‘ಮಂಡ್ಯಕ್ಕೆ ಸಕ್ಕರೆ ನಾಡು, ಚನ್ನಪಟ್ಟಣ ಗೊಂಬೆಗಳ ನಾಡು, ತುಮಕೂರಿಗೆ ಕಲ್ಪವೃಕ್ಷದ ನಾಡು ಎನ್ನುವಂತೆ ಚಾಮರಾಜನಗರ ಜಿಲ್ಲೆಗೆ ಜಾನಪದ ಕರ್ಮಭೂಮಿ, ಜಾನಪದ ನಗರ ಎಂದು ಕರೆಯುವುದಾದರೆ ಸಂಭ್ರಮಿಸುವುದು ನಾವೇ. ಇಲ್ಲಿನ ಗೊರವರ ಕುಣಿತ ಮೈಲಾರಲಿಂಗನ ಪರಂಪರೆ, ಸಂಪ್ರದಾಯವನ್ನು ಆರಾಧನೆ ಮಾಡುವ ಕಲೆಯಾಗಿದೆ. ಇಡೀ ರಾಜ್ಯಕ್ಕೆ ಇದು ಮೊದಲ ಕಲಾಪರಂಪರೆ ಆಗಿದೆ’ ಎಂದರು.