<p><strong>ನರಸಿಂಹರಾಜಪುರ</strong>: ‘ಸರ್ಕಾರ ನೀಡುವ ಸಾಧನ, ಸಲಕರಣೆಗಳನ್ನು ಬಳಸಿಕೊಂಡು ಅಂಗವಿಕಲ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸೇವ್ಯಾನಾಯಕ್ ಹೇಳಿದರು.</p>.<p>ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವೈದ್ಯಕೀಯ ಮೌಲ್ಯಾಂಕನ ಆಧಾರದ ಮೇಲೆ ಶಿಕ್ಷಣ ಇಲಾಖೆ, ಅಲಿಂಕೊ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಅಂಗವಿಕಲ ಮಕ್ಕಳಿಗೆ ಸಾಧನ–ಸಲಕರಣೆ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಪಿಜಿಯೋ ಥೆರೆಪಿಸ್ಟ್ ನಿಖಿಲ್ ಮಾತನಾಡಿ, ‘ಅಂಗವಿಕಲ ಮಕ್ಕಳನ್ನು ಇತರೆ ಮಕ್ಕಳ ಜೊತೆ ಬೆರೆಯಲು ಬಿಡಬೇಕು. ಇದರಿಂದ ಶಿಕ್ಷಣ ಕಲಿಯಲು ಸಹಕಾರವಾಗಲಿದೆ’ ಎಂದರು.</p>.<p>ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸಿ. ತಿಮ್ಮೇಶ್ ಮಾತನಾಡಿ, ‘ಅಂಗವಿಕಲತೆ ಶಾಪವಲ್ಲ. ಅಂಗವಿಕಲ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಕಲ್ಪಿಸಿದರೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ’ ಎಂದರು.</p>.<p>ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತ, ಸಿ.ಆರ್.ಪಿ ಅನಂತಪ್ಪ, ಬಿ.ಐ.ಇ.ಆರ್.ಟಿ. ಶಿಶುನಾಳಪ್ಪ, ತಿಮ್ಮೇಶ್, ರಾಜೇಶ್ವರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ನಯನ, ಅಲೋಕ್, ಮಮತ, ಆಶಾ, ಅನ್ನಮ್ಮ ಇದ್ದರು. 13 ಅಂಗವಿಕಲ ಮಕ್ಕಳಿಗೆ ಸಾಧನ–ಸಲಕರಣ ಕಿಟ್ ವಿತರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ</strong>: ‘ಸರ್ಕಾರ ನೀಡುವ ಸಾಧನ, ಸಲಕರಣೆಗಳನ್ನು ಬಳಸಿಕೊಂಡು ಅಂಗವಿಕಲ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸೇವ್ಯಾನಾಯಕ್ ಹೇಳಿದರು.</p>.<p>ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವೈದ್ಯಕೀಯ ಮೌಲ್ಯಾಂಕನ ಆಧಾರದ ಮೇಲೆ ಶಿಕ್ಷಣ ಇಲಾಖೆ, ಅಲಿಂಕೊ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಅಂಗವಿಕಲ ಮಕ್ಕಳಿಗೆ ಸಾಧನ–ಸಲಕರಣೆ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಪಿಜಿಯೋ ಥೆರೆಪಿಸ್ಟ್ ನಿಖಿಲ್ ಮಾತನಾಡಿ, ‘ಅಂಗವಿಕಲ ಮಕ್ಕಳನ್ನು ಇತರೆ ಮಕ್ಕಳ ಜೊತೆ ಬೆರೆಯಲು ಬಿಡಬೇಕು. ಇದರಿಂದ ಶಿಕ್ಷಣ ಕಲಿಯಲು ಸಹಕಾರವಾಗಲಿದೆ’ ಎಂದರು.</p>.<p>ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸಿ. ತಿಮ್ಮೇಶ್ ಮಾತನಾಡಿ, ‘ಅಂಗವಿಕಲತೆ ಶಾಪವಲ್ಲ. ಅಂಗವಿಕಲ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಕಲ್ಪಿಸಿದರೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ’ ಎಂದರು.</p>.<p>ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತ, ಸಿ.ಆರ್.ಪಿ ಅನಂತಪ್ಪ, ಬಿ.ಐ.ಇ.ಆರ್.ಟಿ. ಶಿಶುನಾಳಪ್ಪ, ತಿಮ್ಮೇಶ್, ರಾಜೇಶ್ವರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ನಯನ, ಅಲೋಕ್, ಮಮತ, ಆಶಾ, ಅನ್ನಮ್ಮ ಇದ್ದರು. 13 ಅಂಗವಿಕಲ ಮಕ್ಕಳಿಗೆ ಸಾಧನ–ಸಲಕರಣ ಕಿಟ್ ವಿತರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>