ತೋರಣ ಮಾವು ಆಲ್ದೂರುಪುರ ಗ್ರಾಮದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ 27 ರಸ್ತೆ ಬದಿಯ ತಿರುವಿನಲ್ಲಿ ಒಣಗಿ ನಿಂತಿರುವ ಬೃಹತ್ ಗಾತ್ರದ ಮರ
ಮಳೆಗಾಲದಲ್ಲಿ ವಿದ್ಯುತ್ ತಂತಿ ತುಂಡಾಗದಂತೆ ಮುಂಜಾಗ್ರತಾ ಕ್ರಮವಾಗಿ ಅಡ್ಡಲಾಗಿ ಬಂದಿರುವ ಸಣ್ಣ–ಪುಟ್ಟ ಕೊಂಬೆಗಳನ್ನು ಮಾತ್ರ ತೆರವುಗೊಳಿಸಲು ಅವಕಾಶ ಮೆಸ್ಕಾಂಗೆ ಇದ್ದು ಸಂಪೂರ್ಣವಾಗಿ ಒಣಗಿರುವ ಕಾಡು ಜಾತಿಯ ಮರಗಳನ್ನು ಅರಣ್ಯ ಇಲಾಖೆಯವರೇ ತೆರವುಗೊಳಿಸಬೇಕು
ಕೆ.ಸತೀಶ್ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ರಸ್ತೆ ಬದಿಗಳಲ್ಲಿ ಅಪಾಯದ ಹಂತದಲ್ಲಿ ಇರುವ ಮರಗಳ ಮಾಹಿತಿಯನ್ನು ಸಾರ್ವಜನಿಕರು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿ ತೆರವುಗೊಳಿಸಲು ಸಹಕರಿಸಬೇಕು.ಈ ಕುರಿತು ಶೀಘ್ರ ಕ್ರಮ ಕೈಗೊಂಡು ರಸ್ತೆ ಬದಿ ಒಣಗಿದ ಮರಗಳನ್ನು ಕತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು
ರಮೇಶ್ ಬಾಬು ಚಿಕ್ಕಮಗಳೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