<p><strong>ಚಿಕ್ಕಬಳ್ಳಾಪುರ</strong>: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸ್ವಕ್ಷೇತ್ರ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಯಾವ ಯಾವ ಮೂಲಗಳಿಂದ ಸಂಪನ್ಮೂಲಗಳು ದೊರೆಯುತ್ತವೆಯೊ ಆ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. </p>.<p>ಚಿಂತಾಮಣಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದಿಂದ 150 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು ಎನ್ನುವ ಅವರ ಆಸೆಗೆ ಈಗ ನಿಯಮಗಳು ಮತ್ತು ವಿಸ್ತೀರ್ಣದ ಕಾರಣ ತಡೆಯಾಗಿದೆ. </p>.<p>ಚಿಂತಾಮಣಿ ಆಸ್ಪತ್ರೆಯು ಪ್ರಸ್ತುತ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಈಗ 150 ಹಾಸಿಗೆಗಳಿಗೆ ಹೆಚ್ಚಿಸಲು ಆಸ್ಪತ್ರೆಯು ಐಪಿಎಚ್ಎಸ್ ಮಾನದಂಡಗಳ ಪ್ರಕಾರ ಅಗತ್ಯವಿರುವ 6,500 ಚದರ ಮೀಟರ್ಗಳ ವಿಸ್ತೀರ್ಣ ಹೊಂದಿಲ್ಲ. ಬದಲಿಗೆ 4,000 ಚದರ ಮೀಟರ್ಗಳ ವಿಸ್ತೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದೆ.</p>.<p>ಈ ಕಾರಣದಿಂದ ಆಸ್ಪತ್ರೆಯನ್ನು 150 ಹಾಸಿಗೆ ಸಾಮರ್ಥ್ಯ ಹೆಚ್ಚಳ ಯೋಜನೆಯು ನನೆಗುದಿಗೆ ಬಿದ್ದಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.</p>.<p>ಜಾಗದ ಕೊರತೆ ಕಾರಣದಿಂದ 150 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಹಾಸಿಗೆ ಸಾಮರ್ಥ್ಯ ಹೆಚ್ಚಿಸಿದರೆ ಹೆಚ್ಚುವರಿ ಮಾನವ ಸಂಪನ್ಮೂಲಕ್ಕೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಬೇಕಾಗಿದೆ. </p>.<p>ಸರ್ಕಾರದ 2014ರ ಮಾನದಂಡಗಳ ಪ್ರಕಾರ 100 ಹಾಸಿಗೆಗಳ ಚಿಂತಾಮಣಿ ಆಸ್ಪತ್ರೆಯನ್ನು 150 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಹೆಚ್ಚುವರಿಯಾಗಿ 11 ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ವಾರ್ಷಿಕ ₹ 1.02 ಕೋಟಿ ಆವರ್ತಕ ವೆಚ್ಚ ಹಾಗೂ ಉಪಕರಣಗಳಿಗಾಗಿ ₹30.29 ಲಕ್ಷ ಅನಾವರ್ತಕ ವೆಚ್ಚ ಒಳಗೊಂಡಂತೆ ಒಟ್ಟು ₹1.32 ಕೋಟಿ ಅವಶ್ಯವಿದೆ ಎಂದು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.</p>.<p>ಎರಡನೇ ಮಹಡಿ ಕಾಮಗಾರಿ: 150 ಹಾಸಿಗೆ ಸಾಮರ್ಥ್ಯ ಹೆಚ್ಚಳ ಸಾಧ್ಯವಾಗುವುದಿಲ್ಲ ಎನ್ನುವುದು ಒಂದೆಡೆಯಾದರೆ ಮತ್ತೊಂದೆಡೆ ಆಸ್ಪತ್ರೆಯ ಎರಡನೇ ಮಹಡಿ ಕಾಮಗಾರಿಗೆ ಈಗ ₹9.98 ಕೋಟಿ ಅನುಮೋದನೆಯಾಗಿದೆ. ಈ ಮೂಲಕ ಆಸ್ಪತ್ರೆಯು ಮತ್ತಷ್ಟು ಸೌಲಭ್ಯಗಳನ್ನು ಹೊಂದಲು ಅವಕಾಶವಾಗುತ್ತದೆ.