<p><strong>ಚಿಕ್ಕಮಗಳೂರು: </strong>ರಂಗಭೂಮಿ, ಸಿನಿಮಾ, ಕಲಾ ಕ್ಷೇತ್ರದಲ್ಲಿ ಛಾಪು ಮೂಡಿಸಿ ಜನಮನ ಗೆದ್ದಿರುವ ಸಂಚಾರಿ ವಿಜಯ್ (ಬಿ.ವಿಜಯಕುಮಾರ್) ಅವರು ಕಾಫಿನಾಡಿನ ಬಯಲು ಸೀಮೆಯ ಪ್ರತಿಭೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಿಂದಲೇ ಚೂಟಿಯಾಗಿದ್ದರು.</p>.<p>ವಿಜಯ್ ಅವರು ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಬಸವರಾಜಯ್ಯ ಮತ್ತು ಗೌರಮ್ಮ ದಂಪತಿಯ ಪುತ್ರ. ವಿಜಯ್ ಅವರಿಗೆ ವಿರೂಪಾಕ್ಷ, ಸಿದ್ದೇಶ್ ಎಂಬ ಇಬ್ಬರು ಸಹೋದರರು ಇದ್ದಾರೆ.</p>.<p>ಗ್ರಾಮ ಲೆಕ್ಕಿಗರಾಗಿದ್ದ ಬಸವರಾಜಯ್ಯ ಅವರು ತಬಲ ವಾದನ, ಚಿತ್ರಕಲೆಯಲ್ಲಿ ನೈಪುಣ್ಯ ಇತ್ತು. ಶುಶ್ರೂಷಕಿಯಾಗಿದ್ದ ಗೌರಮ್ಮ ಅವರಿಗೆ ಗಾಯನ ಕಲೆ ಒಲಿದಿತ್ತು. ಅಪ್ಪ–ಅಮ್ಮನಿಂದ ಈ ಕಲೆಗಳನ್ನು ವಿಜಯ್ ಕರಗತ ಮಾಡಿಕೊಂಡಿದ್ದರು.</p>.<p>ವಿಜಯ್ ಅವರು ಪಂಚನಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಆಣೆಗೆರೆಯಲ್ಲಿ ಪ್ರೌಢಶಾಲೆ, ತಿಪಟೂರಿನಲ್ಲಿ ಪಿಯು ಹಾಗೂ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ.</p>.<p>‘ಶಾಲಾ ದಿನಗಳಿಂದಲೂ ವಿಜಯ್ ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಾವಗಾಲೂ ಮುಂದೆ ಇದ್ದರು. ಚಿತ್ರಕಲೆ, ಅಭಿನಯ, ಗಾಯನ, ಜಿಮ್ನಾಸ್ಟಿಕ್ಸ್ ಎಲ್ಲದರಲ್ಲೂ ಬಹುಮಾನ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು’ ಎಂದು ವಿಜಯ್ ಅವರ ಬಾಲ್ಯ ಸ್ನೇಹಿತ ಪಂಚನಹಳ್ಳಿಯ ಪಿ.ಎಂ.ನಂದೀಶ್ ತಿಳಿಸಿದರು.</p>.<p>‘ಸ್ವಾತಂತ್ರ್ಯ ದಿನಾಚರಣೆ, ಶಾಲಾ ವಾರ್ಷಿಕೋತ್ಸವ ಮೊದಲಾದವುಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಗೌರಮ್ಮ ಅವರ ಗರಡಿಯಲ್ಲಿ ಗಾಯನ ಕಲಿತೆವು. ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ‘ಜೋಗದ ಸಿರಿ ಬೆಳಕಿನಲ್ಲಿ...’ ಮೊದಲಾದ ಗೀತೆಗಳನ್ನು ಹಾಡಿದ್ದೆವು’ ಎಂದು ಅವರು ನೆನಪಿಸಿಕೊಂಡರು.</p>.<p>‘ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಕನಸು ಚಿಕ್ಕಂದಿನಿಂದಲೂ ವಿಜಯ್ಗೆ ಇತ್ತು. ‘ಸಂಚಾರಿ’ ರಂಗ ತಂಡದ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಚಾರಿ ವಿಜಯ್ ಎಂದೇ ಖ್ಯಾತರಾದರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮೆರೆದು ಕನಸನ್ನು ನನಸಾಗಿಸಿದರು’ ಎಂದು ಹೇಳಿದರು.</p>.<p>ವಿಜಯ್ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಹುಚ್ಚು ಬಹಳ ಇತ್ತು. ಪಂಚನಹಳ್ಳಿ ಪಕ್ಕದ ಅರಸೀಕೆರೆ ತಾಲ್ಲೂಕಿನ ಗಡಿ ಗ್ರಾಮ ಮೇಟಿಕುರ್ಕೆಯ ಟೆಂಟ್ಗೆ ಸಿನಿಮಾ ನೋಡಲು ಸೈಕಲ್ನಲ್ಲಿ ಹಲವು ಬಾರಿ ಹೋಗಿದ್ದೆವು ಎಂದು ಅವರ ಬಾಲ್ಯದ ಗೆಳೆಯರು ತಿಳಿಸಿದರು.</p>.<p>ವಿಜಯ್ ಅವರು ಸಿನಿಮಾ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪಂಚನಹಳ್ಳಿಗೂ ಗ್ರಾಮಕ್ಕೂ ಅವರಿಗೂ ಅವಿನಾಭಾವ ನಂಟು. ಗ್ರಾಮದ ಹಳೆಯ ಸ್ನೇಹಿತರ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ.</p>.<p>ಪಂಚನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 2017ನೇ ಇಸವಿಯಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿನ ಬಾಲ್ಯದ ನೆನಪುಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದ್ದರು. ತಾನೊಬ್ಬ ಖ್ಯಾತ ನಟ ಎಂಬ ಹಮ್ಮಬಿಮ್ಮು ಇಲ್ಲದೆ ಮುಕ್ತವಾಗಿ ಬೆರೆತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.</p>.<p>ವಿಜಯ್ ಅವರು ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ರಂಗಭೂಮಿ, ಸಿನಿಮಾ, ಕಲಾ ಕ್ಷೇತ್ರದಲ್ಲಿ ಛಾಪು ಮೂಡಿಸಿ ಜನಮನ ಗೆದ್ದಿರುವ ಸಂಚಾರಿ ವಿಜಯ್ (ಬಿ.ವಿಜಯಕುಮಾರ್) ಅವರು ಕಾಫಿನಾಡಿನ ಬಯಲು ಸೀಮೆಯ ಪ್ರತಿಭೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಿಂದಲೇ ಚೂಟಿಯಾಗಿದ್ದರು.</p>.<p>ವಿಜಯ್ ಅವರು ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಬಸವರಾಜಯ್ಯ ಮತ್ತು ಗೌರಮ್ಮ ದಂಪತಿಯ ಪುತ್ರ. ವಿಜಯ್ ಅವರಿಗೆ ವಿರೂಪಾಕ್ಷ, ಸಿದ್ದೇಶ್ ಎಂಬ ಇಬ್ಬರು ಸಹೋದರರು ಇದ್ದಾರೆ.</p>.<p>ಗ್ರಾಮ ಲೆಕ್ಕಿಗರಾಗಿದ್ದ ಬಸವರಾಜಯ್ಯ ಅವರು ತಬಲ ವಾದನ, ಚಿತ್ರಕಲೆಯಲ್ಲಿ ನೈಪುಣ್ಯ ಇತ್ತು. ಶುಶ್ರೂಷಕಿಯಾಗಿದ್ದ ಗೌರಮ್ಮ ಅವರಿಗೆ ಗಾಯನ ಕಲೆ ಒಲಿದಿತ್ತು. ಅಪ್ಪ–ಅಮ್ಮನಿಂದ ಈ ಕಲೆಗಳನ್ನು ವಿಜಯ್ ಕರಗತ ಮಾಡಿಕೊಂಡಿದ್ದರು.</p>.<p>ವಿಜಯ್ ಅವರು ಪಂಚನಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಆಣೆಗೆರೆಯಲ್ಲಿ ಪ್ರೌಢಶಾಲೆ, ತಿಪಟೂರಿನಲ್ಲಿ ಪಿಯು ಹಾಗೂ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ.</p>.