, ಟೊಮೆಟೊ, ಎಲೆಕೋಸು, ಹುಕೋಸು, ಗಜ್ಜರಿ, ಮೆಂತೆ, ಸಬ್ಬಸಗಿ, ಕೊತಂಬರಿ, ಪಾಲಕ್ ಬೆಲೆ ಸ್ಥಿರವಾಗಿದೆ.</p>.<p>ತರಕಾರಿ ಸಗಟು ಮಾರುಕಟ್ಟೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಆಗ್ರಾದಿಂದ ಆಲೂಗಡ್ಡೆ, ಹೈದರಾಬಾದ್ ಮಾರುಕಟ್ಟೆಯಿಂದ ಮೆಣಸಿನಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಬಂದಿದೆ.</p>.<p>‘ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕುಗಳಿಂದ ಬದನೆಕಾಯಿ, ಹಿರೇಕಾಯಿ, ಕೊತಂಬರಿ, ಕರಿಬೇವು, ಮೆಂತೆಸೊಪ್ಪು ಬಂದಿದೆ. ಬೇಡಿಕೆ ಇರುವಷ್ಟು ಸೊಪ್ಪು ಸ್ಥಳೀಯವಾಗಿ ದೊರಕುತ್ತಿರುವ ಕಾರಣ ಹೊರ ಜಿಲ್ಲೆಗಳಿಂದ ಸೊಪ್ಪು ಬಂದಿಲ್ಲ’ ಎಂದು ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಇಲ್ಲಿಯ ತರಕಾರಿ ಮಾರುಕಟ್ಟೆಗೆ ಬರುತ್ತಿರುವ ಅನೇಕ ಗ್ರಾಹಕರು ಏನನ್ನೂ ಕೊಂಡುಕೊಳ್ಳದಿದ್ದರೂ ಈರುಳ್ಳಿ ಬೆಲೆ ವಿಚಾರಿಸುತ್ತಿದ್ದಾರೆ. ಕಾರಣ ಕಳೆದ ವಾರ ಈರುಳ್ಳಿ ಪ್ರತಿ ಕೆ.ಜಿಗೆ ₹ 100 ರೂಪಾಯಿಗೆ ತಲುಪಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ವಾರ ಒಂದೇ ಬಾರಿಗೆ ₹ 40ಕ್ಕೆ ಇಳಿದಿದೆ.</p>.<p>ಈರುಳ್ಳಿ ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ನೆಮ್ಮದಿ ಉಂಟು ಮಾಡಿದೆ. ಬೆಳ್ಳುಳ್ಳಿ ಬೆಲೆ ಒಂದು ತಿಂಗಳಿಂದ ಸ್ಥಿರವಾಗಿದೆ. ಬೆಲೆ ಪ್ರತಿ ಕೆಜಿಗೆ ₹ 200 ರೂಪಾಯಿ ಇರುವ ಕಾರಣ ಗ್ರಾಹಕರು ಬೆಳ್ಳುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>ಮಾರುಕಟ್ಟೆಯಲ್ಲಿ ಈ ವಾರ ಬೆಂಡೆಕಾಯಿ ಬೆಲೆ ಮಾತ್ರ ಕ್ವಿಂಟಲ್ಗೆ ₹1 ಸಾವಿರ ಹೆಚ್ಚಾಗಿದೆ. ಹಸಿ ಮೆಣಸಿನಕಾಯಿ, ಹಿರೇಕಾಯಿ, ತೊಂಡೆಕಾಯಿ, ಟೊಮೆಟೊ, ಎಲೆಕೋಸು, ಹುಕೋಸು, ಗಜ್ಜರಿ, ಮೆಂತೆ, ಸಬ್ಬಸಗಿ, ಕೊತಂಬರಿ, ಪಾಲಕ್ ಬೆಲೆ ಸ್ಥಿರವಾಗಿದೆ.</p>.<p>ತರಕಾರಿ ಸಗಟು ಮಾರುಕಟ್ಟೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಆಗ್ರಾದಿಂದ ಆಲೂಗಡ್ಡೆ, ಹೈದರಾಬಾದ್ ಮಾರುಕಟ್ಟೆಯಿಂದ ಮೆಣಸಿನಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಬಂದಿದೆ.</p>.<p>‘ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕುಗಳಿಂದ ಬದನೆಕಾಯಿ, ಹಿರೇಕಾಯಿ, ಕೊತಂಬರಿ, ಕರಿಬೇವು, ಮೆಂತೆಸೊಪ್ಪು ಬಂದಿದೆ. ಬೇಡಿಕೆ ಇರುವಷ್ಟು ಸೊಪ್ಪು ಸ್ಥಳೀಯವಾಗಿ ದೊರಕುತ್ತಿರುವ ಕಾರಣ ಹೊರ ಜಿಲ್ಲೆಗಳಿಂದ ಸೊಪ್ಪು ಬಂದಿಲ್ಲ’ ಎಂದು ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>