ರಸ್ತೆ ಗುಂಡಿಗೆ ಸುರಿದಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬೆಲ್ಲ ಹರಡಿರುವುದು
‘ಶಾಸಕರು ಕ್ರಮ ವಹಿಸಬೇಕು’
ಒಟ್ಟು 6 ಕಿ.ಮೀನಷ್ಟು ರಸ್ತೆ ಕೆಟ್ಟು ಹೋಗಿದ್ದು ಕಾಮಗಾರಿ ಮಾಡುವಾಗ ಗುಂಡಿಗಳಿಗೆ ಜಲ್ಲಿ ತುಂಬಿ ನಂತರ ಟಾರ್ ಹಾಕಿ ದುರಸ್ತಿ ಮಾಡಬೇಕಿತ್ತು. ಆದರೆ ಇಲ್ಲಿ ಗುಂಡಿಗಳಲ್ಲಿ ಕೇವಲ ಜಲ್ಲಿ ಸುರಿದು ಹೋಗಿದ್ದಾರೆ. ವಾಹನ ಸಂಚಾರದಿಂದ ಜಲ್ಲಿ ರಸ್ತೆ ತುಂಬ ಹರಡಿವೆ. ದುರಸ್ತಿ ಕಾಮಗಾರಿ ನಿರ್ವಹಿಸುವರ ವಿರುದ್ಧ ಶಾಸಕರು ಕ್ರಮ ವಹಿಸಬೇಕು. ದುರಂತ ಸಂಭವಿಸಿದ ಮೇಲೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಒದಗಿಸಿದರೆ ಏನು ಪ್ರಯೋಜನ’ ಎಂದು ಕರ್ನಾಟಕ ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಪ್ರಶ್ನಿಸಿದರು.