‘ಪ್ರತಿವರ್ಷ ಏಕಾದಶಿಯಂದು ಊರಿನ ಎಲ್ಲರೂ ಒಟ್ಟಾಗಿ ಒಂದೇ ಕಡೆ ಪೂಜೆ ಸಲ್ಲಿಸುತ್ತೇವೆ. ಹಬ್ಬದ ಮೂರು ದಿನಕ್ಕೂ ಮುಂಚೆ ಮನೆಯಲ್ಲಿ ಒಬ್ಬರು ಉಪವಾಸ ವ್ರತ ಆರಂಭಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆಯಿಂದ ಮನೆಯಲ್ಲಿ ಒಲೆ ಹಚ್ಚುವುದಿಲ್ಲ. ಕಡಲೆಹಿಟ್ಟು, ಅಕ್ಕಿಹಿಟ್ಟಿನ ಉಂಡೆ ಸೇರಿ ಹಲವು ರೀತಿಯ ಉಂಡೆ, ಹೆಸರು ಬೇಳೆ ಕೋಸಂಬರಿ ತಯಾರಿಸಿಕೊಳ್ಳಲಾಗುತ್ತದೆ. ನಂತರ ಹಿರಿಯರ ಸಮಾಧಿ ಬಳಿ ತೆರಳಿ ಅಲ್ಲಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಲಾಗುತ್ತದೆ. ಎಲ್ಲರೂ ಅಲ್ಲೇ ಊಟ ಮಾಡುವ ಮೂಲಕ ಉಪವಾಸ ಕೈ ಬಿಡಲಾಗುತ್ತದೆ. ಮನೆಗೆ ಬಂದು ಮುದ್ದೆ, ಸಾಂಬಾರು ಮಾಡಿ ಊಟ ಮಾಡುತ್ತೇವೆ’ ಎನ್ನುತ್ತಾರೆ ಕಾರೇಹಳ್ಳಿ ಅಜಯ್.