<p><strong>ಚಿಕ್ಕಬಳ್ಳಾಪುರ:</strong> ಜಿಲ್ಲೆಯ ಎಲ್ಲೆಡೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಗೌರಿ ಹಬ್ಬ ಜರುಗಿತು. ಮನೆ ಮನೆಗಳಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಮಹಿಳೆಯರು ಪೂಜೆ ಸಲ್ಲಿಸಿ, ಬಾಗಿನ ನೀಡಿದರು.</p>.<p>ಹಬ್ಬದ ಹಿಂದಿನ ದಿನವಾದ ಸೋಮವಾರ ಗೌರಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಿ ನಡೆಸಿದ್ದರು. ಮಂಗಳವಾರ ಬೆಳಗ್ಗೆ ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿದರು. ಮಾವಿನ ತೋರಣಗಳಿಂದ ಮನೆಯ ಆವರಣ ಮತ್ತು ಬಾಗಿಲನ್ನು ಶೃಂಗರಿಸಲಾಯಿತು. ನಂತರ ಪೂಜೆಗಳು ನಡೆದವು.</p>.<p>ಕೆಲವರು ಮನೆಗಳಲ್ಲಿ ದೇವಿಯ ಭಾವಚಿತ್ರಗಳು, ಕಳಸಗಳಿಗೆ ಪೂಜೆ ಸಲ್ಲಿಸಿದರು. ಮತ್ತಷ್ಟು ಮನೆಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಿ ತಂದ ಗೌರಿ ಮೂರ್ತಿಗೆ ಪೂಜೆ ನಡೆಯಿತು. ಮನೆಗೆ ಬಂದ ಮುತ್ತೈದೆಯರಿಗೆ ಬಾಗಿನ ಕುಂಕುಮ ನೀಡಲಾಯಿತು. ಸಂಜೆವರೆಗೆ ಇದೇ ದೃಶ್ಯಗಳು ಕಂಡು ಬಂದವು. ದೇಗುಲಗಳಲ್ಲಿಯೂ ಪೂಜೆಗಳು ಜರುಗಿದವು. </p>.<p>ಹಬ್ಬದ ಉಡುಗೆಯಲ್ಲಿ ಮಿಂಚುತ್ತಿದ್ದ ಮಹಿಳೆಯರು ಬಾಗಿನ ಹಿಡಿದು ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು. ಸುಮಂಗಲಿಯರು ತವರಿನಿಂದ ಬಂದವರು ಮಾತ್ರವಲ್ಲದೇ ಹತ್ತಿರದ ಬಂಧು– ಬಳಗ, ಅಕ್ಕಪಕ್ಕದ ಮನೆಯವರನ್ನು ಕರೆದು ಮೊರದಲ್ಲಿ ಅಕ್ಕಿ, ಬೆಲ್ಲ, ನವಧಾನ್ಯಗಳು ಉಪ್ಪು, ತೆಂಗಿನಕಾಯಿ, ಹಣ್ಣು, ಅರಿಶಿನ-ಕುಂಕುಮ, ವೀಳ್ಯದ ಎಲೆ, ಅಡಿಕೆ, ಬಳೆ, ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ ಇಟ್ಟು ಸಿದ್ಧಪಡಿಸಿದ ಬಾಗಿನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಜಿಲ್ಲೆಯ ಎಲ್ಲೆಡೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಗೌರಿ ಹಬ್ಬ ಜರುಗಿತು. ಮನೆ ಮನೆಗಳಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಮಹಿಳೆಯರು ಪೂಜೆ ಸಲ್ಲಿಸಿ, ಬಾಗಿನ ನೀಡಿದರು.</p>.<p>ಹಬ್ಬದ ಹಿಂದಿನ ದಿನವಾದ ಸೋಮವಾರ ಗೌರಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಿ ನಡೆಸಿದ್ದರು. ಮಂಗಳವಾರ ಬೆಳಗ್ಗೆ ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿದರು. ಮಾವಿನ ತೋರಣಗಳಿಂದ ಮನೆಯ ಆವರಣ ಮತ್ತು ಬಾಗಿಲನ್ನು ಶೃಂಗರಿಸಲಾಯಿತು. ನಂತರ ಪೂಜೆಗಳು ನಡೆದವು.</p>.<p>ಕೆಲವರು ಮನೆಗಳಲ್ಲಿ ದೇವಿಯ ಭಾವಚಿತ್ರಗಳು, ಕಳಸಗಳಿಗೆ ಪೂಜೆ ಸಲ್ಲಿಸಿದರು. ಮತ್ತಷ್ಟು ಮನೆಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಿ ತಂದ ಗೌರಿ ಮೂರ್ತಿಗೆ ಪೂಜೆ ನಡೆಯಿತು. ಮನೆಗೆ ಬಂದ ಮುತ್ತೈದೆಯರಿಗೆ ಬಾಗಿನ ಕುಂಕುಮ ನೀಡಲಾಯಿತು. ಸಂಜೆವರೆಗೆ ಇದೇ ದೃಶ್ಯಗಳು ಕಂಡು ಬಂದವು. ದೇಗುಲಗಳಲ್ಲಿಯೂ ಪೂಜೆಗಳು ಜರುಗಿದವು. </p>.<p>ಹಬ್ಬದ ಉಡುಗೆಯಲ್ಲಿ ಮಿಂಚುತ್ತಿದ್ದ ಮಹಿಳೆಯರು ಬಾಗಿನ ಹಿಡಿದು ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು. ಸುಮಂಗಲಿಯರು ತವರಿನಿಂದ ಬಂದವರು ಮಾತ್ರವಲ್ಲದೇ ಹತ್ತಿರದ ಬಂಧು– ಬಳಗ, ಅಕ್ಕಪಕ್ಕದ ಮನೆಯವರನ್ನು ಕರೆದು ಮೊರದಲ್ಲಿ ಅಕ್ಕಿ, ಬೆಲ್ಲ, ನವಧಾನ್ಯಗಳು ಉಪ್ಪು, ತೆಂಗಿನಕಾಯಿ, ಹಣ್ಣು, ಅರಿಶಿನ-ಕುಂಕುಮ, ವೀಳ್ಯದ ಎಲೆ, ಅಡಿಕೆ, ಬಳೆ, ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ ಇಟ್ಟು ಸಿದ್ಧಪಡಿಸಿದ ಬಾಗಿನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>