<p><strong>ಮೊಳಕಾಲ್ಮುರು:</strong> ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ತಾಲ್ಲೂಕಿನಾದ್ಯಂತ ಸಡಗರದಿಂದ ಆಚರಿಸಿದರು.</p>.<p>ಪಟ್ಟಣದ ಕೆಇಬಿ ವೃತ್ತದಲ್ಲಿರುವ ದರ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿ, ಮುಬಾರಕ್ ಮಸೀದಿ ಹಾಗೂ ದರ್ಗಾ ಮಸೀದಿಗೆ ಸಂಬಂಧಪಟ್ಟವರು ಮತ್ತು ಸರ್ಕಾರಿ ಜ್ಯೂನಿಯರ್ ಕಾಲೇಜು ಹಿಂಭಾಗದ ಮೈದಾನದಲ್ಲಿ ರೆಹಮಾನಿಯಾ ಮತು ಬಿಲಾಲ್ ಮಸೀದಿಗೆ ಸಂಬಂಧಪಟ್ಟವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಮೆರವಣಿಗೆಯಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ಕೋರಿದರು. ಎಲ್ಲಾ ಮಸೀದಿಯವರು ಪೊಲೀಸ್ ಇಲಾಖೆ ನೀಡಿದ್ದ ಸಮಯಕ್ಕೆ ಪ್ರತ್ಯೇಕವಾಗಿ ಬಂದು ಪ್ರಾರ್ಥನೆ ಸಲ್ಲಿಸಿದರು.</p>.<p>ಮುತವಲ್ಲಿಗಳಾದ ದರ್ಗಾದ ಖಾದರ್ ಆಲಿ, ಜಾಮೀಯಾದ ಸೈಯದ್ ನಬೀ, ರಹಮಾನಿಯಾದ ಎಂ. ಆಸೀಫ್ ಉಲ್ಲಾ, ಮೊಬಾರಕ್ನ ಸನಾವುಲ್ಲಾ, ಬಿಲಾಲ್ನ ಮಹಮದ್ ಒಬೇದುಲ್ಲಾ ಅವರು ಸಾಮೂಹಿಕ ಪ್ರಾರ್ಥನೆ ನೇತೃತ್ವ ವಹಿಸಿದ್ದರು.</p>.<p>ತಾಲ್ಲೂಕಿನ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಊಡೇವು, ಹಾನಗಲ್, ನಾಗಸಮುದ್ರ, ರಾಂಪುರ, ಬೊಮ್ಮಕ್ಕನಹಳ್ಳಿ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ತಾಲ್ಲೂಕಿನಾದ್ಯಂತ ಸಡಗರದಿಂದ ಆಚರಿಸಿದರು.</p>.<p>ಪಟ್ಟಣದ ಕೆಇಬಿ ವೃತ್ತದಲ್ಲಿರುವ ದರ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿ, ಮುಬಾರಕ್ ಮಸೀದಿ ಹಾಗೂ ದರ್ಗಾ ಮಸೀದಿಗೆ ಸಂಬಂಧಪಟ್ಟವರು ಮತ್ತು ಸರ್ಕಾರಿ ಜ್ಯೂನಿಯರ್ ಕಾಲೇಜು ಹಿಂಭಾಗದ ಮೈದಾನದಲ್ಲಿ ರೆಹಮಾನಿಯಾ ಮತು ಬಿಲಾಲ್ ಮಸೀದಿಗೆ ಸಂಬಂಧಪಟ್ಟವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಮೆರವಣಿಗೆಯಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ಕೋರಿದರು. ಎಲ್ಲಾ ಮಸೀದಿಯವರು ಪೊಲೀಸ್ ಇಲಾಖೆ ನೀಡಿದ್ದ ಸಮಯಕ್ಕೆ ಪ್ರತ್ಯೇಕವಾಗಿ ಬಂದು ಪ್ರಾರ್ಥನೆ ಸಲ್ಲಿಸಿದರು.</p>.<p>ಮುತವಲ್ಲಿಗಳಾದ ದರ್ಗಾದ ಖಾದರ್ ಆಲಿ, ಜಾಮೀಯಾದ ಸೈಯದ್ ನಬೀ, ರಹಮಾನಿಯಾದ ಎಂ. ಆಸೀಫ್ ಉಲ್ಲಾ, ಮೊಬಾರಕ್ನ ಸನಾವುಲ್ಲಾ, ಬಿಲಾಲ್ನ ಮಹಮದ್ ಒಬೇದುಲ್ಲಾ ಅವರು ಸಾಮೂಹಿಕ ಪ್ರಾರ್ಥನೆ ನೇತೃತ್ವ ವಹಿಸಿದ್ದರು.</p>.<p>ತಾಲ್ಲೂಕಿನ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಊಡೇವು, ಹಾನಗಲ್, ನಾಗಸಮುದ್ರ, ರಾಂಪುರ, ಬೊಮ್ಮಕ್ಕನಹಳ್ಳಿ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>