ಅಧಿಕಾರಿಗಳು ಕಡಿವಾಣ ಹಾಕಲಿ ನಗರಕ್ಕೆ ಹೊಂದಿಕೊಂಡಂತೆ ಲೇಔಟ್ಗಳ ಕೆಲಸ ನಿರಂತರವಾಗಿ ನಡೆಯುತ್ತಿರುವುದರಿಂದ ಜಲ್ಲಿ ಎಂ.ಸ್ಯಾಂಡ್ ಮತ್ತು ಕಬ್ಬಿಣ ಹೊತ್ತ ವಾಹನಗಳು ಹೆಚ್ಚು ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ. ಜತೆಗೆ ಮಳೆಗಾಲದಲ್ಲಿ ಮಣ್ಣಿನಲ್ಲಿ ಚಲಿಸುವಾಗ ಹಲವು ಬಾರಿ ನಿಯಂತ್ರಣ ತಪ್ಪುತ್ತಿವೆ. ಇವುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು. ಸತ್ಯನಾರಾಯಣ್ ವಿ.ವಿ ಪುರಂ ನಿವಾಸಿ ಜನರಿಗೆ ತೊಂದರೆ ಹಗಲಿನಲ್ಲಿ ತಾಲ್ಲೂಕಿನದ್ಯಾತ ಬಾರಿ ಸರಕು ಸಾಗಣೆ ವಾಹನಗಳು ಬೇಕಾಬಿಟ್ಟಿಯಾಗಿ ಹೆಚ್ಚಿನ ಸರಕನ್ನು ಸಾಗಣೆ ಮಾಡುತ್ತಿವೆ. ಕಾನೂನು ಪಾಲನೆ ಮಾಡದೆ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಜನರಿಗೆ ತೊಂದರೆಯಾಗುತ್ತಿದೆ.