ಇಂದಿರಾ ಗಾಂಧಿ ಕಾಲದಲ್ಲೇ ಹಣ ನಿಗದಿ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ಇಂದಿರಾ ಗಾಂಧಿ ಅವರಿಗೂ ಸ್ಥಳೀಯರು ಈ ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದರು. ಬಳಿಕ 1978–79ರಲ್ಲೇ ₹33.70 ಲಕ್ಷ ಅನುದಾನ ಬಿಡುಗೆಯಾಗಿತ್ತು. ಈ ಪೈಕಿ ₹22.50 ಲಕ್ಷದಲ್ಲಿ ಎನ್.ಆರ್.ಪುರದಿಂದ ಕೂಸಗಲ್ ತನಕ ರಸ್ತೆ ನಿರ್ಮಾಣವಾಗಿತ್ತು ಎಂದು ಸ್ಥಳೀಯ ಮುಖಂಡ ಕೃಷ್ಣಯ್ಯ ನೆನಪಿಸಿಕೊಳ್ಳುತ್ತಾರೆ. ಅಭಯಾರಣ್ಯದ ವ್ಯಾಪ್ತಿಗೆ ಈ ರಸ್ತೆ ಸೇರಿದ್ದರಿಂದ ಅನುದಾನ ಹಿಂದಕ್ಕೆ ಹೋಗಿದೆ. ಈ ಮೊದಲೇ ಇದ್ದ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ರಾಜ್ಯದ ಬಂಡಿಪುರ ಸೇರಿ ಬೇರೆ ಬೇರೆ ಅಭಯಾರಣ್ಯಗಳಲ್ಲಿ ಅವಕಾಶ ಇದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ರಸ್ತೆಯನ್ನೂ ಅಭಿವೃದ್ಧಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.