<p><strong>ಚಿಕ್ಕಮಗಳೂರು</strong>: ಜಿಲ್ಲೆಯಲ್ಲಿ ಮಳೆಗಾಳಿ ಅಬ್ಬರ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೆಲವೆಡೆ ವಿದ್ಯುತ್ ಕಂಬಗಳು, ವೃಕ್ಷಗಳು ಧರೆಗುರುಳಿವೆ, ಗುಡ್ಡದ ಮಣ್ಣು ಕುಸಿದಿದೆ.</p>.<p>ಕೊಟ್ಟಿಗೆಹಾರ ಸಮೀಪ ದೇವನಗೂಲ್ ಗ್ರಾಮದ ಸತೀಶ್ ಆಚಾರ್ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಸತೀಶ್ ತಾಯಿ ಪುಷ್ಪಾ ಅವರಿಗೆ ಗಾಯಗಳಾಗಿವೆ. ಸುಂಕಸಾಲೆ ಬಳಿ ದುರ್ಗದಹಳ್ಳಿಯಲ್ಲಿ ಗುಡ್ಡದಮಣ್ಣು ಕುಸಿದಿದೆ. ಕೆಳಗೂರಿನ ಮೇಗೂರು ಅಂಗರಮಕ್ಕಿಯ ಐದು ಕುಟುಂಬಗಳವರು ಸ್ವಯಂಪ್ರೇರಿತವಾಗಿ ಸುರಕ್ಷತಾ ಸ್ಥಳಕ್ಕೆ ತೆರಳಿದ್ದಾರೆ.</p>.<p>ಚಾರ್ಮಾಡಿ ಘಾಟಿ ಮಾರ್ಗದ ಹಲವು ಕಡೆ ಮರಗಳು ಬಿದ್ದಿವೆ. ಮೂಡಿಗೆರೆ- ಮಂಗಳೂರು ರಸ್ತೆ ಮತ್ತು ಮೂಡಿಗೆರೆ - ಬಾಳೆಹೊನ್ನೂರು ಮಾರ್ಗದಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಫಲ್ಗುಣಿ ಮುಖ್ಯರಸ್ತೆ, ಬಾನಹಳ್ಳಿ–ಸಾರಗೋಡು ರಸ್ತೆ, ಬಣಕಲ್ ಮತ್ತಿಕಟ್ಟೆ ರಸ್ತೆಗಳಲ್ಲಿ ಅಡ್ಡಲಾಗಿ ಮರಗಳು ಬಿದ್ದಿವೆ.</p>.<p>ಮೂಡಿಗೆರೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆ, ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಕಡಿತವಾಗಿದೆ. 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.</p>.<p>ಕೊಟ್ಟಿಗೆಹಾರ, ಬಾಳೂರು, ಬಣಕಲ್, ತರುವೆ, ನಿಡುವಾಳೆ, ಕಲ್ಲುಳಿಯಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಕೊಟ್ಟಿಗೆಹಾರದಲ್ಲಿ 33.14 ಸೆಂ.ಮೀ, ಗೋಣಿಬೀಡಿನಲ್ಲಿ 28.65 ಸೆಂ.ಮೀ ಮಳೆಯಾಗಿದೆ.</p>.<p>ಕಳಸ ಬಳಿಯ ಹೆಬ್ಬೊಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ. ಶೃಂಗೇರಿ ಭಾಗದಲ್ಲಿ ನಾಲ್ಕು ಕಡೆ ವಿದ್ಯುತ್ ಕಂಬಗಳು ಬಿದ್ದಿವೆ. ಕೊಪ್ಪ– ಶೃಂಗೇರಿ ಮಾರ್ಗದಲ್ಲಿ ಮರ ಉರುಳಿ ಸಂಚಾರ ಬಂದ್ ಆಗಿತ್ತು.</p>.<p>ತರೀಕೆರೆಯಲ್ಲಿ ಆರ್ಎಂಸಿ ಯಾರ್ಡ್ನಲ್ಲಿ ಮರವೊಂದು ಉರುಳಿ ಬಿದ್ದಿದೆ. ಕೊಪ್ಪ, ಎನ್.ಆರ್.