<p><strong>ಬೀದರ್:</strong> ‘ನಾನ್ ಪ್ರ್ಯಾಕ್ಟಿಸಿಂಗ್ ಅಲೋವೆನ್ಸೆಸ್’ಗೆ (ಎನ್ಪಿಎ) ಸಂಬಂಧಿಸಿದಂತೆ ಹಣಕಾಸು ವ್ಯವಹಾರ ನಡೆದಿರುವ ಕುರಿತು ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ಇಲ್ಲ’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಪಿ.ಟಿ. ರಮೇಶ ತಿಳಿಸಿದ್ದಾರೆ.</p>.<p>‘ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಎನ್ಪಿಎ ಭತ್ಯೆ ಸರ್ಕಾರದ ಆದೇಶ, ಹಣಕಾಸು ಇಲಾಖೆಯ ಅನುಮೋದನೆ, ಆಡಳಿತ ಮಂಡಳಿಯ ಅನುಮೋದನೆ, ವಿಶ್ವವಿದ್ಯಾಲಯದ ಸ್ಪಷ್ಟೀಕರಣ, ಐಸಿಎಆರ್/ಕೇಂದ್ರ ಮಾರ್ಗಸೂಚಿಗಳ ಆಧಾರದ ಮೇರೆಗೆ ಜಾರಿಗೆ ಬರುತ್ತಿದೆ’ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಸರ್ಕಾರದ ಅನುಮತಿ ಪಡೆಯಲಾರದೇ ಪಶು ವಿವಿಯಲ್ಲಿ ಎನ್ಪಿಎ ಜಾರಿಗೊಳಿಸುವ ಆಮಿಷವೊಡ್ಡಿ ಬೋಧಕ ಸಿಬ್ಬಂದಿಯಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ವಿವಿ ನಿವೃತ್ತ ಸಿಬ್ಬಂದಿ ಕೆ. ವೆಂಕಟ್ ರೆಡ್ಡಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ನಾನ್ ಪ್ರ್ಯಾಕ್ಟಿಸಿಂಗ್ ಅಲೋವೆನ್ಸೆಸ್’ಗೆ (ಎನ್ಪಿಎ) ಸಂಬಂಧಿಸಿದಂತೆ ಹಣಕಾಸು ವ್ಯವಹಾರ ನಡೆದಿರುವ ಕುರಿತು ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ಇಲ್ಲ’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಪಿ.ಟಿ. ರಮೇಶ ತಿಳಿಸಿದ್ದಾರೆ.</p>.<p>‘ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಎನ್ಪಿಎ ಭತ್ಯೆ ಸರ್ಕಾರದ ಆದೇಶ, ಹಣಕಾಸು ಇಲಾಖೆಯ ಅನುಮೋದನೆ, ಆಡಳಿತ ಮಂಡಳಿಯ ಅನುಮೋದನೆ, ವಿಶ್ವವಿದ್ಯಾಲಯದ ಸ್ಪಷ್ಟೀಕರಣ, ಐಸಿಎಆರ್/ಕೇಂದ್ರ ಮಾರ್ಗಸೂಚಿಗಳ ಆಧಾರದ ಮೇರೆಗೆ ಜಾರಿಗೆ ಬರುತ್ತಿದೆ’ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಸರ್ಕಾರದ ಅನುಮತಿ ಪಡೆಯಲಾರದೇ ಪಶು ವಿವಿಯಲ್ಲಿ ಎನ್ಪಿಎ ಜಾರಿಗೊಳಿಸುವ ಆಮಿಷವೊಡ್ಡಿ ಬೋಧಕ ಸಿಬ್ಬಂದಿಯಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ವಿವಿ ನಿವೃತ್ತ ಸಿಬ್ಬಂದಿ ಕೆ. ವೆಂಕಟ್ ರೆಡ್ಡಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>