ಚಿಕ್ಕಬಳ್ಳಾಪುರ: ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಮಹನೀಯರ ಹೋರಾಟದ ಫಲವಾಗಿ ಏಕೀಕರಣಗೊಂಡಿತು ಎಂದು ಜಿಲ್ಕಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಆಲೂರು ವೆಂಕಟರಾಯರು, ಕುವೆಂಪು, ಅ.ನಾ.ಕೃಷ್ಣರಾಯರು ಸೇರಿದಂತೆ ಹಲವರು ಏಕೀಕರಣಕ್ಕೆ ಅವಿರತ ಹೋರಾಟ ಮಾಡಿದರು. ಕರ್ನಾಟಕದ ಜನರ ಬಗ್ಗೆ ವಿಶೇಷ ಗೌರವವನ್ನು ದೇಶದ ಜನರು ಇಟ್ಟುಕೊಂಡಿದ್ದಾರೆ. ಅದಕ್ಕೆ ನಮ್ಮ ಸೌಹಾರ್ದ ಕಾರಣ ಎಂದರು.
108 ಭಾಷೆಯ ಜನರು ಬೆಂಗಳೂರಿನಲ್ಲಿ ಇದ್ದಾರೆ. ನೆಮ್ಮದಿಯಿಂದ ಬದುಕುತಿದ್ದಾರೆ. ಇದು ನಮ್ಮ ವೈಶಾಲ್ಯವನ್ನು ತೋರುತ್ತದೆ ಎಂದರು.
ಜಿಲ್ಲೆಯ ಜನರು ಈ ನಾಡ ಹಬ್ಬವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.