<p><strong><span style="background-color: yellow">ಬಾಗೇಪಲ್ಲಿ: </span></strong><span style="background-color: yellow">ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೇತೃತ್ವದಲ್ಲಿ ನೂರಾರು ಶಿಕ್ಷಕರು ಈಚೆಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. <br /> <br /> ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಎನ್.ರಮೇಶ್ ಮಾತನಾಡಿ, ಶಿಕ್ಷಕರಿಗೆ ಉತ್ತಮ ವೇತನ, ಬಡ್ತಿ ಹಾಗೂ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು. ವೇತನ ತಾರತಮ್ಯ ನಿವಾರಣೆ ಕೂಡಲೇ ನಿವಾರಿಸಬೇಕು. ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಅಧಿಕಾರಿ ಸಮಿತಿ ನೀಡಿದ ವರದಿ ಗೌಪ್ಯವಾಗಿದೆ.<br /> <br /> ಇದು ಶಿಕ್ಷಕರ ಸಮುದಾಯಗಳಿಗೆ ಬೇಸರ ತರಿಸಿದೆ. ಪ್ರೌಢಶಾಲಾ ಹಾಗೂ ಕಾಲೇಜು ಪದವಿ ಪೂರ್ವ ಉಪನ್ಯಾಸಕರ ವೇತನಗಳನ್ನು 6ನೇ ವೇತನದಲ್ಲಿ ನಿಗದಿಗೊಳಿಸಬೇಕು ಎಂದು ತಿಳಿಸಿದರು. <br /> <br /> ನೆರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರೌಢಶಾಲಾ ಶಿಕ್ಷಕರಿಗೆ ನೀಡುವ ವೇತನಕ್ಕೂ ರಾಜ್ಯದಲ್ಲಿ ಶಿಕ್ಷಕರು ಪಡೆಯುತ್ತಿರುವ ವೇತನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೂಲವೇತನ ಹಾಗೂ ತುಟ್ಟಿಭತ್ಯೆ ಸೇರಿದಂತೆ ತಮಿಳುನಾಡಿನಲ್ಲಿ 27,492 ರೂಪಾಯಿ, ಕೇಂದ್ರ ಸರ್ಕಾರದಲ್ಲಿ 25,839 ರೂಗಳು, ಮಹಾರಾಷ್ಟ್ರದಲ್ಲಿ 32,454 ಇದೆ. 72:25ರ ಅನುಪಾತದಲ್ಲಿ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು ಎಂದು ಸರ್ಕಾರ ಆದೇಶ ಪಾಲನೆಯಾಗಿಲ್ಲ ಎಂದು ಹೇಳಿದರು.<br /> <br /> ಪ್ರಸಕ್ತ ಬಜೆಟ್ನಲ್ಲಿ 6ನೇ ವೇತನ ಜಾರಿಗೆ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಶಿಕ್ಷಕರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. <br /> <br /> ಸಾಂಸ್ಕೃತಿಕ ಕಾರ್ಯದರ್ಶಿ ವಿ.ಮಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಬಾಲರಾಜ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಪದಾಧಿಕಾರಿಗಳಾದ ಡಿ.ಎನ್.ಶ್ರೀನಿ ವಾಸರಾವ್, ಪಿ.ಎನ್.ರಂಗಾರೆಡ್ಡಿ, ಭೀಮೇಶ್, ಶೇಷ ಗಿರಿ, ಶೇಷಾದ್ರಿ, ವಿಜಯಲಕ್ಷ್ಮೀ, ಬಿ.ಎಸ್.ತುಳಸಿಮಾಲಾ ಮತ್ತಿತರರು ಉಪಸ್ಥಿತರಿದ್ದರು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><span style="background-color: yellow">ಬಾಗೇಪಲ್ಲಿ: </span></strong><span style="background-color: yellow">ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೇತೃತ್ವದಲ್ಲಿ ನೂರಾರು ಶಿಕ್ಷಕರು ಈಚೆಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. <br /> <br /> ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಎನ್.ರಮೇಶ್ ಮಾತನಾಡಿ, ಶಿಕ್ಷಕರಿಗೆ ಉತ್ತಮ ವೇತನ, ಬಡ್ತಿ ಹಾಗೂ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು. ವೇತನ ತಾರತಮ್ಯ ನಿವಾರಣೆ ಕೂಡಲೇ ನಿವಾರಿಸಬೇಕು. ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಅಧಿಕಾರಿ ಸಮಿತಿ ನೀಡಿದ ವರದಿ ಗೌಪ್ಯವಾಗಿದೆ.<br /> <br /> ಇದು ಶಿಕ್ಷಕರ ಸಮುದಾಯಗಳಿಗೆ ಬೇಸರ ತರಿಸಿದೆ. ಪ್ರೌಢಶಾಲಾ ಹಾಗೂ ಕಾಲೇಜು ಪದವಿ ಪೂರ್ವ ಉಪನ್ಯಾಸಕರ ವೇತನಗಳನ್ನು 6ನೇ ವೇತನದಲ್ಲಿ ನಿಗದಿಗೊಳಿಸಬೇಕು ಎಂದು ತಿಳಿಸಿದರು. <br /> <br /> ನೆರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರೌಢಶಾಲಾ ಶಿಕ್ಷಕರಿಗೆ ನೀಡುವ ವೇತನಕ್ಕೂ ರಾಜ್ಯದಲ್ಲಿ ಶಿಕ್ಷಕರು ಪಡೆಯುತ್ತಿರುವ ವೇತನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೂಲವೇತನ ಹಾಗೂ ತುಟ್ಟಿಭತ್ಯೆ ಸೇರಿದಂತೆ ತಮಿಳುನಾಡಿನಲ್ಲಿ 27,492 ರೂಪಾಯಿ, ಕೇಂದ್ರ ಸರ್ಕಾರದಲ್ಲಿ 25,839 ರೂಗಳು, ಮಹಾರಾಷ್ಟ್ರದಲ್ಲಿ 32,454 ಇದೆ. 72:25ರ ಅನುಪಾತದಲ್ಲಿ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು ಎಂದು ಸರ್ಕಾರ ಆದೇಶ ಪಾಲನೆಯಾಗಿಲ್ಲ ಎಂದು ಹೇಳಿದರು.<br /> <br /> ಪ್ರಸಕ್ತ ಬಜೆಟ್ನಲ್ಲಿ 6ನೇ ವೇತನ ಜಾರಿಗೆ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಶಿಕ್ಷಕರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. <br /> <br /> ಸಾಂಸ್ಕೃತಿಕ ಕಾರ್ಯದರ್ಶಿ ವಿ.ಮಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಬಾಲರಾಜ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಪದಾಧಿಕಾರಿಗಳಾದ ಡಿ.ಎನ್.ಶ್ರೀನಿ ವಾಸರಾವ್, ಪಿ.ಎನ್.ರಂಗಾರೆಡ್ಡಿ, ಭೀಮೇಶ್, ಶೇಷ ಗಿರಿ, ಶೇಷಾದ್ರಿ, ವಿಜಯಲಕ್ಷ್ಮೀ, ಬಿ.ಎಸ್.ತುಳಸಿಮಾಲಾ ಮತ್ತಿತರರು ಉಪಸ್ಥಿತರಿದ್ದರು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>