<p><strong>ಚಿಕ್ಕಬಳ್ಳಾಪುರ:</strong> ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಮಹನೀಯರ ಹೋರಾಟದ ಫಲವಾಗಿ ಏಕೀಕರಣಗೊಂಡಿತು ಎಂದು ಜಿಲ್ಕಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.</p>.<p>ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.</p>.<p>ಆಲೂರು ವೆಂಕಟರಾಯರು, ಕುವೆಂಪು, ಅ.ನಾ.ಕೃಷ್ಣರಾಯರು ಸೇರಿದಂತೆ ಹಲವರು ಏಕೀಕರಣಕ್ಕೆ ಅವಿರತ ಹೋರಾಟ ಮಾಡಿದರು. ಕರ್ನಾಟಕದ ಜನರ ಬಗ್ಗೆ ವಿಶೇಷ ಗೌರವವನ್ನು ದೇಶದ ಜನರು ಇಟ್ಟುಕೊಂಡಿದ್ದಾರೆ. ಅದಕ್ಕೆ ನಮ್ಮ ಸೌಹಾರ್ದ ಕಾರಣ ಎಂದರು.</p>.<p>108 ಭಾಷೆಯ ಜನರು ಬೆಂಗಳೂರಿನಲ್ಲಿ ಇದ್ದಾರೆ. ನೆಮ್ಮದಿಯಿಂದ ಬದುಕುತಿದ್ದಾರೆ. ಇದು ನಮ್ಮ ವೈಶಾಲ್ಯವನ್ನು ತೋರುತ್ತದೆ ಎಂದರು.</p>.<p>ಜಿಲ್ಲೆಯ ಜನರು ಈ ನಾಡ ಹಬ್ಬವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಬೇಕು ಎಂದರು.</p>.<p>ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಮಹನೀಯರ ಹೋರಾಟದ ಫಲವಾಗಿ ಏಕೀಕರಣಗೊಂಡಿತು ಎಂದು ಜಿಲ್ಕಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.</p>.<p>ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.</p>.<p>ಆಲೂರು ವೆಂಕಟರಾಯರು, ಕುವೆಂಪು, ಅ.ನಾ.ಕೃಷ್ಣರಾಯರು ಸೇರಿದಂತೆ ಹಲವರು ಏಕೀಕರಣಕ್ಕೆ ಅವಿರತ ಹೋರಾಟ ಮಾಡಿದರು. ಕರ್ನಾಟಕದ ಜನರ ಬಗ್ಗೆ ವಿಶೇಷ ಗೌರವವನ್ನು ದೇಶದ ಜನರು ಇಟ್ಟುಕೊಂಡಿದ್ದಾರೆ. ಅದಕ್ಕೆ ನಮ್ಮ ಸೌಹಾರ್ದ ಕಾರಣ ಎಂದರು.</p>.<p>108 ಭಾಷೆಯ ಜನರು ಬೆಂಗಳೂರಿನಲ್ಲಿ ಇದ್ದಾರೆ. ನೆಮ್ಮದಿಯಿಂದ ಬದುಕುತಿದ್ದಾರೆ. ಇದು ನಮ್ಮ ವೈಶಾಲ್ಯವನ್ನು ತೋರುತ್ತದೆ ಎಂದರು.</p>.<p>ಜಿಲ್ಲೆಯ ಜನರು ಈ ನಾಡ ಹಬ್ಬವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಬೇಕು ಎಂದರು.</p>.<p>ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>