<p><strong>ಯಳಂದೂರು:</strong> ತಾಲ್ಲೂಕಿನ ಗುಂಬಳ್ಳಿಯಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಮರು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.</p>.<p>ಭಾವೈಕ್ಯತೆ ಸಾರುವ ಹಬ್ಬದ ಹತ್ತನೇ ದಿನ ಅಶುರಾ ಆಚರಣೆಯೊಂದಿಗೆ ಭಾನುವಾರ ಮೊಹರಂಗೆ ತೆರೆ ಬಿದ್ದಿತು.</p>.<p>ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಸೀದಿಗಳಲ್ಲಿ ಪಂಜಾ (ಕೈ) ಕೂರಿಸಿ, ಸಿಂಗರಿಸಿ ವಿಶೇಷವಾಗಿ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಹಬ್ಬದಂದು ಅಲ್ಲಾಹುಗೆ ಕೃತಜ್ಞತೆ ಸಲ್ಲಿಸಿ, ಜನರು ವಿಶೇಷ ಊಟ ಸವಿಯುತ್ತಾರೆ.</p>.<p>ಮಹಮ್ಮದೀಯರಿಗೆ ಮೊಹರಂ ಮೊದಲ ಮಾಸ. ಈ ದಿನದಿಂದ ಇಸ್ಲಾಂ ವರ್ಷ ಪ್ರಾರಂಭವಾಗುತ್ತದೆ. ಇಸ್ಲಾಂ ಧರ್ಮ ಸಂಸ್ಥಾಪಕ ಮಹಮ್ಮದ್ ಫೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಸ್ಮರಣಾರ್ಥ ಹಬ್ಬ ಆಚರಿಸಲಾಗುತ್ತದೆ ಎಂದು ಅಬ್ದುಲ್ ಅಜೀಜ್ ಹೇಳಿದರು.</p>.<p>ಮೊಹರಂ ದಿನದಂದು ಬಾಬಯ್ಯನಿಗೆ ಹಿಂದೂಗಳು ನಡೆದುಕೊಳ್ಳುತ್ತಾರೆ. ಸಕ್ಕರೆ, ಧೂಪ ಅರ್ಪಿಸಿ ದರ್ಶನ ಪಡೆಯುತ್ತಾರೆ. ಸಂಜೆ ಮುಸ್ಲಿಮರು ಪಂಜಾಕ್ಕೆ ವಂದಿಸಿ, ಹರಕೆ ಸಲ್ಲಿಸುತ್ತಾರೆ. ವಿಶೇಷ ಖಾದ್ಯ ತಯಾರಿಸಿ ನೆರದವರಿಗೂ ಹಂಚುತ್ತಾರೆ ಎಂದು ಗುಂಬಳ್ಳಿ ಗ್ರಾಮದ ಜಬ್ಬಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಗುಂಬಳ್ಳಿಯಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಮರು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.</p>.<p>ಭಾವೈಕ್ಯತೆ ಸಾರುವ ಹಬ್ಬದ ಹತ್ತನೇ ದಿನ ಅಶುರಾ ಆಚರಣೆಯೊಂದಿಗೆ ಭಾನುವಾರ ಮೊಹರಂಗೆ ತೆರೆ ಬಿದ್ದಿತು.</p>.<p>ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಸೀದಿಗಳಲ್ಲಿ ಪಂಜಾ (ಕೈ) ಕೂರಿಸಿ, ಸಿಂಗರಿಸಿ ವಿಶೇಷವಾಗಿ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಹಬ್ಬದಂದು ಅಲ್ಲಾಹುಗೆ ಕೃತಜ್ಞತೆ ಸಲ್ಲಿಸಿ, ಜನರು ವಿಶೇಷ ಊಟ ಸವಿಯುತ್ತಾರೆ.</p>.<p>ಮಹಮ್ಮದೀಯರಿಗೆ ಮೊಹರಂ ಮೊದಲ ಮಾಸ. ಈ ದಿನದಿಂದ ಇಸ್ಲಾಂ ವರ್ಷ ಪ್ರಾರಂಭವಾಗುತ್ತದೆ. ಇಸ್ಲಾಂ ಧರ್ಮ ಸಂಸ್ಥಾಪಕ ಮಹಮ್ಮದ್ ಫೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಸ್ಮರಣಾರ್ಥ ಹಬ್ಬ ಆಚರಿಸಲಾಗುತ್ತದೆ ಎಂದು ಅಬ್ದುಲ್ ಅಜೀಜ್ ಹೇಳಿದರು.</p>.<p>ಮೊಹರಂ ದಿನದಂದು ಬಾಬಯ್ಯನಿಗೆ ಹಿಂದೂಗಳು ನಡೆದುಕೊಳ್ಳುತ್ತಾರೆ. ಸಕ್ಕರೆ, ಧೂಪ ಅರ್ಪಿಸಿ ದರ್ಶನ ಪಡೆಯುತ್ತಾರೆ. ಸಂಜೆ ಮುಸ್ಲಿಮರು ಪಂಜಾಕ್ಕೆ ವಂದಿಸಿ, ಹರಕೆ ಸಲ್ಲಿಸುತ್ತಾರೆ. ವಿಶೇಷ ಖಾದ್ಯ ತಯಾರಿಸಿ ನೆರದವರಿಗೂ ಹಂಚುತ್ತಾರೆ ಎಂದು ಗುಂಬಳ್ಳಿ ಗ್ರಾಮದ ಜಬ್ಬಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>