</p>.<p>ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯ ಕಟ್ಟಡದಲ್ಲಿ ಎರಡನೇ ಮಹಡಿಯ ನಿರ್ಮಾಣ ಕಾಮಗಾರಿಗೆ ಸರ್ಕಾರವು ಅನುಮೋದನೆ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ₹9.98 ಕೋಟಿ ನಿಧಿಯನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲು ಆದೇಶಿಸಿದೆ. ಆಸ್ಪತ್ರೆಯ ಅಭಿವೃದ್ಧಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ₹10 ಕೋಟಿ ಅನುದಾನ ನೀಡಲು ತನ್ನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿತ್ತು.</p>.<p>ಆಸ್ಪತ್ರೆಯಲ್ಲಿ ಅವಶ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಅಂದಾಜುಪಟ್ಟಿ ಸಿದ್ದಪಡಿಸಿ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಸಲ್ಲಿಸಲು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿತ್ತು.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್, ಚಿಂತಾಮಣಿಯ ಆಸ್ಪತ್ರೆಯಲ್ಲಿ ಅವಶ್ಯವಿರುವ ಕಾಮಗಾರಿಗಳ ಬಗ್ಗೆ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಜೊತೆ ಚರ್ಚಿಸಿದ್ದರು. ಆಸ್ಪತ್ರೆಯ ಕಟ್ಟಡದ ಸುಸ್ಥಿತಿಯ ಬಗ್ಗೆ ಖಾಸಗಿ ಸಂಸ್ಥೆಯಿಂದ ಮಾಹಿತಿ ಸಹ ಪಡೆಯಲಾಗಿತ್ತು. ಆ ಸಂಸ್ಥೆಯು ಈಗ ಇರುವ ಕಟ್ಟಡದ ಮೇಲೆ ಹೆಚ್ಚುವರಿಯಾಗಿ ಎರಡು ಮಹಡಿಗಳನ್ನು ನಿರ್ಮಿಸಬಹುದು ಎಂದು ವರದಿ ಸಹ ನೀಡಿದೆ. ಅಂದಾಜು ಪಟ್ಟಿಯ ವಿವರಗಳನ್ನೂ ಸಲ್ಲಿಸಿದೆ.</p>.<p><strong>ಮೂಲಸೌಕರ್ಯ ಕೊರತೆ:</strong> ವರದಿಯಲ್ಲಿ ಚಿಂತಾಮಣಿ ಆಸ್ಪತ್ರೆಯ ಕೊರತೆಗಳು ಮತ್ತು ಭವಿಷ್ಯದಲ್ಲಿನ ಘಟಕಗಳ ಬಗ್ಗೆ, ಎರಡನೇ ಮಹಡಿ ನಿರ್ಮಾಣದಿಂದ ಈ ಕೊರತೆಗಳನ್ನು ಪರಿಹಸಬಹುದು ಎನ್ನುವ ಬಗ್ಗೆ ಉಲ್ಲೇಖಿಸಲಾಗಿದೆ. </p>.<p>ಆಸ್ಪತ್ರೆಯ ಅಭಿವೃದ್ಧಿಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಧಿಯನ್ನು ಬಳಸಿಕೊಂಡು ಎರಡನೇ ಮಹಡಿ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿದೆ. ಈ ಬೆಳವಣಿಗೆಯು ಚಿಂತಾಮಣಿ ಆಸ್ಪತ್ರೆಯ ಅಭಿವೃದ್ಧಿಯ ವಿಚಾರದಲ್ಲಿ ಮಹತ್ವದ ಆದೇಶವಾಗಿದೆ. ಎರಡನೇ ಮಹಡಿ ನಿರ್ಮಾಣದಿಂದ ಇಲ್ಲಿ ಮೂರು ತುರ್ತು ಚಿಕಿತ್ಸಾ ಹಾಸಿಗೆಗಳ ತೀವ್ರ ನಿಗಾ ಘಟಕ 14 ಎಸ್ಎನ್ಸಿಯು ಮತ್ತು ಎನ್ಐಸಿಯು ಹಾಸಿಗೆಗಳ ಯೋಜನೆಗೆ ಅವಕಾಶವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸ್ವಕ್ಷೇತ್ರ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಯಾವ ಯಾವ ಮೂಲಗಳಿಂದ ಸಂಪನ್ಮೂಲಗಳು ದೊರೆಯುತ್ತವೆಯೊ ಆ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. </p>.<p>ಚಿಂತಾಮಣಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದಿಂದ 150 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು ಎನ್ನುವ ಅವರ ಆಸೆಗೆ ಈಗ ನಿಯಮಗಳು ಮತ್ತು ವಿಸ್ತೀರ್ಣದ ಕಾರಣ ತಡೆಯಾಗಿದೆ. </p>.<p>ಚಿಂತಾಮಣಿ ಆಸ್ಪತ್ರೆಯು ಪ್ರಸ್ತುತ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಈಗ 150 ಹಾಸಿಗೆಗಳಿಗೆ ಹೆಚ್ಚಿಸಲು ಆಸ್ಪತ್ರೆಯು ಐಪಿಎಚ್ಎಸ್ ಮಾನದಂಡಗಳ ಪ್ರಕಾರ ಅಗತ್ಯವಿರುವ 6,500 ಚದರ ಮೀಟರ್ಗಳ ವಿಸ್ತೀರ್ಣ ಹೊಂದಿಲ್ಲ. ಬದಲಿಗೆ 4,000 ಚದರ ಮೀಟರ್ಗಳ ವಿಸ್ತೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದೆ.</p>.<p>ಈ ಕಾರಣದಿಂದ ಆಸ್ಪತ್ರೆಯನ್ನು 150 ಹಾಸಿಗೆ ಸಾಮರ್ಥ್ಯ ಹೆಚ್ಚಳ ಯೋಜನೆಯು ನನೆಗುದಿಗೆ ಬಿದ್ದಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.</p>.<p>ಜಾಗದ ಕೊರತೆ ಕಾರಣದಿಂದ 150 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಹಾಸಿಗೆ ಸಾಮರ್ಥ್ಯ ಹೆಚ್ಚಿಸಿದರೆ ಹೆಚ್ಚುವರಿ ಮಾನವ ಸಂಪನ್ಮೂಲಕ್ಕೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಬೇಕಾಗಿದೆ. </p>.<p>ಸರ್ಕಾರದ 2014ರ ಮಾನದಂಡಗಳ ಪ್ರಕಾರ 100 ಹಾಸಿಗೆಗಳ ಚಿಂತಾಮಣಿ ಆಸ್ಪತ್ರೆಯನ್ನು 150 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಹೆಚ್ಚುವರಿಯಾಗಿ 11 ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ವಾರ್ಷಿಕ ₹ 1.02 ಕೋಟಿ ಆವರ್ತಕ ವೆಚ್ಚ ಹಾಗೂ ಉಪಕರಣಗಳಿಗಾಗಿ ₹30.29 ಲಕ್ಷ ಅನಾವರ್ತಕ ವೆಚ್ಚ ಒಳಗೊಂಡಂತೆ ಒಟ್ಟು ₹1.32 ಕೋಟಿ ಅವಶ್ಯವಿದೆ ಎಂದು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.</p>.<p>ಎರಡನೇ ಮಹಡಿ ಕಾಮಗಾರಿ: 150 ಹಾಸಿಗೆ ಸಾಮರ್ಥ್ಯ ಹೆಚ್ಚಳ ಸಾಧ್ಯವಾಗುವುದಿಲ್ಲ ಎನ್ನುವುದು ಒಂದೆಡೆಯಾದರೆ ಮತ್ತೊಂದೆಡೆ ಆಸ್ಪತ್ರೆಯ ಎರಡನೇ ಮಹಡಿ ಕಾಮಗಾರಿಗೆ ಈಗ ₹9.98 ಕೋಟಿ ಅನುಮೋದನೆಯಾಗಿದೆ. ಈ ಮೂಲಕ ಆಸ್ಪತ್ರೆಯು ಮತ್ತಷ್ಟು ಸೌಲಭ್ಯಗಳನ್ನು ಹೊಂದಲು ಅವಕಾಶವಾಗುತ್ತದೆ.