ಜಾಗೃತೆ ವಹಿಸಿ
ಮಲೆನಾಡಿನ ಭಾಗದ ಉರಗ ಪ್ರೇಮಿಗಳು ಹಾವು ಸಂರಕ್ಷಣೆ ಮಾಡುವಾಗ ಎಚ್ಚರ ವಹಿಸಬೇಕು ಹಾಗೂ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು. ಹಾವುಗಳನ್ನು ಹಿಡಿದು ಹೆಚ್ಚು ಆಡಿಸುವುದನ್ನು ನಿಲ್ಲಿಸಬೇಕು. ಕಳೆದ ಕೆಲವು ವರ್ಷದ ಹಿಂದೆ ಉರಗ ಪ್ರೇಮಿ ಕಳಸದ ಪ್ರಫುಲ್ಲ ದಾಸ್ ಭಟ್, ಈಚೆಗೆ ಚಿಕ್ಕಮಗಳೂರಿನ ಸ್ನೇಕ್ ನರೇಶ್ ಹಾವಿನಿಂದಲೇ ಮೃತರಾಗಿದ್ದಾರೆ. ಹಾವು ಸಂರಕ್ಷಣೆ ಮಾಡುವುದು ಉತ್ತಮ ಕೆಲಸ. ಆದರೆ, ಸಂರಕ್ಷಣೆ ಮಾಡಲು ಹೋಗಿ ಅಮೂಲ್ಯವಾದ ಜೀವ ಕಳೆದುಕೊಳ್ಳಬಾರದು ಎಂದು ಸಮಾಜ ಸೇವಕ ಸಂಜಯ್ ಗೌಡ ಕೊಟ್ಟಿಗೆಹಾರ ಮನವಿ ಮಾಡಿದ್ದಾರೆ.