ಚೇಳೂರು: ಇಲ್ಲಿನ ನಾಡ ಕಚೇರಿಯಲ್ಲಿ ಗುರುವಾರ ಕನಕದಾಸರ ಜಯಂತಿ ಆಚರಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿ ಎನ್. ವೆಂಕಟೇಶ್ ಕನಕದಾಸರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು.
ಗ್ರಾಮ ಸಹಾಯಕ ಸಿ.ವಿ. ಆದಿನಾರಾಯಣಪ್ಪ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಗ್ರಾಮ ಲೆಕ್ಕಾಧಿಕಾರಿ ಎನ್. ರಮಾನಂದ್ ಹಾಗೂ ಸಿಬ್ಬಂದಿಯಾದ ಶ್ರೀನಿವಾಸ್, ವೆಂಕಟಲಕ್ಷ್ಮಮ್ಮ ಹಾಜರಿದ್ದರು.
ಕರ್ನಾಟಕ ಪಬ್ಲಿಕ್ ಶಾಲೆ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಜಿಲಾನ್ ಬಾಷಾ ಮಾತನಾಡಿದರು, ಸಹಶಿಕ್ಷಕರಾದ ವೆಂಕಟರಮಣರೆಡ್ಡಿ, ರಮಾನಾಯ್ಕ, ಆಂಜನೇಯರೆಡ್ಡಿ, ಶಿವಣ್ಣ, ರಾಮು, ಸುಬ್ಬರಾಯಪ್ಪ, ಬಾವಜಾನ್, ಗಂಗುಲಪ್ಪ ಇದ್ದರು.