ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮತ್ತೆ ಮುನ್ನೆಲೆಗೆ ಮುತ್ತೂಡಿ–ಎನ್.ಆರ್.ಪುರ ರಸ್ತೆ ಮರು ನಿರ್ಮಾಣ ಯೋಜನೆ

ಭದ್ರಾ ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆ: ಸ್ಥಳೀಯರಿಂದ ಹೆಚ್ಚಿದ ಒತ್ತಡ
Published : 1 ಸೆಪ್ಟೆಂಬರ್ 2024, 6:57 IST
Last Updated : 1 ಸೆಪ್ಟೆಂಬರ್ 2024, 6:57 IST
ಫಾಲೋ ಮಾಡಿ
Comments
ಇಂದಿರಾ ಗಾಂಧಿ ಕಾಲದಲ್ಲೇ ಹಣ ನಿಗದಿ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ಇಂದಿರಾ ಗಾಂಧಿ ಅವರಿಗೂ ಸ್ಥಳೀಯರು ಈ ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದರು. ಬಳಿಕ 1978–79ರಲ್ಲೇ ₹33.70 ಲಕ್ಷ ಅನುದಾನ ಬಿಡುಗೆಯಾಗಿತ್ತು. ಈ ಪೈಕಿ ₹22.50 ಲಕ್ಷದಲ್ಲಿ ಎನ್.ಆರ್.ಪುರದಿಂದ ಕೂಸಗಲ್ ತನಕ ರಸ್ತೆ ನಿರ್ಮಾಣವಾಗಿತ್ತು ಎಂದು ಸ್ಥಳೀಯ ಮುಖಂಡ ಕೃಷ್ಣಯ್ಯ ನೆನಪಿಸಿಕೊಳ್ಳುತ್ತಾರೆ. ಅಭಯಾರಣ್ಯದ ವ್ಯಾಪ್ತಿಗೆ ಈ ರಸ್ತೆ ಸೇರಿದ್ದರಿಂದ ಅನುದಾನ ಹಿಂದಕ್ಕೆ ಹೋಗಿದೆ. ಈ ಮೊದಲೇ ಇದ್ದ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ರಾಜ್ಯದ ಬಂಡಿಪುರ ಸೇರಿ ಬೇರೆ ಬೇರೆ ಅಭಯಾರಣ್ಯಗಳಲ್ಲಿ ಅವಕಾಶ ಇದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ರಸ್ತೆಯನ್ನೂ ಅಭಿವೃದ್ಧಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ವೈಲ್ಡ್ ಕ್ಯಾಟ್–ಸಿ ವಿರೋಧ
ಭದ್ರಾ ಅಭಯಾರಣ್ಯದಲ್ಲಿ ಹಾದು ಹೋಗುವ ಈ ರಸ್ತೆ ಅಭಿವೃದ್ಧಿಗೆ ವನ್ಯಜೀವಿ ಸಂರಕ್ಷಣಾ ಕ್ರಿಯಾತಂಡ (ವೈಲ್ಟ್‌ ಕ್ಯಾಟ್–ಸಿ) ವಿರೋಧ ವ್ಯಕ್ತಪಡಿಸಿದೆ. ಒಟ್ಟು 500 ಚದರ ಕಿಲೋ ಮೀಟರ್ ವಿಸ್ತಾರದ ಈ ಅಭಯಾರಣ್ಯವನ್ನು 1998ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಹುಲಿ ಚಿರತೆ ಆನೆ ಕರಡಿ ಜಿಂಕೆ ಸೇರಿದಂತೆ ಪ್ರಾಣಿ-ಪಕ್ಷಿಗಳ ಸಂತತಿ ಇದೆ ಪರಿಸರವಾದಿಗಳಾದ ಡಿ.ವಿ.ಗಿರೀಶ್ ಸ.ಗಿರಿಜಾಶಂಕರ ಶ್ರೀದೇವ್ ಹುಲಿಕೆರೆ ಹೇಳಿದ್ದಾರೆ. 2008ರಲ್ಲಿ ಈ ಅಭಯಾರಣ್ಯವನ್ನು ಅತ್ಯಂತ ಜಟಿಲ ಹುಲಿ ಅವಾಸ ಸ್ಥಾನ ಎಂದು ಘೋಷಿಸಲಾಗಿದೆ. ಜತೆಗೆ ವರ್ಷಪೂರ್ತಿ ಅಭಯಾರಣ್ಯದ ಪ್ರಾಣಿ ಸಂಕುಲಕ್ಕೆ ನೀರುಣಿಸುವ ಜತೆಗೆ ಭದ್ರಾ ನದಿಗೆ ಜೀವಸೆಲೆಯಂತಿರುವ ಉಪ ನದಿಗಳಾದ ತಡಬೇಹಳ್ಳ ಹೆಬ್ಬೇಹಳ್ಳ ಹಾಗೂ ಸೋಮವಾಹಿನಿ ನದಿಗಳು ಸಹ ಇವೆ. ಇಂತಹ ಪ್ರದೇಶದಲ್ಲಿ ಮತ್ತೆ ಸಾರಿಗೆ ಸಂಪರ್ಕಕ್ಕೆ ತೆರೆಮರೆಯಲ್ಲಿ ಯತ್ನ ನಡೆಯುತ್ತಿದೆ. ರಸ್ತೆ ಅಭಿವೃದ್ಧಿಯಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT