ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ನೆನೆವ ದಿನ ಏಕಾದಶಿ

Last Updated 11 ಜುಲೈ 2022, 2:10 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ಹಿರಿಯರ ಸಮಾಧಿಗೆ ಪೂಜೆ (ಕಲ್ಬಾಣ ಪೂಜೆ) ಸಲ್ಲಿಸುವ ಮೂಲಕ ಹಿರಿಯರನ್ನು ನೆನೆವ ಸುದಿನ ಏಕಾದಶಿ ಆಚರಿಸಿದರು.

‘ಪ್ರತಿವರ್ಷ ಏಕಾದಶಿಯಂದು ಊರಿನ ಎಲ್ಲರೂ ಒಟ್ಟಾಗಿ ಒಂದೇ ಕಡೆ ಪೂಜೆ ಸಲ್ಲಿಸುತ್ತೇವೆ. ಹಬ್ಬದ ಮೂರು ದಿನಕ್ಕೂ ಮುಂಚೆ ಮನೆಯಲ್ಲಿ ಒಬ್ಬರು ಉಪವಾಸ ವ್ರತ ಆರಂಭಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆಯಿಂದ ಮನೆಯಲ್ಲಿ ಒಲೆ ಹಚ್ಚುವುದಿಲ್ಲ. ಕಡಲೆಹಿಟ್ಟು, ಅಕ್ಕಿಹಿಟ್ಟಿನ ಉಂಡೆ ಸೇರಿ ಹಲವು ರೀತಿಯ ಉಂಡೆ, ಹೆಸರು ಬೇಳೆ ಕೋಸಂಬರಿ ತಯಾರಿಸಿಕೊಳ್ಳಲಾಗುತ್ತದೆ. ನಂತರ ಹಿರಿಯರ ಸಮಾಧಿ ಬಳಿ ತೆರಳಿ ಅಲ್ಲಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಲಾಗುತ್ತದೆ. ಎಲ್ಲರೂ ಅಲ್ಲೇ ಊಟ ಮಾಡುವ ಮೂಲಕ ಉಪವಾಸ ಕೈ ಬಿಡಲಾಗುತ್ತದೆ. ಮನೆಗೆ ಬಂದು ಮುದ್ದೆ, ಸಾಂಬಾರು ಮಾಡಿ ಊಟ ಮಾಡುತ್ತೇವೆ’ ಎನ್ನುತ್ತಾರೆ ಕಾರೇಹಳ್ಳಿ ಅಜಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT