ಒಕ್ಕೂಟದ ಸದಸ್ಯ ಜಗದೀಶ್ ಕಣದಮನೆ ಮಾತನಾಡಿ, ‘ಬಡವರನ್ನು ಒಕ್ಕಲೆಬ್ಬಿಸುವ ಮಾರಕ ಅರಣ್ಯ ಕಾಯ್ದೆ ಜಾರಿಯನ್ನು ತಡೆಯಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಹಕ್ಕು ಪತ್ರ ನೀಡಿರುವುದನ್ನು ಪಹಣಿಯಲ್ಲಿ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಸಂತೋಷ್ ಕಾಳ್ಯ, ಅವಿನಾಶ್, ಆಶಿಕ್ , ತ್ರಿಮೂರ್ತಿ, ನೂತನ್ ಹೆಗ್ಡೆ, ವಿಜೇಂದ್ರ ಹಿಂಬಿಗೆ, ರಾಜ್ಕುಮಾರ್ ಹೆಗ್ಡೆ, ನಾಗರಾಜ್, ಪ್ರದೀಪ್ ಕಲ್ಲಾಳಿ, ನಾಗನ್ ಕುಪ್ಪನಮಕ್ಕಿ, ಪ್ರತೀಕ್ ಇದ್ದರು.