ಪುರ, ತರೀಕೆರೆ ಸಹಿತ ವಿವಿಧಡೆ ಉತ್ತಮ ಮಳೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಜಿಲ್ಲೆಯಲ್ಲಿ ಮಳೆಗಾಳಿ ಅಬ್ಬರ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೆಲವೆಡೆ ವಿದ್ಯುತ್ ಕಂಬಗಳು, ವೃಕ್ಷಗಳು ಧರೆಗುರುಳಿವೆ, ಗುಡ್ಡದ ಮಣ್ಣು ಕುಸಿದಿದೆ.</p>.<p>ಕೊಟ್ಟಿಗೆಹಾರ ಸಮೀಪ ದೇವನಗೂಲ್ ಗ್ರಾಮದ ಸತೀಶ್ ಆಚಾರ್ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಸತೀಶ್ ತಾಯಿ ಪುಷ್ಪಾ ಅವರಿಗೆ ಗಾಯಗಳಾಗಿವೆ. ಸುಂಕಸಾಲೆ ಬಳಿ ದುರ್ಗದಹಳ್ಳಿಯಲ್ಲಿ ಗುಡ್ಡದಮಣ್ಣು ಕುಸಿದಿದೆ. ಕೆಳಗೂರಿನ ಮೇಗೂರು ಅಂಗರಮಕ್ಕಿಯ ಐದು ಕುಟುಂಬಗಳವರು ಸ್ವಯಂಪ್ರೇರಿತವಾಗಿ ಸುರಕ್ಷತಾ ಸ್ಥಳಕ್ಕೆ ತೆರಳಿದ್ದಾರೆ.</p>.<p>ಚಾರ್ಮಾಡಿ ಘಾಟಿ ಮಾರ್ಗದ ಹಲವು ಕಡೆ ಮರಗಳು ಬಿದ್ದಿವೆ. ಮೂಡಿಗೆರೆ- ಮಂಗಳೂರು ರಸ್ತೆ ಮತ್ತು ಮೂಡಿಗೆರೆ - ಬಾಳೆಹೊನ್ನೂರು ಮಾರ್ಗದಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಫಲ್ಗುಣಿ ಮುಖ್ಯರಸ್ತೆ, ಬಾನಹಳ್ಳಿ–ಸಾರಗೋಡು ರಸ್ತೆ, ಬಣಕಲ್ ಮತ್ತಿಕಟ್ಟೆ ರಸ್ತೆಗಳಲ್ಲಿ ಅಡ್ಡಲಾಗಿ ಮರಗಳು ಬಿದ್ದಿವೆ.</p>.<p>ಮೂಡಿಗೆರೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆ, ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಕಡಿತವಾಗಿದೆ. 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.</p>.<p>ಕೊಟ್ಟಿಗೆಹಾರ, ಬಾಳೂರು, ಬಣಕಲ್, ತರುವೆ, ನಿಡುವಾಳೆ, ಕಲ್ಲುಳಿಯಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಕೊಟ್ಟಿಗೆಹಾರದಲ್ಲಿ 33.14 ಸೆಂ.ಮೀ, ಗೋಣಿಬೀಡಿನಲ್ಲಿ 28.65 ಸೆಂ.ಮೀ ಮಳೆಯಾಗಿದೆ.</p>.<p>ಕಳಸ ಬಳಿಯ ಹೆಬ್ಬೊಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ. ಶೃಂಗೇರಿ ಭಾಗದಲ್ಲಿ ನಾಲ್ಕು ಕಡೆ ವಿದ್ಯುತ್ ಕಂಬಗಳು ಬಿದ್ದಿವೆ. ಕೊಪ್ಪ– ಶೃಂಗೇರಿ ಮಾರ್ಗದಲ್ಲಿ ಮರ ಉರುಳಿ ಸಂಚಾರ ಬಂದ್ ಆಗಿತ್ತು.</p>.<p>ತರೀಕೆರೆಯಲ್ಲಿ ಆರ್ಎಂಸಿ ಯಾರ್ಡ್ನಲ್ಲಿ ಮರವೊಂದು ಉರುಳಿ ಬಿದ್ದಿದೆ. ಕೊಪ್ಪ, ಎನ್.ಆರ್.ಪುರ, ತರೀಕೆರೆ ಸಹಿತ ವಿವಿಧಡೆ ಉತ್ತಮ ಮಳೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>