<p>‘ಶಾಲಾ ದಿನಗಳಿಂದಲೂ ವಿಜಯ್ ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಾವಗಾಲೂ ಮುಂದೆ ಇದ್ದರು. ಚಿತ್ರಕಲೆ, ಅಭಿನಯ, ಗಾಯನ, ಜಿಮ್ನಾಸ್ಟಿಕ್ಸ್ ಎಲ್ಲದರಲ್ಲೂ ಬಹುಮಾನ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು’ ಎಂದು ವಿಜಯ್ ಅವರ ಬಾಲ್ಯ ಸ್ನೇಹಿತ ಪಂಚನಹಳ್ಳಿಯ ಪಿ.ಎಂ.ನಂದೀಶ್ ತಿಳಿಸಿದರು.</p>.<p>‘ಸ್ವಾತಂತ್ರ್ಯ ದಿನಾಚರಣೆ, ಶಾಲಾ ವಾರ್ಷಿಕೋತ್ಸವ ಮೊದಲಾದವುಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಗೌರಮ್ಮ ಅವರ ಗರಡಿಯಲ್ಲಿ ಗಾಯನ ಕಲಿತೆವು. ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ‘ಜೋಗದ ಸಿರಿ ಬೆಳಕಿನಲ್ಲಿ...’ ಮೊದಲಾದ ಗೀತೆಗಳನ್ನು ಹಾಡಿದ್ದೆವು’ ಎಂದು ಅವರು ನೆನಪಿಸಿಕೊಂಡರು.</p>.<p>‘ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಕನಸು ಚಿಕ್ಕಂದಿನಿಂದಲೂ ವಿಜಯ್ಗೆ ಇತ್ತು. ‘ಸಂಚಾರಿ’ ರಂಗ ತಂಡದ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಚಾರಿ ವಿಜಯ್ ಎಂದೇ ಖ್ಯಾತರಾದರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮೆರೆದು ಕನಸನ್ನು ನನಸಾಗಿಸಿದರು’ ಎಂದು ಹೇಳಿದರು.</p>.<p>ವಿಜಯ್ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಹುಚ್ಚು ಬಹಳ ಇತ್ತು. ಪಂಚನಹಳ್ಳಿ ಪಕ್ಕದ ಅರಸೀಕೆರೆ ತಾಲ್ಲೂಕಿನ ಗಡಿ ಗ್ರಾಮ ಮೇಟಿಕುರ್ಕೆಯ ಟೆಂಟ್ಗೆ ಸಿನಿಮಾ ನೋಡಲು ಸೈಕಲ್ನಲ್ಲಿ ಹಲವು ಬಾರಿ ಹೋಗಿದ್ದೆವು ಎಂದು ಅವರ ಬಾಲ್ಯದ ಗೆಳೆಯರು ತಿಳಿಸಿದರು.</p>.<p>ವಿಜಯ್ ಅವರು ಸಿನಿಮಾ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪಂಚನಹಳ್ಳಿಗೂ ಗ್ರಾಮಕ್ಕೂ ಅವರಿಗೂ ಅವಿನಾಭಾವ ನಂಟು. ಗ್ರಾಮದ ಹಳೆಯ ಸ್ನೇಹಿತರ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ.</p>.<p>ಪಂಚನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 2017ನೇ ಇಸವಿಯಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿನ ಬಾಲ್ಯದ ನೆನಪುಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದ್ದರು. ತಾನೊಬ್ಬ ಖ್ಯಾತ ನಟ ಎಂಬ ಹಮ್ಮಬಿಮ್ಮು ಇಲ್ಲದೆ ಮುಕ್ತವಾಗಿ ಬೆರೆತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.</p>.<p>ವಿಜಯ್ ಅವರು ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>