</p>.<p>ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯ ಕಟ್ಟಡದಲ್ಲಿ ಎರಡನೇ ಮಹಡಿಯ ನಿರ್ಮಾಣ ಕಾಮಗಾರಿಗೆ ಸರ್ಕಾರವು ಅನುಮೋದನೆ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ₹9.98 ಕೋಟಿ ನಿಧಿಯನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲು ಆದೇಶಿಸಿದೆ. ಆಸ್ಪತ್ರೆಯ ಅಭಿವೃದ್ಧಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ₹10 ಕೋಟಿ ಅನುದಾನ ನೀಡಲು ತನ್ನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿತ್ತು.</p>.<p>ಆಸ್ಪತ್ರೆಯಲ್ಲಿ ಅವಶ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಅಂದಾಜುಪಟ್ಟಿ ಸಿದ್ದಪಡಿಸಿ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಸಲ್ಲಿಸಲು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿತ್ತು.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್, ಚಿಂತಾಮಣಿಯ ಆಸ್ಪತ್ರೆಯಲ್ಲಿ ಅವಶ್ಯವಿರುವ ಕಾಮಗಾರಿಗಳ ಬಗ್ಗೆ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಜೊತೆ ಚರ್ಚಿಸಿದ್ದರು. ಆಸ್ಪತ್ರೆಯ ಕಟ್ಟಡದ ಸುಸ್ಥಿತಿಯ ಬಗ್ಗೆ ಖಾಸಗಿ ಸಂಸ್ಥೆಯಿಂದ ಮಾಹಿತಿ ಸಹ ಪಡೆಯಲಾಗಿತ್ತು. ಆ ಸಂಸ್ಥೆಯು ಈಗ ಇರುವ ಕಟ್ಟಡದ ಮೇಲೆ ಹೆಚ್ಚುವರಿಯಾಗಿ ಎರಡು ಮಹಡಿಗಳನ್ನು ನಿರ್ಮಿಸಬಹುದು ಎಂದು ವರದಿ ಸಹ ನೀಡಿದೆ. ಅಂದಾಜು ಪಟ್ಟಿಯ ವಿವರಗಳನ್ನೂ ಸಲ್ಲಿಸಿದೆ.</p>.<p><strong>ಮೂಲಸೌಕರ್ಯ ಕೊರತೆ:</strong> ವರದಿಯಲ್ಲಿ ಚಿಂತಾಮಣಿ ಆಸ್ಪತ್ರೆಯ ಕೊರತೆಗಳು ಮತ್ತು ಭವಿಷ್ಯದಲ್ಲಿನ ಘಟಕಗಳ ಬಗ್ಗೆ, ಎರಡನೇ ಮಹಡಿ ನಿರ್ಮಾಣದಿಂದ ಈ ಕೊರತೆಗಳನ್ನು ಪರಿಹಸಬಹುದು ಎನ್ನುವ ಬಗ್ಗೆ ಉಲ್ಲೇಖಿಸಲಾಗಿದೆ. </p>.<p>ಆಸ್ಪತ್ರೆಯ ಅಭಿವೃದ್ಧಿಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಧಿಯನ್ನು ಬಳಸಿಕೊಂಡು ಎರಡನೇ ಮಹಡಿ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿದೆ. ಈ ಬೆಳವಣಿಗೆಯು ಚಿಂತಾಮಣಿ ಆಸ್ಪತ್ರೆಯ ಅಭಿವೃದ್ಧಿಯ ವಿಚಾರದಲ್ಲಿ ಮಹತ್ವದ ಆದೇಶವಾಗಿದೆ. ಎರಡನೇ ಮಹಡಿ ನಿರ್ಮಾಣದಿಂದ ಇಲ್ಲಿ ಮೂರು ತುರ್ತು ಚಿಕಿತ್ಸಾ ಹಾಸಿಗೆಗಳ ತೀವ್ರ ನಿಗಾ ಘಟಕ 14 ಎಸ್ಎನ್ಸಿಯು ಮತ್ತು ಎನ್ಐಸಿಯು ಹಾಸಿಗೆಗಳ ಯೋಜನೆಗೆ ಅವಕಾಶವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>