ನವಿಲೂರು ಗ್ರಾಮದ ನಿವಾಸಿ ಮಲ್ಲಣ್ಣ (47) ಮೃತಪಟ್ಟವರು. ಗಣಗನೂರು ಸಂತೇ ಮಾಳದ ಹತ್ತಿರ ಬೆಂಗಳೂರಿನ ಅಶೋಕ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಲ್ಲಣ್ಣ ಅವರು ಎಂದಿನಂತೆ ಬೆಳಗ್ಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹಾವು ಕಚ್ಚಿದೆ. ತಕ್ಷಣ ಅವರನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಾರ್ಗ ಮಧ್ಯೆಯಲ್ಲಿ ಮೃತಪಟ್ಟರು ಎಂದು ಗೊತ್ತಾಗಿದೆ.